Samantha on Death: ಸಾವಿನ ಬಗ್ಗೆ ಮಾತಾಡ್ತಿದ್ದಾರೆ ಸಮಂತಾ..ಟ್ಯಾಲೆಂಟೆಡ್‌ ನಟಿಗೆ ಏನಾಯ್ತು!

By Contributor AsianetFirst Published Feb 26, 2022, 5:00 PM IST
Highlights

ಬೋಲ್ಡ್ ಆಂಡ್ ಬ್ಯೂಟಿಫುಲ್ ನಟಿ ಅಂತ ಕರೆಸಿಕೊಂಡ ಚೆಲುವೆ ಸಮಂತಾ.. 35ರಲ್ಲಿರುವ ಈ ಪ್ರತಿಭಾವಂತ ನಟಿ ಈಗ್ಲೇ ಯಾಕೆ ಸಾವಿನ ಬಗ್ಗೆ ಮಾತಾಡ್ತಿದ್ದಾರೆ? ಅಂಥಾದ್ದೇನಾಗ್ತಿದೆ ಅವರ ಲೈಫಲ್ಲಿ..?
 

ಸಮಂತಾ ರುತ್ ಪ್ರಭು (Samantha Ruth Prabhu) ಸದ್ಯ ಟಾಲಿವುಡ್‌ನ (Tollywood) ಬಹು ಬೇಡಿಕೆಯ ನಟಿ. ಸೌತ್‌ ಇಂಡಿಯನ್ ಫಿಲಂ (Film) ಇಂಡಸ್ಟ್ರಿಯಲ್ಲಿ ಅವರಿಗೆ ಬಹುದೊಡ್ಡ ಹೆಸರಿದೆ. ಆದರೆ ಸಮಂತಾ ಈಚಿನ ದಿನಗಳಲ್ಲಿ ತನ್ನ ನಟನೆ, ಪಾತ್ರಗಳಿಗೆ ಸುದ್ದಿಯಾದಷ್ಟೇ ವೈಯಕ್ತಿಕ ಕಾರಣಕ್ಕೂ ಸುದ್ದಿಯಲ್ಲಿರುತ್ತಿದ್ದಾರೆ. ನಾಗಚೈತನ್ಯ (Naga Chaitanya) ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಾಗ ಈ ಜೋಡಿಯ ಮುದ್ದಾದ ಫೋಟೋಗಳಿಗೆ ಪಾಪರಾಜಿಗಳು ಮುಗಿಬೀಳ್ತಿದ್ರು. ಆದರೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಮದುವೆಯಾದ ನಾಲ್ಕೇ ವರ್ಷಕ್ಕೆ ಈ ಜನಪ್ರಿಯ ಜೋಡಿ ತಮ್ಮ ವಿಚ್ಛೇದನ (Divorce) ಘೋಷಿಸಿತು. ಆ ಹೊತ್ತಿಗೆ ಈ ಜೋಡಿಯ ಸುದ್ದಿ ವಿಶ್ವಮಟ್ಟದಲ್ಲಿ ಸುದ್ದಿಯಾಯ್ತು. ಇವರು ಮತ್ತೆ ಒಂದಾಗಬೇಕು ಅಂತ ಸಾಕಷ್ಟು ಜನ ಈ ಜೋಡಿ ಪರ ನಿಂತರು. ಆದರೆ ಇವರಿಬ್ಬರೂ ಸ್ವತಂತ್ರವಾಗಿಯೇ ಮುಂದುವರಿಯಲು ಬಯಸಿದರು. ಅಪ್ಪಿತಪ್ಪಿಯೂ ಒಬ್ಬರ ಬಗ್ಗೆ ಒಬ್ಬರು ದೂರಲಿಲ್ಲ, ಹೀಗಳೆದು, ಪರಸ್ಪರರ ಘನತೆಗೆ ಕುಂದು ತರೋ ಹಾಗೆ ಮಾತನಾಡಲಿಲ್ಲ. ಆದರೆ ತಮ್ಮ ಬ್ರೇಕ್‌ಅಪ್ ತಂದುಕೊಟ್ಟ ಸಮಸ್ಯೆಗಳ ಬಗ್ಗೆ, ತಮ್ಮ ವೈಯುಕ್ತಿಕ ಸಂಗತಿಯನ್ನು ಜನ ಸುಮ್ ಸುಮ್ನೇ ಹೈಪ್ ಮಾಡ್ತಿರೋ ಬಗ್ಗೆ ಇಬ್ಬರೂ ಬೇಜಾರು ತೋಡಿಕೊಂಡರು. 

ಈ ಹಿಂದೆ ಸಮಂತಾ ಮಾತನಾಡುತ್ತಾ, 'ಡಿವೋರ್ಸ್ ಆದಮೇಲಿನ ಲೈಫಿನ ಬಗ್ಗೆ ಬಹಳ ಭಯ ಪಟ್ಟಿದ್ದೆ. ನನಗೆ ಇದನ್ನೆಲ್ಲ ಎದುರಿಸಿ ಬದುಕಲಿಕ್ಕಾಗುತ್ತಾ ಎನ್ನುವ ಗಾಬರಿಯಲ್ಲಿ ಎಷ್ಟೋ ರಾತ್ರಿಗಳನ್ನು ನಿದ್ದೆ ಇಲ್ಲದೇ ಕಳೆದಿದ್ದೇನೆ. ಆದರೆ ಅದೆಲ್ಲ ಕ್ಷುಲ್ಲಕ ಆತಂಕ ಅನ್ನೋದು ಈಗ ಗೊತ್ತಾಗ್ತಿದೆ. ಜೊತೆಗೆ ನಾನು ಎಷ್ಟು ಸ್ಟ್ರಾಂಗ್ ಇದ್ದೀನಿ ಅನ್ನೋದೂ ರಿವೀಲ್ ಆಗ್ತಿದೆ' ಎನ್ನೋ ಮಾತು ಹೇಳಿದರು. ಸೋ, ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು. ಇನ್ನು ಈ ಜೋಡಿ ಒಂದಾಗಲ್ಲ ಅನ್ನೋ ನಿರಾಸೆ, ಆದ್ರೂ ಈ ಹುಡುಗಿ ಧೈರ್ಯ ತಂದುಕೊಂಡಿದ್ದಾಳಲ್ಲಾ ಅನ್ನೋ ನೆಮ್ಮದಿ ಅವರ ಅಭಿಮಾನಿಗಳದ್ದು. 

Latest Videos

Alia Bhatಗೆ ಸದ್ಯ ಮದ್ವೆ ಬೇಡ್ವಂತೆ, ಲವ್ ಗಿವ್ವು ಪರ್ವಾಗಿಲ್ವಂತೆ!

ಇಷ್ಟೆಲ್ಲ ಆದರೂ ಸಮಂತಾ ಆಗಾಗ ಸೋಷಿಯಲ್ ಮೀಡಿಯಾ (Social media) ಗಳಲ್ಲಿ ತಮ್ಮ ನೋವು ತೋಡಿಕೊಳ್ಳುತ್ತಲೇ ಇದ್ದಾರೆ. ಮೇಲ್ನೋಟಕ್ಕೆ ಅವರು ಆರಾಮವಾಗಿರುವಂತೆ, ಖುಷಿಯಿಂದ ಬದುಕುತ್ತಿರುವ ಹಾಗೆ ತೋರಿಸಿಕೊಂಡರೂ ಮನಸ್ಸಲ್ಲಿರುವ ಬೇಸರ ಇನ್ನೂ ಗುಣ ಆಗಿಲ್ಲ ಅನ್ನೋದು ಅವರ ಸ್ಟೇಟಸ್ ನಿಂದ ಗೊತ್ತಾಗುತ್ತೆ. ಅವರು ಇತ್ತೀಚೆಗೆ ಸ್ವಿಜರ್‌ಲ್ಯಾಂಡ್‌ನಲ್ಲಿ ಹಿಮದಲ್ಲಿ ಸ್ಕೀಯಿಂಗ್ ಮಾಡುತ್ತಾ ಇಬ್ಬರು ವಿದೇಶಿ ದಂಪತಿಗಳಿಂದ ತನ್ನ ಜೀವನಾಸಕ್ತಿ ಇನ್ನೂ ಉಳಿದುಕೊಂಡಿದೆ ಅನ್ನೋ ಥರ ಮಾತನಾಡಿದ್ರು. ಆಗಾಗ ಕೆಲವು ನೋವಿನ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿರುತ್ತಾರೆ. ಇದೆಲ್ಲ ಸಮಂತಾ ಇನ್ನೂ ಒಂಟಿತನದ ನೋವಿನಿಂದ ಹೊರಬಂದಿಲ್ಲ ಅನ್ನೋದನ್ನು ಹೇಳುತ್ತೆ. 

ಇದೀಗ ಸಮಂತಾ ತಮ್ಮ ನೋವಿಂದ ಆಚೆ ಬರಲು ಪುಸ್ತಕದ ಮೊರೆ ಹೋಗಿದ್ದಾರೆ. ಇದರಲ್ಲಿನ ತತ್ವಜ್ಞಾನ ಅವರಿಗೆ ಕೊಂಚ ರಿಲೀಫ್‌ ನೀಡಿದಂತಿದೆ. ಸಮಂತಾ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಾಲಿವುಡ್‌ನ ವಿಲ್‌ ಸ್ಮಿತ್ (Will Smith) ಬರೆದ ಸಾಲುಗಳನ್ನು ಕೋಟ್ ಮಾಡಿದ್ದಾರೆ. ವಿಲ್ ಸ್ಮಿತ್ ಲೈಫು, ಡಿವೋರ್ಸ್, ಅವಮಾನ, ಸಾವು ಕುರಿತಾಗಿ ಬರೆದಿರುವ ಸಾಲುಗಳನ್ನು ತನ್ನ ಲೈಫಿಗೆ ಅನ್ವಯಿಸಿ ಪೋಸ್ಟ್ ಮಾಡಿದಂತಿದೆ. 

Sushmita Sen ಫೋಟೋ ನೋಡಿದ ಧರ್ಮೇಂದ್ರ ಫುಲ್ ಫಿದಾ!

'ಈ ಮೂವತ್ತು ವರ್ಷಗಳಲ್ಲಿ ಸೋಲು, ನಷ್ಟ, ಕಹಿ, ಅವಮಾನ, ಡಿವೋರ್ಸ್ ಹಾಗೂ ಡೆತ್‌ (Death) ಅಥವಾ ಸಾವು ಇವುಗಳ ಜೊತೆಗೆ ಬದುಕಿದ್ದೇನೆ. ಜೀವ ಬೆದರಿಕೆ, ನನ್ನ ಹಣ ಕಸಿಯುವ ಭೀತಿ ಕಂಗೆಡಿಸಿದೆ. ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ. ಕುಟುಂಬ ಒಡೆದುಹೋಗಿದೆ. ಇದೀಗ ಪ್ರತೀದಿನ ಕಾಂಕ್ರೀಟ್ ಮಿಕ್ಸ್ ಮಾಡಿ ಇಟ್ಟಿಗೆಯ ಮೇಲೆ ಇಟ್ಟಿಗೆ ಇಡುತ್ತೇನೆ. ನೀವೇನೇ ಮಾಡಿದರೂ ಇನ್ನೊಂದು ಇಟ್ಟಿಗೆ ನಿಮ್ಮ ಮುಂದಿರುತ್ತದೆ. ಈಗಿರುವ ಒಂದೇ ಪ್ರಶ್ನೆ ಅಂದರೆ ನೀವು ಎದ್ದು ಆ ಇಟ್ಟಿಗೆಯನ್ನು ಇಡಲು ಸಾಧ್ಯವೇ? ' ಎಂಬ ತೀವ್ರತೆಯ ಸಾಲನ್ನು ಸಮಂತಾ ಪೋಸ್ಟ್ ಮಾಡಿದ್ದಾರೆ. ಒಂಟಿತನ, ವೈರಾಗ್ಯ, ಸಾವಿಗೆ ರೂಪಕದ ಹಾಗಿರುವ ಈ ಸಾಲನ್ನು ಸಮಂತಾ ಯಾಕೆ ಪೋಸ್ಟ್ ಮಾಡಿದರು ಅನ್ನೋದು ಅಭಿಮಾನಿಗಳ ಪ್ರಶ್ನೆ. ಬಹುಶಃ ಇದು ಸಮಂತಾ ಅವರ ಸದ್ಯದ ಮನಸ್ಥಿತಿಗೆ ಹೊಂದುವಂತಿದೆ ಎಂಬ ತರ್ಕವನ್ನೂ ಮಾಡುತ್ತಿದ್ದಾರೆ. ಈ ಎಲ್ಲ ಊಹಾಪೋಹಗಳು ಸರಿಯೋ ತಪ್ಪೋ ಗೊತ್ತಿಲ್ಲ, ಆದರೆ ಸಮಂತಾ ನೋವನ್ನು ಮರೆಯಲು ತತ್ವಜ್ಞಾನದ ಮೊರೆ ಹೋಗುತ್ತಿದ್ದಾರೆ ಅನ್ನೋದನ್ನಂತೂ ನಿಜ ಅನಿಸುತ್ತೆ. 

KGF2: ಟ್ರೈಲರ್‌ ಮೊದಲಾ, ಸಾಂಗ್ ಮೊದಲಾ.. ಕಾಯ್ತಿದ್ದ ಫ್ಯಾನ್ಸ್‌ಗೆ ಥ್ರಿಲ್ಲಿಂಗ್‌ ನ್ಯೂಸ್‌
 

click me!