MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಮರ್ಯಾದೆ ಅನ್ನೋದು ಯಾರ ಅಪ್ಪನ ಆಸ್ತಿನೂ ಅಲ್ಲ; ಸುದೀಪ್​ ಕೆಂಡಾಮಂಡಲ- Bigg Boss ಸ್ಪರ್ಧಿಗಳಿಗೆ ಕ್ಲಾಸ್​

ಮರ್ಯಾದೆ ಅನ್ನೋದು ಯಾರ ಅಪ್ಪನ ಆಸ್ತಿನೂ ಅಲ್ಲ; ಸುದೀಪ್​ ಕೆಂಡಾಮಂಡಲ- Bigg Boss ಸ್ಪರ್ಧಿಗಳಿಗೆ ಕ್ಲಾಸ್​

ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ, ಅಶ್ವಿನಿ ಮತ್ತು ಜಾನ್ವಿ ನಡುವೆ ಮಧ್ಯರಾತ್ರಿ ನಡೆದ ಜಗಳ ವೈಯಕ್ತಿಕ ನಿಂದನೆಯ ಹಂತ ತಲುಪಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕಿಚ್ಚ ಸುದೀಪ್, ಸ್ಪರ್ಧಿಗಳ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, 'ಮರ್ಯಾದೆ ಯಾರ ಅಪ್ಪನ ಆಸ್ತಿನೂ ಅಲ್ಲ' ಎಂದಿದ್ದಾರೆ. 

2 Min read
Suchethana D
Published : Oct 18 2025, 05:30 PM IST
Share this Photo Gallery
  • FB
  • TW
  • Linkdin
  • Whatsapp
18
ಇವೆಲ್ಲಾ ಮಾಮೂಲೇ ಬಿಡಿ
Image Credit : @Colors Kannada Official/Instagram

ಇವೆಲ್ಲಾ ಮಾಮೂಲೇ ಬಿಡಿ

ಬಿಗ್​ಬಾಸ್​ನಲ್ಲಿ (Bigg Boss) ಗಲಾಟೆ, ಗದ್ದಲ, ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವುದು, ಅಸಹ್ಯ ಮಾತುಗಳನ್ನು ಆಡುವುದು, ತೀರಾ ವೈಯಕ್ತಿಕವಾಗಿ ನಿಂದನೆ ಇವೆಲ್ಲವೂ ಮಾಮೂಲು. ಒಂದು ಹಂತದಲ್ಲಿ ಇಂಥದ್ದೊಂದು ಸನ್ನಿವೇಶ ಇದ್ದರೆ ವೀಕ್ಷಕರು ಹೆಚ್ಚು ನೋಡುತ್ತಾರೆ ಎನ್ನುವ ಕಾರಣಕ್ಕೆ ಸ್ಪರ್ಧಿಗಳ ನಡುವೆ ಇಂಥ ಸನ್ನಿವೇಶಗಳನ್ನೂ ಖುದ್ದು ಬಿಗ್​ಬಾಸ್​​ ಸೃಷ್ಟಿಸುತ್ತದೆ ಎಂದು ಇದಾಗಲೇ ಈ ಹಿಂದಿನ ಷೋಗಳಲ್ಲಿ ಹೋಗಿ ಬಂದಿರುವ ಸ್ಪರ್ಧಿಗಳು ಓಪನ್​ ಆಗಿಯೇ ಹೇಳಿದ್ದಾರೆ.

28
ಮಸಾಲೆ ಇಲ್ಲದಿದ್ರೆ ಹೇಗೆ?
Image Credit : Colors Kannada

ಮಸಾಲೆ ಇಲ್ಲದಿದ್ರೆ ಹೇಗೆ?

ಎಲ್ಲವೂ ಚೆನ್ನಾಗಿ, ಸುಲಲಿತವಾಗಿ ನಡೆದುಕೊಂಡು ಹೋಗುತ್ತಿದ್ದರೆ, ವೀಕ್ಷಕರಿಗೆ ಮಸಾಲೆಯೇ ಇಲ್ಲದೇ ತೀರಾ ಸಪ್ಪೆ ಎನ್ನಿಸುವ ಕಾರಣ, ಇಂಥದ್ದೆಲ್ಲವೂ ಇದ್ದೇ ಇರುತ್ತದೆ. ಅದೇ ರೀತಿ ಇದೀಗ ಜಾನ್ವಿ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ (Rakshita Shetty) ನಡುವೆ ಮಿಡ್​ನೈಟ್​ನಲ್ಲಿ ನಡೆದ ಗಲಾಟೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

Related Articles

Related image1
Bigg Bossನಲ್ಲಿ ನಡುರಾತ್ರಿ ಲೇಡೀಸ್​ ಮಾರಾಮಾರಿ! ರೌದ್ರರೂಪ ತೋರಿದ್ರು, ನಾಗವಲ್ಲಿ ಅವತಾರ ಎತ್ತಿದ್ರು - ಆಗಿದ್ದೇನು?
Related image2
ಆದಾಯದ ಮೂಲ ತೆರೆದಿಟ್ಟು ಶಾಕ್​ ಕೊಟ್ಟ ಬಿಗ್​ಬಾಸ್​ Niveditha Gowda- ಫಾರಿನ್​ ಟೂರ್​ ಬಗ್ಗೂ ರಿವೀಲ್​
38
ವೈಯಕ್ತಿಕ ನಿಂದನೆ
Image Credit : Instagram

ವೈಯಕ್ತಿಕ ನಿಂದನೆ

ಒಂದು ಹಂತದಲ್ಲಿ ಅಶ್ವಿನಿ ಗೌಡ ಅವರು ರಕ್ಷಿತಾಗೆ ನೀನು ಎಂಥವಳು, ಎಲ್ಲಿಂದ ಬಂದವಳು ಎನ್ನುವುದು ಗೊತ್ತು ಎಂದಿದ್ದರೆ, ಜಾನ್ವಿ ಕೂಡ ಅಸಭ್ಯ ಮಾತುಗಳನ್ನು ಆಡಿದ್ದರು. ಇದನ್ನು ನೋಡಿದವರು ಕಿಚ್ಚ ಸುದೀಪ್​ ಇವರಿಗೆ ಸಕತ್​ ಕ್ಲಾಸ್​ ತೆಗೆದುಕೊಳ್ತಾರೆ ಎಂದು ಅಂದುಕೊಂಡಿದ್ದರು. ಅದೀಗ ನಿಜವಾಗಿದೆ.

48
ಸುದೀಪ್​ ಕೆಂಡಾಮಂಡಲ
Image Credit : Instagram

ಸುದೀಪ್​ ಕೆಂಡಾಮಂಡಲ

ಕಿಚ್ಚ ಸುದೀಪ್​ ಈ ವಿಷಯದಲ್ಲಿ ಕೆಂಡಾಮಂಡಲವಾಗಿದ್ದಾರೆ. ಯಮ್ಮಾ ಗಿಮ್ಮಾ ಅನ್ಬೇಡ, ಹೆಸರು ಇದೆ ಎಂದರೂ ನೀವು ರಕ್ಷಿತಾ ಅವರಿಗೆ ಹೀಗೆ ಮಾತನಾಡಿದ್ದೀರಿ ಎಂದಾಗ ಜಾನ್ವಿ (Bigg Boss Jhanvi) ಯಾರಿಗೂ ಹರ್ಟ್​ ಮಾಡಬೇಕು ಅಂತ ಮಾಡಿರಲಿಲ್ಲ ಎಂದರು.

58
 ಯಾರ ಅಪ್ಪನ ಆಸ್ತಿನೂ ಅಲ್ಲ
Image Credit : Instagram

ಯಾರ ಅಪ್ಪನ ಆಸ್ತಿನೂ ಅಲ್ಲ

ಅದಕ್ಕೆ ಸುದೀಪ್​ ಅವರು, ನೀವು ಹೀಗೆ ಪರ್ಸನ್ಯಾಲಿಟಿಗಳನ್ನು ಕೊಲೆ ಮಾಡ್ತಾ ಹೋದರೆ Are You People Ok with it? ಎಂದು ಪ್ರಶ್ನಿಸಿದಾಗ ಎಲ್ಲರೂ ಸುಮ್ಮನಾದರು. ಸುದೀಪ್​ (Kichcha Sudeep) ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸಿ, ಒಬ್ಬರ ಮರ್ಯಾದೆ, ಒಬ್ಬರ ಅಸ್ತಿತ್ವ, ಒಬ್ಬರ ಗೌರವ ಇನ್ನೊಬ್ಬರ ಆಟದ ಸಾಮಾನು ಆಗಬಾರದು. ಮರ್ಯಾದೆ ಎನ್ನೋದು ಯಾರ ಅಪ್ಪನ ಆಸ್ತಿನೂ ಅಲ್ಲ ಎಂದು ಮೇಜನ್ನು ಕುಕ್ಕಿ ಹೇಳಿದರು. ಮುಂದೇನಾಗತ್ತೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

68
ಆಗಿದ್ದೇನು?
Image Credit : Instagram

ಆಗಿದ್ದೇನು?

ಅಷ್ಟಕ್ಕೂ ಆಗಿದ್ದೇನೆಂದರೆ, ಎಲಿಮಿನೇಷನ್​ ಗದ್ದಲ ಇರುವ ಕಾರಣ, ರಕ್ಷಿತಾ ಶೆಟ್ಟಿ ಅವರು ಮೊದಲಿಗೆ, ಅವರು ನನ್ನ ಹೆಸರು ಹೇಳಿದರು, ಅದಕ್ಕೇ ನಾನು ಅವರ ಹೆಸರು ಹೇಳಿದೆ ಎಂದು ಹೇಳುವ ಮೂಲಕ, ಇಬ್ಬರ ನಡುವೆಯ ಜಗಳ ಶುರುವಾಗಿದೆ. ಕೊನೆಗೆ ಅಶ್ವಿನಿ ಅವರೂ ಎಂಟ್ರಿ ಕೊಟ್ಟು ಎಲ್ಲರ ನಡುವೆ ಕಾದಾಟ ಹೆಚ್ಚಾಗಿತ್ತು. 

78
ಜಾಹ್ನವಿ ಗರಂ
Image Credit : Instagram

ಜಾಹ್ನವಿ ಗರಂ

ಜಾಹ್ನವಿ ನಾನೇನು ಚಿಕ್ಕವಳಾ, ನನಗೇನು ಮೆಚುರಿಟಿ ಇಲ್ವಾ ಎಂದು ಕೇಳಿದಾಗ, ರಕ್ಷಿತಾ ಶೆಟ್ಟಿ ನಾಗವಲ್ಲಿ ನೀವೇ, ಮಧ್ಯರಾತ್ರಿ ಗೆಜ್ಜೆ ಸೌಂಡ್​ ಅಶ್ವಿನಿ ಅವ್ರು ಯಾಕೆ ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದರು. ಇದನ್ನು ಕೇಳಿ ಅಶ್ವಿನಿ ಗೌಡ (Ashwini Gowda) ಕಿಡಿಯಾಗಿದ್ದರು.

88
ಅಶ್ವಿನಿಯಿಂದ ವೈಯಕ್ತಿಕ ನಿಂದನೆ
Image Credit : Instagram

ಅಶ್ವಿನಿಯಿಂದ ವೈಯಕ್ತಿಕ ನಿಂದನೆ

ಜಾಸ್ತಿ ಮಾತನಾಡಬೇಡ, ಮುಚ್ಕೊಂಡು ಮಗಲು. ಹೋಗಿ ನಿನ್ನ ಡ್ರಾಮಾ ಎಲ್ಲಾ ಬಾತ್​ರೂಮ್​ನಲ್ಲಿ ಮಾಡು ಎಂದಿದ್ದಾರೆ. ಅದಕ್ಕೆ ರಕ್ಷಿತಾ ನಾನು ಎಷ್ಟು ಸಲ ಬೇಕಾದ್ರೂ ಬಾತ್​ರೂಮ್​ಗೆ ಹೋಗ್ತೇನೆ. ನಿಮಗೇನು ಎಂದು ಕೇಳಿದಾಗ, ಅಶ್ವಿನಿ ನೀನು ಎಲ್ಲಿಂದ ಬಂದವಳು ಎಂದು ಗೊತ್ತು, ನಿನ್ನನ್ನು ನೋಡಿದ್ರೆ ಗೊತ್ತಾಗತ್ತೆ ಎನ್ನುವ ಮೂಲಕ ತೀರಾ ವೈಯಕ್ತಿಕವಾಗಿ ನಿಂದಿಸಿದ್ದರು. Bigg Boss First Grand Finale ಏನಾಗುತ್ತೋ ನೋಡಬೇಕಿದೆ. 

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್
ಕಿಚ್ಚ ಸುದೀಪ್
ರಕ್ಷಿತ್ ಶೆಟ್ಟಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved