ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಜಲಾಶಯಗಳು ತುಂಬಿ ತುಳುಕುತ್ತಿದ್ದು, ಭಾರೀ ಪ್ರಮಾಣದಲ್ಲಿ ನೀರನ್ನು ನದಿಗಳಿಗೆ ಬಿಡಲಾಗುತ್ತಿದೆ. ಕೆಆರ್‌ಎಸ್, ಆಲಮಟ್ಟಿ, ನಾರಾಯಣಪುರ ಸೇರಿದಂತೆ ಹಲವು ಜಲಾಶಯಗಳಿಂದ ಲಕ್ಷಾಂತರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದ್ದು, ಪ್ರವಾಹದ ಆತಂಕ ಎದುರಾಗಿದೆ.

ಬೆಂಗಳೂರು: ರಾಜ್ಯದ ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳು ಮತ್ತು -ಮಹಾರಾಷ್ಟ್ರದ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಭರ್ಜರಿಮಳೆಸುರಿಯುತ್ತಿರುವಪರಿಣಾಮ ನದಿಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮುನ್ನೆಚ್ಚರಿಕೆಯಾಗಿ ಡ್ಯಾಂಗಳಿಂದ ನದಿಗಳಿಗೆ ನೀರನ್ನು ಹರಿಸಲಾಗುತ್ತಿದೆ. ಮಂಡ್ಯದ ಕೆಆರ್‌ಎಸ್‌ನಿಂದ 50 ಸಾವಿರ ಕ್ಯುಸೆಕ್, ಆಲಮಟ್ಟಿ ಹಾಗೂ ನಾರಾಯಣಪುರ ಅಣೆಕಟ್ಟುಗಳಿಂದ 1.4 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಭದ್ರಾ ಜಲಾಶಯ ಭರ್ತಿಗೆ ಇನ್ನೊಂದಡಿ ಮಾತ್ರ ಬಾಕಿ ಉಳಿದಿದೆ. 19828 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಲಿಂಗನಮಕ್ಕಿ ಜಲಾಶಯಕ್ಕೆ 29776 ಕ್ಯುಸೆಕ್ ನೀರು ಹರಿದು ಬಂದಿದೆ. 1819 ಅಡಿ ಗರಿಷ್ಟ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯ ಸದ್ಯ 1813.50 ಅಡಿಗೆ ತಲುಪಿದೆ. ತುಂಗ ಭದ್ರಾ ಜಲಾಶಯದಿಂದ ನದಿಗೆ 1.15 ಲಕ್ಷ ಸಾವಿರ ಕ್ಯುಸೆಕ್ ನೀರು ನದಿಗೆ ಬಿಡುವ ಸಾಧ್ಯತೆ ಇದೆ. ಈಗಾಗಲೇ ನದಿಗೆ 90,124 ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಇಂದಿನ ಜಲಾಶಯಗಳ ಪ್ರಮಾಣ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

ಜಲಾಶಯಡ್ಯಾಂ ಭರ್ತಿ ಎಷ್ಟಾಗಿದೆ?ಗರಿಷ್ಠ ಮಟ್ಟ ಇಂದಿನ ಮಟ್ಟ
 ಕಬಿನಿ92%2284 ಅಡಿ2283.87 ಅಡಿ
 ಹೇಮಾವತಿ99%2922 ಅಡಿ2921.98 ಅಡಿ
ತುಂಗಭದ್ರಾ65%1633 ಅಡಿ1627.75 ಅಡಿ
 ಸೂಪಾ67%564 ಮೀಟರ್552.89 ಮೀಟರ್
ಕೆಆರ್‌ಎಸ್‌99%124.80 ಅಡಿ124.64 ಅಡಿ
ಘಟಪ್ರಭಾ96%2175 ಅಡಿ2172.12 ಅಡಿ
 ಲಿಂಗನಮಕ್ಕಿ88%1819.12 ಅಡಿ1813.50 ಅಡಿ
ಭದ್ರಾ98%186 ಅಡಿ185.1 ಅಡಿ
ಹಾರಂಗಿ91%2859 ಅಡಿ2858.88 ಅಡಿ
ಆಲಮಟ್ಟಿ99%519.60 ಮೀ519 ಮೀಟರ್
ನಾರಾಯಣಪುರ99%492.25 ಅಡಿ494 ಅಡಿ
ಮಲಪ್ರಭಾ90%2079.50 ಅಡಿ2078.80 ಅಡಿ