ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!

ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!

Published : Apr 29, 2026, 12:15 PM IST

ನಟ ಅಲ್ಲು ಅರ್ಜುನ್ ಟಾಲಿವುಡ್​​ನಲ್ಲಿ ಪುಷ್ಪ ಸಿನಿಮಾಗಿಯೇ ಸುಮಾರು 5 ವರ್ಷಗಳ ಕಾಲ ತೆಗೆದುಕೊಂಡಿದ್ದಾರೆ. ಪಾರ್ಟ್-1 ಹಾಗೂ ಪಾರ್ಟ್-2 ಸಿನಿಮಾ ಶೂಟಿಂಗ್ ಆಗಿ ತೆರೆಗೆ ಬರೋಕೆ ಕನಿಷ್ಠ 5 ವರ್ಷಗಳು ಹಿಡಿದಿವೆ. ಇದೀಗ ಐಕಾನ್ ಸ್ಟಾರ್ ಹೊಸ ನಿರ್ಧಾರ ತೆಗೆದುಕೊಂಡಿದ್ದಾರೆ, ಏನದು ನೋಡಿ..

ಟಾಲಿವುಡ್​​ನ ಐಕಾನ್ ಸ್ಟಾರ್​ ಅಲ್ಲು ಅರ್ಜುನ್ ಈಗ ನಟ ದರ್ಶನ್​​ರ ಆ ದೊಡ್ಡ ನಿರ್ಧಾವನ್ನ ಫಾಲೋ ಮಾಡುತ್ತಿದ್ದಾರೆ. ಈ ನಿರ್ಧಾರದಿಂದ ಅಲ್ಲು ಮೇಲೆ ಬಂಡವಾಳ ಹೂಡೋಕೆ ಕಾಯುತ್ತಿದ್ದರಿಗೆ ಮರುಭೂಮಿಯಲ್ಲಿ ನೀರು ಸಿಕ್ಕಷ್ಟೇ ಖುಷಿ ತಂದಿದೆ. ಹಾಗಾದ್ರೆ ಅಲ್ಲು ಅರ್ಜುನ್​ ಡಿಸೈಡ್​ ಮಾಡಿರೋ ಆ ವಿಷ್ಯಾ ಏನು..? ನೋಡೋಣ ಬನ್ನಿ..

ಅಲ್ಲು ಸಿನಿ ಜೀವನಕ್ಕೂ ಬಂತು ದಾಸ ಮಾಡಿದ್ದ ಆ ನಿರ್ಧಾರ; ಸಿನಿ ರಂಗದಲ್ಲಿ ಅಲ್ಲು ಹೊಸ ಕ್ರಾಂತಿ!
ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಟಾಲಿವುಡ್​​ನಲ್ಲಿ ಪುಷ್ಪ ಸಿನಿಮಾಗಿಯೇ ಸುಮಾರು 5 ವರ್ಷಗಳ ಕಾಲ ತೆಗೆದುಕೊಂಡಿದ್ದಾರೆ. ಪಾರ್ಟ್-1 ಹಾಗೂ ಪಾರ್ಟ್-2 ಸಿನಿಮಾ ಶೂಟಿಂಗ್ ಆಗಿ ತೆರೆಗೆ ಬರೋಕೆ ಕನಿಷ್ಠ 5 ವರ್ಷಗಳು ಹಿಡಿದಿದ್ವು.

ಅಂದ್ರೆ 1800 ದಿನಗಳಿಗೂ ಹೆಚ್ಚು ಸಮಯ ಪುಷ್ಪ ಪಾರ್ಟ್-1 ಹಾಗೂ ಪಾರ್ಟ್-2 ಚಿತ್ರಕ್ಕೆ ಸಮಯ ನಿಗಧಿ ಆಗಿತ್ತು. ಆದ್ರೆ ಇನ್ಮುಂದೆ ಹಾಗಾಗಲ್ಲ. ಯಾಕಂದ್ರೆ ಕನ್ನಡದ ನಟ ದರ್ಶನ್ ಮಾಡಿದ್ದ ಆ ಗಟ್ಟಿ ನಿರ್ಧಾರವೊಂದನ್ನ ಅಲ್ಲು ಅರ್ಜುನ್​ ತನ್ನ ಸಿನಿ ಜೀವನಕ್ಕೆ ಅಡಾಪ್ಟ್ ಮಾಡಿಕೊಳ್ಳುತ್ತಿದ್ದಾರೆ.

ನಟ ದರ್ಶನ್ ಈಗ ಜೈಲಲ್ಲಿ ಇರಬಹುದು. ಆದ್ರೆ ದಾಸ ಜೈಲಿಗೆ ಹೋಗೋ ಮೊದಲೇ  ಸಿನಿಮಾ ಖರಿಯರ್​​​ನ ದೊಡ್ಡ ನಿರ್ಧಾರವೊಂದನ್ನ ಮಾಡಿದ್ರು. ಯಾವ್ದೇ ಸಿನಿಮಾ ಮಾಡಿದ್ರು ಆ ಚಿತ್ರದ ಕೆಲಸಕಕ್ಕೆ 150 ದಿನ ಮಾತ್ರ ಮೀಸಲಿಡುತ್ತೇನೆ ಅಂದಿದ್ರು. ಈಗ ದೇ ಮಾಧರಿಯನ್ನ ನಟ ಅಲ್ಲು ಅರ್ಜುನ್​ ಫಾಲೋ ಮಾಡೋ ನಿರ್ಧಾರ ಮಾಡಿದ್ದಾರೆ.

ಒಂದು ಚಿತ್ರಕ್ಕೆ 200 ದಿನ ಮಾತ್ರ ಮೀಸಲು.. ಗಟ್ಟಿ ನಿರ್ಧಾರ ಮಾಡಿದ ಅಲ್ಲು
ಅಲ್ಲು ಅರ್ಜುನ್ ಒಂದು ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ ಎಂದರೆ ಆ ಸಿನಿಮಾ ಮುಗಿಯುವವರೆಗೂ ಮತ್ತೊಂದು ಸಿನಿಮಾವನ್ನ ಒಪ್ಪಿಕೊಳ್ಳುತ್ತಿರಲಿಲ್ಲ. ಅದರಲ್ಲೂ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಸಿನಿಮಾಗಳ ಹಾವಳಿ ಹೆಚ್ಚಾದಂತೆ ಎರಡ್ಮೂರು ವರ್ಷಗಳಿಗೆ ಒಂದೇ ಒಂದು ಸಿನಿಮಾ ಮಾಡೋಕೆ ಮಾತ್ರ ಸಾಧ್ಯವಾಗ್ತಿದೆ. ಈ ಕಾರಣದಿಂದ ಚಿತ್ರರಂಗದಲ್ಲಿ ಸಿನಿಮಾಗಳ ಅಭಾವ ಸೃಷ್ಟಿ ಆಗಿದೆ. ಇದಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಅಲ್ಲು ಅರ್ಜುನ್ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಅಂದ್ರೆ ಒಂದು ಸಿನಿಮಾಗೆ ಕೇವಲ 200 ದಿನಗಳನ್ನ ಮಾತ್ರ ನೀಡಲು ನಿರ್ಧರಿಸಿದ್ದಾರಂತೆ.

ಇದರ ಜೊತೆಗೆ ಅಲ್ಲು ಅರ್ಜುನ್ ಆ 200 ದಿನಗಳಲ್ಲಿ ಬರೀ ಒಂದೇ ಸಿನಿಮಾ ಮಾಡಲ್ವಂತೆ. ಮತ್ತೊಂದು ಸಿನಿಮಾ ಕಾಲ್​ ಶೀಟ್​ ಇದ್ರೂ ಟೈಮ್ ಅಡ್ಜೆಸ್ಟ್​ ಮಾಡಿಕೊಂಡು ಕೆಲಸ ಮಾಡುತ್ತಾರಂತೆ. ಅಂದ್ರೆ ರಾತ್ರಿ ಹಗಲು ದುಡಿಯೋ ನಿರ್ಧಾರ ಅಲ್ಲು ಅರ್ಜುನ್ ರದ್ದು. ಈ ನಿರ್ಧಾರದಿಂದ ಹಲವಾರು ಥಿಯೇಟರ್​ಗಳು ಬಾಗಿಲು ಹಾಕುವುದನ್ನ ನಿಲ್ಲಿಸಬಹುದು. ಈ ರೀತಿಯಾದ ನಿರ್ಧಾರವನ್ನ ದೊಡ್ಡ ದೊಡ್ಡ ಕಲಾವಿದರು ತೆಗೆದುಕೊಂಡಿದ್ದೇ ಆಗಿದ್ದಲ್ಲಿ ಸಿನಿಮಾಗಳ ಕೊರತೆ ನಿಗುತ್ತೆ.

ಅಂದಹಾಗೆ ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾ ಮಾಡಿದ್ರೆ ಚಿತ್ರರಂಗದ ಹಲವಾರು ಸಮಸ್ಯೆಗಳಿಗೆ ಬ್ರೇಕ್ ಹಾಕಬಹುದು. ಇದರಿಂದ ಸಿಂಗಲ್ ಸ್ಟ್ರೀನ್ ಥಿಯೇಟರ್ ಗಳು ಎದುರಿಸುವ ಹಲವಾರು ಸಮಸ್ಯೆಗಳು ಸಹ ದೂರವಾಗಲಿದೆ. ಅಲ್ಲು ಅರ್ಜುನ್ ಅವರಂತೆ ಇನ್ನುಳಿದ ನಟರು ಇಂತಹ ನಿರ್ಧಾರ ಮಾಡಬೇಕು ಅನ್ನೋದು ಸಿನು ಮಂದಿಯ ಒತ್ತಾಯವೂ ಹೌದು.

ಸದ್ಯ ಅಲ್ಲು ಅರ್ಜುನ್ ಆಟ್ಲಿ ಜೊತೆ ರಾಕಾ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಬಳಿಕವಷ್ಟೇ 200ದಿನದ ಈ ಸೂತ್ರ ಹಿಡಿಯುವ ಸಾಧ್ಯತೆ ಇದೆ. ಈ ನಿರ್ಧಾರವನ್ನ ಐಕಾನ್ ಸ್ಟಾರ್ ಅನುಸರಿಸಿದ್ದೇ ನಿಜವಾದ್ರೆ ಚಿತ್ರರಂಗದಲ್ಲಿ ಹೊಸ ಕ್ರಾಂತಿಯೇ ಶುರುವಾಗಲಿದೆ. 
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
Read more