MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಕಿಚ್ಚ ಸುದೀಪ್‌ ಷರತ್ತಿಗೆ ತಲೆ ಬಾಗಿದ ವಾಹಿನಿ; ಕನ್ನಡಿಗರ ಮನ ಗೆದ್ದಿದ್ದು Bigg Boss ಮನೆ ಅಲ್ಲ, ಅರಮನೆ

ಕಿಚ್ಚ ಸುದೀಪ್‌ ಷರತ್ತಿಗೆ ತಲೆ ಬಾಗಿದ ವಾಹಿನಿ; ಕನ್ನಡಿಗರ ಮನ ಗೆದ್ದಿದ್ದು Bigg Boss ಮನೆ ಅಲ್ಲ, ಅರಮನೆ

ಬಿಗ್‌ ಬಾಸ್‌ ಕನ್ನಡ 12 ಶೋ ಶುರುವಾಗಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಬಾರಿಯ ಮನೆ ಹೇಗಿರಲಿದೆ ಎಂಬ ಕುತೂಹಲ ಅನೇಕರಿಗೆ ಇರಬೇಕಲ್ಲ… “ಕನ್ನಡಕ್ಕೆ ಆದ್ಯತೆ ಕೊಟ್ಟರೆ ಮಾತ್ರ ನಾನು ಬಿಗ್‌ ಬಾಸ್‌ ಶೋ ನಡೆಸುತ್ತೇನೆ” ಎಂದು ಕಿಚ್ಚ ಸುದೀಪ್‌ ಕಂಡೀಶನ್‌ ಹಾಕಿದ್ದರು. ಈಗ ವಾಹಿನಿ ತಲೆಬಾಗಿದೆ.  

2 Min read
Padmashree Bhat
Published : Sep 27 2025, 01:03 PM IST
Share this Photo Gallery
  • FB
  • TW
  • Linkdin
  • Whatsapp
19
ಮನೆಯಲ್ಲ, ಅರಮನೆ
Image Credit : colors kannada instagram

ಮನೆಯಲ್ಲ, ಅರಮನೆ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಲೋಗೋ ರೂಪುಗೊಳ್ಳುವಾಗ ಅಲ್ಲಿಯೂ ಕೂಡ ಕನ್ನಡದಲ್ಲಿ 12 ನಂಬರ್‌ನ್ನು ಬರೆಯಲಾಗಿತ್ತು. ಈಗ ಮನೆಯಲ್ಲಿ ಮೈಸೂರಿನ ಅರಮನೆಯ ಪ್ರತಿಬಿಂಬ ಕಾಣ್ತಿದೆ. ಅಂದಹಾಗೆ ದಸರಾ ಕೂಡ ಶುರುವಾಗಿದೆ, ಮೈಸೂರು ಅರಮನೆ ರೀತಿಯಲ್ಲಿ ಬಿಗ್‌ ಬಾಸ್‌ ಮನೆ ರೂಪುಗೊಂಡಿದೆ. ಒಟ್ಟಿನಲ್ಲಿ ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಕನ್ನಡದ ಸೊಗಡು, ಸಂಸ್ಕೃತಿ, ಛಾಯೆ ಎದ್ದು ಕಾಣುತ್ತಿದೆ.

29
ಇಲ್ಲಿ ಯುದ್ಧ ಆಗುತ್ತದೆ ಎಂದ ಕಿಚ್ಚ ಸುದೀಪ್
Image Credit : colors kannada instagram

ಇಲ್ಲಿ ಯುದ್ಧ ಆಗುತ್ತದೆ ಎಂದ ಕಿಚ್ಚ ಸುದೀಪ್

ಕಿಚ್ಚ ಸುದೀಪ್‌ ಅವರು ಮನೆಯೊಳಗಡೆ ಎಂಟ್ರಿ ಕೊಟ್ಟಿದ್ದಾರೆ. “ನಮ್ಮ ರಿಚ್‌ ಆಗಿರೋ ಕರ್ನಾಟಕವನ್ನು ಒಂದೇ ಕಡೆ ನೋಡಿದ್ರೆ ಹೇಗಿರುತ್ತದೆ ಅಂತ ನೀವು ನೋಡಬೇಕು ಅಂದರೆ ಈ ಬಾರಿ ಬಿಗ್‌ ಬಾಸ್‌ ಕನ್ನಡ 12 ನೋಡಿ. ಒಂದು ಅರಮನೆ ಉಳಿಸಿಕೊಳ್ಳಲು ಎಷ್ಟೋ ಯುದ್ಧಗಳು ಆಗಿವೆ. ಈ ಮನೆಯನ್ನು ತಮ್ಮನ್ನು ತಾವು ಉಳಿಸಿಕೊಳ್ಳಲು ಎಷ್ಟೋ ಯುದ್ಧಗಳು ನಡೆಯೋದಿದೆ. ನಮ್ಮ ನಾಡಿಗೆ ದಸರಾ ಹಬ್ಬ ಶುರುವಾಗಿ ಒಂದು ವಾರ ಆಯ್ತು. ನಮ್ಮ ಬಿಗ್‌ ಬಾಸ್‌ ಮನೆಯಲ್ಲಿ ಅಸಲಿ ಹಬ್ಬ ಈಗ ಶುರು” ಎಂದು ಅವರು ಹೇಳಿದ್ದಾರೆ.

Related Articles

Related image1
Bigg Boss ನಡೆಸಿ ಕೊಡೋನೇ ಹುಚ್ಚ, ಇನ್ನೇನ್​ ನೀವ್​ ಹೇಳೋದು? ಸುದೀಪ್​ ಮಾತಿಗೆ ಫ್ಯಾನ್ಸ್​ ಶಾಕ್​- ಆಗಿದ್ದೇನು ನೋಡಿ
Related image2
'ಏನ್​ ಬೇಕಾದ್ರೂ ಏರುಪೇರಾಗತ್ತೆ' ಎನ್ನುತ್ತಲೇ Bigg Boss ಸ್ಪರ್ಧಿಗಳಿಗೆ Tanisha Kuppanda ಕೊಟ್ಟ ಎಚ್ಚರಿಕೆ ನೋಡಿ
39
ಮೈಸೂರು ದಸರಾ ಕಳೆ
Image Credit : colors kannada instagram

ಮೈಸೂರು ದಸರಾ ಕಳೆ

ಮನೆ ಎಂಟ್ರಿಯಲ್ಲಿ ಮೈಸೂರು ಅರಮನೆ ರೀತಿ ಡಿಸೈನ್‌ ಇದೆ. ಒಳಗಡೆ ಯಕ್ಷಗಾನದ ಫೋಟೋ ಹಾಕಲಾಗಿದೆ. ಇನ್ನೊಂದು ಕಡೆ ಟಿಪ್ಪು ಸುಲ್ತಾನ್‌ ಹುಲಿಯ ಜೊತೆಗೆ ಹೋರಾಡುವ ಫೋಟೋ ಇದೆ. ಅಷ್ಟೇ ಅಲ್ಲದೆ ಆನೆಯ ಫೋಟೋ ಕೂಡ ಇದೆ.

49
ಕನ್ನಡಿಗರ ಮನ ಗೆದ್ದ ಅರಮನೆ
Image Credit : colors kannada instagram

ಕನ್ನಡಿಗರ ಮನ ಗೆದ್ದ ಅರಮನೆ

ಈ ಮನೆಯನ್ನು ನೋಡಿ ಅನೇಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ.

  • ಕನ್ನಡ, ಕನ್ನಡತನಕ್ಕೆ ಆದ್ಯತೆ, ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಒತ್ತು, ಕನ್ನಡದ ಬೇರುಗಳಿಗೆ ಪ್ರಾಮುಖ್ಯತೆ, ಮನೆ ಮಾತ್ರ ಸೈಕ್ ಆಗಿ ಇದೆ
  • ಇಷ್ಟೊಂದು ಇನೋವೇಟಿವ್ ಆಗಿ ಇದೆ ಈ ಬಾರಿ ಮನೆಯಿದೆ. ಆದರೆ ನೋಡ್ಬೇಕು ಮನೆಗೆ ತಕ್ಕಂತಹ ಸ್ಪರ್ಧಿಗಳು ಬರ್ತಾರಾ ಎಂದು ಕಾದು ನೋಡಬೇಕಿದೆ.
59
ಹಾರೈಸಿದ ವೀಕ್ಷಕರು
Image Credit : colors kannada instagram

ಹಾರೈಸಿದ ವೀಕ್ಷಕರು

  • ಬಿಗ್ ಬಾಸ್ ಸೀಸನ್ ಹನ್ನೆರಡು, ಬಿಗ್ ಬಾಸ್ ಅರಮನೇನ ನೋಡೋಕೆ ಸಾಲದು ಕಣ್ಣೆರಡು
  • ಮಹಿಳೆಯರು ಸೀರೆ ತೊಟ್ಟು ಕೊಂಕುಮ ಬೊಟ್ಟು ಇಟ್ಕೊಂಡು, ಅರಮನೆಯೊಳಗಡೆ ಬರಬೇಕು, ನಮ್ಮ ಸಂಸ್ಕೃತಿಯ ಹಬ್ಬವನ್ನು ಬಿಗ್‌ ಬಾಸ್‌ ಮನೆಗೂ ಚೆಲ್ಲಿ ಶುಭ ಕಾರ್ಯ ಆರಂಭವಾಗಲಿ
69
ದಸರಾ ಕಥೆ
Image Credit : colors kannada instagram

ದಸರಾ ಕಥೆ

ಈ ಮನೆಯಲ್ಲಿ ಅಂಬಾರಿ ಫೋಟೋ ಇದೆ, ಆನೆಯ ಫೋಟೋ ಇದೆ. ಒಟ್ಟಿನಲ್ಲಿ ನಮ್ಮ ನಾಡಿನ ಕಥೆಯನ್ನು ಹೇಳುವ ಫೋಟೋಗಳು ಇಲ್ಲಿವೆ. ಇನ್ನು ಟಿಪ್ಪು ಹಾಗೂ ಹುಲಿ ನಡುವೆ ಫೈಟ್‌ ಆಗುವ ಫೋಟೋ ಕೂಡ ಇದೆ. ಹುಲಿಯ ಚಿತ್ರದ ನಡುವೆ ಒಂದಿಷ್ಟು ಅಕ್ಷರಗಳನ್ನು ಬರೆಯಲಾಗಿದೆ. ಬಿಗ್‌ ಬಾಸ್‌ ಮನೆಯಲ್ಲಿ ಯಾವೆಲ್ಲ ಶಬ್ದಗಳನ್ನು ಜಾಸ್ತಿ ಬರೆಯಲಾಗುವುದೋ ಆ ಶಬ್ದಗಳು ಇಲ್ಲಿವೆ.

79
ಎಂಥ ಚೆಂದದ ಮನೆ
Image Credit : colors kannada instagram

ಎಂಥ ಚೆಂದದ ಮನೆ

ಅರಮನೆಯಂಥ ಮನೆ, ಅದ್ಭುತ ಸೆಟ್‌, ಮನೆ ತುಂಬ ಬೆಳಕು, ಗಾರ್ಡನ್‌ ಏರಿಯಾ, ಬೆಡ್‌ರೂಮ್‌ ಏರಿಯಾ, ಲಿವಿಂಗ್‌ ಏರಿಯಾ, ಕಿಚನ್‌, ಸ್ವಿಮ್ಮಿಂಗ್‌ ಪೂಲ್‌, ಬಾಲ್ಕನಿ, ವಾಶ್‌ರೂಮ್‌ ಏರಿಯಾ ಎಂದು ಇಲ್ಲಿ ಭವ್ಯವಾದ ಅರಮನೆ ರೆಡಿಯಾಗಿದೆ. ಬಿಗ್‌ ಬಾಸ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಮನೆ ರೆಡಿ ಆಗಿದೆ. 

89
ಗ್ರ್ಯಾಂಡ್‌ ಆರಂಭ
Image Credit : colors kannada instagram

ಗ್ರ್ಯಾಂಡ್‌ ಆರಂಭ

ಸೆಪ್ಟೆಂಬರ್‌ 28ರಂದು ಸಂಜೆ 6 ಗಂಟೆಗೆ ಈ ಶೋನ ಆರಂಭ ಆಗಿದೆ. ಒಟ್ಟಿನಲ್ಲಿ ಈ ಬಾರಿ ಯಾರೆಲ್ಲ ಸ್ಪರ್ಧಿಗಳು ಬರ್ತಾರೆ? ಹೇಗಿರಲಿದೆ ಎಂಬ ಕುತೂಹಲ ಶುರುವಾಗಿದೆ.

99
ಕಿಚ್ಚ ಸುದೀಪ್‌ ಆಸೆ
Image Credit : colors kannada instagram

ಕಿಚ್ಚ ಸುದೀಪ್‌ ಆಸೆ

ಕನ್ನಡಿಗರಿಗೆ, ಕನ್ನಡಕ್ಕೆ ಬೆಲೆ ಕೊಡಬೇಕು ಎನ್ನೋದು ಕಿಚ್ಚ ಸುದೀಪ್‌ ಆಶಯವಾಗಿತ್ತು. ನನಗೆ ಬೆಂಗಳೂರಿನಲ್ಲಿರುವ ಆಫೀಸ್‌ನಿಂದ ಯಾವುದೇ ಸಮಸ್ಯೆ ಇರಲಿಲ್ಲ, ಮೇಲಿನವರು ನಡೆದುಕೊಳ್ಳೋದು ನೋಡಿ ನನಗೆ ಬೇಸರ ಆಗಿತ್ತು. ಹೀಗಾಗಿ ಬಿಗ್‌ ಬಾಸ್‌ ಶೋ ನಡೆಸಿಕೊಡೋದು ಬೇಡ ಎಂದು ಹಿಂದೆ ಸರಿದಿದ್ದೆ ಎಂದು ಅವರು ಹೇಳಿದ್ದರು. 

 
 
 
 
View this post on Instagram
 
 
 
 
 
 
 
 
 
 
 

A post shared by Colors Kannada Official (@colorskannadaofficial)

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕಿಚ್ಚ ಸುದೀಪ್
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved