ಇದು ಹೊಸ ಟಿನೇಜ್‌ ಲವ್‌ ಸ್ಟೋರಿ ಸಿನಿಮಾ: ಪೃಥ್ವಿ ಶಾಮನೂರು

Published : Dec 28, 2022, 07:22 AM IST
ಇದು ಹೊಸ ಟಿನೇಜ್‌ ಲವ್‌ ಸ್ಟೋರಿ ಸಿನಿಮಾ: ಪೃಥ್ವಿ ಶಾಮನೂರು

ಸಾರಾಂಶ

ಹರಿಪ್ರಸಾದ್‌ ಜಯಣ್ಣ ನಿರ್ದೇಶಿಸಿ, ಯೋಗರಾಜ್‌ ಭಟ್‌ ಹಾಗೂ ರವಿ ಶಾಮನೂರು ನಿರ್ಮಾಣದ ‘ಪದವಿ ಪೂರ್ವ’ ಸಿನಿಮಾ ಇದೇ ಡಿ.30ಕ್ಕೆ ಬಿಡುಗಡೆ. ಈ ಸಂದರ್ಭದಲ್ಲಿ ಚಿತ್ರದ ನಾಯಕ ಪೃಥ್ವಿ ಶಾಮನೂರು ಅವರ ಮಾತು.

ಹರಿಪ್ರಸಾದ್‌ ಜಯಣ್ಣ ನಿರ್ದೇಶಿಸಿ, ಯೋಗರಾಜ್‌ ಭಟ್‌ ಹಾಗೂ ರವಿ ಶಾಮನೂರು ನಿರ್ಮಾಣದ ‘ಪದವಿ ಪೂರ್ವ’ ಸಿನಿಮಾ ಇದೇ ಡಿ.30ಕ್ಕೆ ಬಿಡುಗಡೆ. ಈ ಸಂದರ್ಭದಲ್ಲಿ ಚಿತ್ರದ ನಾಯಕ ಪೃಥ್ವಿ ಶಾಮನೂರು ಅವರ ಮಾತು.

* ಮೊದಲ ಸಿನಿಮಾ ಬಿಡುಗಡೆ?
ಪರೀಕ್ಷೆ ಬರೆದು ರಿಸಲ್ಟ್‌ಗೆ ಕಾಯುತ್ತಿರುವ ವಿದ್ಯಾರ್ಥಿ ಅನುಭವಿಸುವ ತಳಮಳಗಳು ಆಗುತ್ತಿವೆ. ಭಯ ಇದೆ.

* ಮೊದಲ ಚಿತ್ರದಲ್ಲೇ ದೊಡ್ಡ ಮಟ್ಟದಲ್ಲಿ ಲಾಂಚ್‌ ಆಗಿದ್ದೀರಿ?
ನಾನು ಅದೃಷ್ಟವಂತ. ಯೋಗರಾಜ್‌ ಸಿನಿಮಾಸ್‌ ಬ್ಯಾನರ್‌ನಲ್ಲಿ ಹೀರೋ ಆಗಿ ಬರುತ್ತಿದ್ದೇನೆ.

Exclusive Interview: ಕನ್ನಡ ನಾಯಕಿಯರಿಗೆ ಬೇಡಿಕೆ ಹೆಚ್ಚಾಗ್ತಿದೆ: ಖುಷಿ ರವಿ

* ಚಿತ್ರದ ಕತೆ ಏನು?
ಇದು ಪಿಯುಸಿ ಹುಡುಗ- ಹುಡುಗಿಯರ ಸ್ಟೋರಿ. ಈ ಜನರೇಷನ್‌ ಕಾಲೇಜು ಮಕ್ಕಳ ಕತೆ ಅಲ್ಲ. 1993 ಕಾಲದ ವಿದ್ಯಾರ್ಥಿಗಳ ಕತೆ. ಆ ದಿನಗಳ ಹೊಸ ಟಿನೇಜ್‌ ಪ್ರೇಮ ಕತೆ.

* ನಿಮ್ಮ ಪಾತ್ರ ಹೇಗಿರುತ್ತದೆ?
ಚಿತ್ರದಲ್ಲಿ ನನ್ನ ಪಾತ್ರದ ಹೆಸರು ನವೀನ್‌. ನನ್ನ ಸುತ್ತ ನಡೆಯುವ ಘಟನೆ, ಸನ್ನಿವೇಶಗಳ ಮೂಲಕ ನನ್ನ ಪಾತ್ರ ಕೂಡ ಸಾಗುತ್ತದೆ.

* ನಿಮಗೆ ಆಸಕ್ತಿ ಹುಟ್ಟಿಸಿದ್ದೇನು?
ನಿರ್ದೇಶಕರು ಕತೆ ಹೇಳುತ್ತಿದ್ದಾಗ ನನ್ನದೇ ಲೈಫಿನ ಕತೆ ನನಗೇ ವಾಪಸ್ಸು ಹೇಳುತ್ತಿದ್ದಾರೆ ಅನಿಸಿತು. ಕತೆಯ ಮುಖ್ಯ ತಿರುಳು ಸ್ನೇಹದ ನೆರಳು. ನಿಜ ಜೀವನದಲ್ಲೂ ನನಗೆ ತುಂಬಾ ಜನ ಸ್ನೇಹಿತರು ಇದ್ದಾರೆ.

Exclusive Interview: ಕಲಾವಿದರ ಕಣ್ಣು ಮಾತಾಡ್ಬೇಕು, ಅದೇ ಬ್ಯೂಟಿ: ಅಂಕಿತಾ ಅಮರ್‌

* ನಿಮ್ಮ ತಂದೆ ನಿರ್ಮಾಣ ಮಾಡದಿದ್ದರೆ?
ಖಂಡಿತ ಕಷ್ಟಆಗುತ್ತಿತ್ತು. ನನ್ನ ತಂದೆ ರವಿ ಶಾಮನೂರು ಅವರ ಆಶೀರ್ವಾದ, ಬೆಂಬಲದಿಂದ ನಾನು ಹೀರೋ ಆದೆ. ಮುಂದೆ ನಾನು ಗೆಲ್ಲಬೇಕು ಎಂದರೆ ಪ್ರತಿಭೆ ಬೇಕು. ಒಳ್ಳೆಯ ಕತೆಗಳಲ್ಲಿ ನಟಿಸಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು