
ರಾಧಿಕಾ ನಾರಾಯಣ್ ಎಂದು ಹೆಸರು ಬದಲಾಯಿಸಿಕೊಂಡಿರುವ ರಾಧಿಕಾ ಚೇತನ್ ಅವರಿಗೆ ‘ಮುಂದಿನ ನಿಲ್ದಾಣ’ ಸಿನಿಮಾ ಚಿತ್ರರಂಗಕ್ಕೆ ಮರು ಎಂಟ್ರಿಯಂತೆ. ಈ ಚಿತ್ರದ ಕುರಿತು ರಾಧಿಕಾ ಅವರಿಗೆ ದೊಡ್ಡ ಭರವಸೆ ಇದೆ. ಈಗಾಗಲೇ ಪೋಸ್ಟರ್, ಟೀಸರ್, ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆಯುತ್ತಿದ್ದು, ಸದ್ಯದಲ್ಲೇ ಟ್ರೇಲರ್ ರಿಲೀಸ್ ಆಗಲಿದೆ. ‘ಚೂರಿಕಟ್ಟೆ’ ಚಿತ್ರದ ಪ್ರವೀಣ್ ತೇಜ್ ಈ ಚಿತ್ರದಲ್ಲಿ ನಾಯಕ. ಸಿನಿಮಾ ಬಗ್ಗೆ ರಾಧಿಕಾ ನಾರಾಯಣ್ ಹಂಚಿಕೊಂಡ ವಿವರಗಳಿಷ್ಟು.
- ನಿರ್ದೇಶಕ ವಿನಯ್ ಭಾರದ್ವಜ್ ಅವರು ಒಂದು ಯೂತ್ಫುಲ್ ಪ್ರಯಾಣದ ಕತೆಯನ್ನು ಹೇಳಿದ್ದಾರೆ. ಒಂಟಿ ಪಯಣದಲ್ಲಿ ತೊಡಗುವ, ಟ್ರಕ್ಕಿಂಗ್ಗೆ ಹೊರಡುವ, ನಿಂತಲ್ಲಿ ನಿಲ್ಲದೆ ಜಗತ್ತು ಸುತ್ತಾಡಬೇಕು, ಪ್ರಕೃತಿ ಜತೆ ಸ್ನೇಹ ಬೆಳೆಸಬೇಕು ಎಂದು ಹಂಬಲಿಸುವ ಪ್ರತಿಯೊಬ್ಬರ ಮನಸ್ಸಿಗೂ ಮುಟ್ಟುವ ಕತೆ ಈ ಚಿತ್ರದಲ್ಲಿದೆ.
- ಮುಂದಿನ ನಿಲ್ದಾಣ ಸಿನಿಮಾ ನನಗೆ ಹಲವು ಕಾರಣಗಳಿಗಾಗಿ ಮಹತ್ವದ್ದು. ಈ ಚಿತ್ರದಿಂದ ನನ್ನ ಹೆಸರು ಬದಲಾಯಿಸಿಕೊಂಡೆ. ಹೊಸ ರೀತಿಯ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದೀನಿ. ತುಂಬಾ ಗ್ಯಾಪ್ ನಂತರ ದೊಡ್ಡ ಮಟ್ಟದ ಭರವಸೆಯೊಂದಿಗೆ ಚಿತ್ರರಂಗಕ್ಕೆ ಹಿಂತಿರುಗುವಂತೆ ಮಾಡುತ್ತಿರುವ ಸಿನಿಮಾ ಇದು.
- ಇದೊಂದು ಹೊಸ ಅಲೆಯ ಚಿತ್ರ. ಚಿತ್ರೀಕರಣಕ್ಕಾಗಿ ಆಯ್ದುಕೊಂಡ ಲೊಕೇಶನ್, ಕಲೆ, ಬಣ್ಣ, ದೃಶ್ಯ, ವಸ್ತ್ರವಿನ್ಯಾಸ ಈ ಎಲ್ಲದರಲ್ಲಿಯೂ ಹೊಸತನವನ್ನು ಹಿಡಿದಿಟ್ಟುಕೊಂಡು ಚಿತ್ರದ ಪ್ರತಿ ಪಾತ್ರವನ್ನು ವಿಶೇಷವಾಗಿ ತೆರೆ ಮೇಲೆ ಬಿಂಬಿಸಲಾಗಿದೆ.
ರಮೇಶ್ ಅರವಿಂದ್ ಚಿತ್ರಕ್ಕೆ ಇಬ್ಬರು ನಾಯಕಿಯರು
- ಈಗಷ್ಟೆಪಿಆರ್ಕೆ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿರುವ ನನ್ನ ಪಾತ್ರದ ಸುತ್ತ ಸಾಗುವ, ಸಂಚಿತ್ ಹೆಗಡೆ ಹಾಡಿರುವ ‘ಲೈಫ್ ಈಸ್ ಬ್ಯೂಟಿಫುಲ…’ ಹಾಡು ನೋಡಿದಾಗ ನನ್ನ ಪಾತ್ರಕ್ಕೆ ಯಾವ ಮಟ್ಟಕ್ಕೆ ಹೊಸತನ ಇದೆ ಎಂಬುದು ಗೊತ್ತಾಗುತ್ತದೆ. ಕೇಳುವುದಕ್ಕೆ ಹಾಗೂ ನೋಡುವುದಕ್ಕೂ ತುಂಬಾ ಚೆಂದ ಅನಿಸಿರುವ ಈ ಹಾಡು ಬೆಲ್ಜಿಯಂ ಹಾಗೂ ನೆದರ್ಲ್ಯಾಂಡ್ನಲ್ಲಿ ಚಿತ್ರೀಕರಣಗೊಂಡಿದೆ.
- ನಾನು ಈ ಹಾಡಿನಲ್ಲಿ ಕುಂಚ ಕಲಾವಿದೆಯಾಗಿ ಕಾಣಿಸಿಕೊಂಡಿದ್ದೇನೆ. ತುಂಬಾ ಮೋಹಕ ಹಾಗೂ ಕಲಾತ್ಮಕವಾಗಿ ನನ್ನ ಪಾತ್ರ ಮೂಡಿಬಂದಿದೆ. ಮೀರಾ ಎಂಬುದು ನನ್ನ ಪಾತ್ರದ ಹೆಸರು. ಬೆಲ್ಜಿಯಂ ಹಾಗೂ ನೆದರ್ಲ್ಯಾಂಡ್ನಲ್ಲಿ ನಡೆದ ಚಿತ್ರೀಕರಣವು ನನ್ನ ಜೀವನದ ಮರೆಯಲಾರದ ಕ್ಷಣಗಳಲ್ಲಿ ಒಂದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.