MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಈ ದೇವಾಲಯದಲ್ಲಿ, ಭಕ್ತರಿಗೆ ಪ್ರಸಾದ ರೂಪದಲ್ಲಿ ಸಿಗುತ್ತೆ ಚಿನ್ನ, ಬೆಳ್ಳಿ

ಈ ದೇವಾಲಯದಲ್ಲಿ, ಭಕ್ತರಿಗೆ ಪ್ರಸಾದ ರೂಪದಲ್ಲಿ ಸಿಗುತ್ತೆ ಚಿನ್ನ, ಬೆಳ್ಳಿ

ಪ್ರತಿ ವರ್ಷ ದೀಪಾವಳಿಯಂದು, ರತ್ಲಂನ ಮಹಾಲಕ್ಷ್ಮಿ ದೇವಾಲಯವನ್ನು ಕರೆನ್ಸಿ ನೋಟುಗಳು, ಚಿನ್ನ, ವಜ್ರ ಅಲಂಕರಿಸಲಾಗುತ್ತದೆ. ಇದರಲ್ಲಿ ಕೋಟಿ ರೂಪಾಯಿ ನೋಟುಗಳನ್ನು ಸಹ ಬಳಸಲಾಗುತ್ತದೆ. ಅಷ್ಟೇ ಅಲ್ಲ, ಈ ದೇಗುಲದಲ್ಲಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ಚಿನ್ನದ ನಾಣ್ಯಗಳನ್ನು ನೀಡಲಾಗುತ್ತೆ.  

2 Min read
Author : Suvarna News
Published : Aug 17 2023, 11:42 AM IST
Share this Photo Gallery
  • FB
  • TW
  • Linkdin
  • Whatsapp
17

ಭಾರತದಲ್ಲಿ ತಮ್ಮ ವಿಶಿಷ್ಟತೆಯಿಂದ ಜನಪ್ರಿಯತೆ ಪಡೆದ ಹಲವು ದೇಗುಲಗಳಿವೆ. ಅವುಗಳ ವಿಶಿಷ್ಟತೆ ಕೇಳಿದ್ರೆ, ಹೀಗೂ ಇದೆಯೇ ಎಂದು ಅನಿಸೋವಷ್ಟು ಅಚ್ಚರಿ ಉಂಟಾಗುತ್ತೆ. ಅಂತಹ ಒಂದು ದೇವಾಲಯ ಮಧ್ಯಪ್ರದೇಶದ ರತ್ಲಾಮ್ (Ratlam Mahalakshmi temple) ನಗರದ ಮನಾಕ್‌ನಲ್ಲಿದೆ. ಈ ದೇವಾಲಯವು ಮಹಾಲಕ್ಷ್ಮಿಗೆ ಸಮರ್ಪಿತವಾಗಿದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಸಿಹಿತಿಂಡಿಗಳು ಅಥವಾ ಆಹಾರ ಪದಾರ್ಥಗಳನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಆದರೆ ಮಹಾಲಕ್ಷ್ಮಿಯ ಈ ದೇವಾಲಯದಲ್ಲಿ, ಆಭರಣಗಳನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಈ ದೇವಾಲಯಕ್ಕೆ ಬರುವ ಭಕ್ತನು ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಪ್ರಸಾದವಾಗಿ ಪಡೆಯುತ್ತಾನೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ತಾಯಿಯನ್ನು ನೋಡಲು ಇಲ್ಲಿಗೆ ಬರುತ್ತಾರೆ.
 

27

ಕುಬೇರನ ನಿಧಿ 
ರತ್ಲಂನ ಮಹಾಲಕ್ಷ್ಮಿ ದೇವಾಲಯ ಕುಬೇರನ ನಿಧಿಯಾಗಿ ಪ್ರಸಿದ್ಧವಾಗಿದೆ. ದೀಪಾವಳಿಯ ಐದು ದಿನಗಳವರೆಗೆ, ಇಲ್ಲಿ ಕುಬೇರನ ನಿಧಿ ಇಡಲಾಗುತ್ತೆ. ಈ ಸಮಯದಲ್ಲಿ ದೇಗುಲವನ್ನು ಹೂವುಗಳಿಂದ ಅಥವಾ ಹೂಮಾಲೆಗಳಿಂದ ಅಲಂಕರಿಸುವುದಿಲ್ಲ. ಬದಲಾಗಿ, ನೋಟುಗಳ ಕಟ್ಟುಗಳ ಮಾಲೆ ಮಾಡಲಾಗುತ್ತೆ. ಅಷ್ಟೇ ಅಲ್ಲ ದೇವಿಗೆ ಅಲಂಕಾರವನ್ನು ಚಿನ್ನ ಮತ್ತು ಬೆಳ್ಳಿ ಆಭರಣಗಳಿಂದ (gold and silver ornaments) ಮಾಡಲಾಗುತ್ತದೆ. ಸ್ಥಳೀಯರು ಮಾತ್ರವಲ್ಲದೆ ಇತರ ರಾಜ್ಯಗಳ ಭಕ್ತರು ಸಹ ಇಲ್ಲಿಗೆ ತಮ್ಮ ಚಿನ್ನ, ಹಣ ನೀಡುತ್ತಾರೆ. ಈ ಸಂಪ್ರದಾಯದಿಂದಾಗಿ, ರತ್ಲಂನ ಮಹಾಲಕ್ಷ್ಮಿ ದೇವಾಲಯವನ್ನು ಕುಬೇರನ ನಿಧಿ ಎಂದು ಕರೆಯಲಾಗುತ್ತದೆ.
 

37

3 ದಿನಗಳ ದೀಪಾವಳಿ ಹಬ್ಬದಂದು ರತ್ಲಂನ ಪ್ರಾಚೀನ ಮಹಾಲಕ್ಷ್ಮಿ ದೇವಾಲಯವನ್ನು ನೋಟುಗಳು, ವಜ್ರ, ಮುತ್ತುಗಳು ಮತ್ತು ಆಭರಣಗಳಿಂದ ಅಲಂಕರಿಸಲಾಗುತ್ತದೆ. ಕುಬೇರ ಮತ್ತು ಮಹಾಲಕ್ಷ್ಮಿಯ ಈ ನಿಧಿ ನೋಡಲು ಭಕ್ತರು ಮುಂಜಾನೆ 4 ಗಂಟೆಯಿಂದ ಬರಲು ಪ್ರಾರಂಭಿಸ್ತಾರೆ. 
 

47

ಭಕ್ತರು ಆಭರಣಗಳನ್ನು ಸಹ ಇಲ್ಲಿಡುತ್ತಾರೆ
ಇಲ್ಲಿ ಭಕ್ತರು ನೋಟುಗಳ ಕಟ್ಟುಗಳ ಜೊತೆ ತಮ್ಮ ಆಭರಣಗಳನ್ನು ಇಡುತ್ತಾರೆ. ಅನೇಕ ಭಕ್ತರು ತಮ್ಮ ಹಣವನ್ನು ಈ ದೇವಾಲಯದಲ್ಲಿ ಇಡುತ್ತಾರೆ. ಕುಬೇರನ ನಿಧಿಯು ದೇವಾಲಯದಾದ್ಯಂತ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈ ಕುಬೇರನ ನಿಧಿಯನ್ನು ನೋಡಲು ಸಾವಿರಾರು ಭಕ್ತರು 5 ದಿನಗಳ ಕಾಲ ದೂರದ ಸ್ಥಳಗಳಿಂದ ಬರುತ್ತಾರೆ. ಆಡಳಿತವು ದೇವಾಲಯದಲ್ಲಿ ಬಿಗಿ ಭದ್ರತೆಗೆ ವ್ಯವಸ್ಥೆ ಮಾಡುತ್ತದೆ. ಇಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ. ಇದಲ್ಲದೆ, ಪೊಲೀಸ್ ವ್ಯವಸ್ಥೆಯೂ ಇಲ್ಲಿದೆ.

57

ಪುರೋಹಿತರು ಏನು ಹೇಳುತ್ತಾರೆ?
ಈ ಪ್ರಾಚೀನ ದೇವಾಲಯದಲ್ಲಿ ಈ ಸಂಪ್ರದಾಯವು ವರ್ಷಗಳಿಂದ ಇದೆ ಎಂದು ದೇವಾಲಯದ ಅರ್ಚಕರು ಹೇಳುತ್ತಾರೆ. ಮಹಾಲಕ್ಷ್ಮಿ ತನ್ನ ಸಂಪತ್ತನ್ನು ಇಲ್ಲಿ ಇಡುವ ಮೂಲಕ ಸಂತೋಷವಾಗಿದ್ದಾಳೆ ಎಂದು ನಂಬಲಾಗಿದೆ. 

67

ಭಕ್ತರಿಗೆ ಪ್ರಸಾದದ ರೂಪದಲ್ಲಿ ಸಿಗುತ್ತೆ ಚಿನ್ನ ಮತ್ತು ಬೆಳ್ಳಿ
ಇಲ್ಲಿಗೆ ಬರುವ ಭಕ್ತರು ಆಭರಣಗಳು ಮತ್ತು ಹಣವನ್ನು ತಾಯಿಯ ಪಾದಗಳಿಗೆ ಅರ್ಪಿಸುತ್ತಾರೆ. ಧಂತೇರಸ್‌ನಿಂದ ಐದು ದಿನಗಳ ಕಾಲ ಈ ದೇವಾಲಯದಲ್ಲಿ ದೀಪೋತ್ಸವವನ್ನು ಆಯೋಜಿಸಲಾಗುತ್ತದೆ. ಈ ಐದು ದಿನಗಳಲ್ಲಿ, ಭಕ್ತರು ನೀಡುವ ಆಭರಣಗಳು ಮತ್ತು ಹಣದಿಂದ ತಾಯಿಯನ್ನು ಅಲಂಕರಿಸಲಾಗುತ್ತದೆ. ದೀಪೋತ್ಸವದ ಸಮಯದಲ್ಲಿ ಕುಬೇರನ ಆಸ್ಥಾನವನ್ನು ದೇವಾಲಯದಲ್ಲಿ ಸ್ಥಾಪಿಸಲಾಗುತ್ತದೆ. ಈ ಆಸ್ಥಾನಕ್ಕೆ ಬರುವ ಭಕ್ತರಿಗೆ ಆಭರಣಗಳು ಮತ್ತು ಹಣವನ್ನು ಪ್ರಸಾದವಾಗಿ ನೀಡಲಾಗುತ್ತದೆ. ದೀಪಾವಳಿ ದಿನದಂದು, ದೇವಾಲಯದ ಬಾಗಿಲು 24 ಗಂಟೆಗಳ ಕಾಲ ತೆರೆದಿರುತ್ತವೆ ಎಂದು ಹೇಳಲಾಗುತ್ತದೆ. ಧಂತೇರಸ್ ದಿನದಂದು, ಇಲ್ಲಿಗೆ ಬರುವ ಮಹಿಳಾ ಭಕ್ತರಿಗೆ ಕುಬೇರನ ಮಡಕೆಯನ್ನು ನೀಡಲಾಗುತ್ತದೆ. ಈ ದೇವಾಲಯಕ್ಕೆ ಬರುವ ಭಕ್ತನು ಬರಿಗೈಯಲ್ಲಿ ಹಿಂದಿರುಗುವುದಿಲ್ಲ.
 

77

ದಶಕಗಳಿಂದ ಆಭರಣಗಳನ್ನು ಅರ್ಪಿಸುವ ಸಂಪ್ರದಾಯವಿದೆ:
ಅನೇಕ ದಶಕಗಳಿಂದ, ಈ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಭರಣಗಳು ಮತ್ತು ಹಣ ಅರ್ಪಿಸುವ ಸಂಪ್ರದಾಯವಿದೆ. ರಾಜರು ತಮ್ಮ ರಾಜ್ಯದ ಸಮೃದ್ಧಿಗಾಗಿ ಇಲ್ಲಿ ಹಣವನ್ನು ಅರ್ಪಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಅಂದಿನಿಂದ ಇಂದಿನವರೆಗೆ, ಭಕ್ತರು ಇಲ್ಲಿ ಆಭರಣಗಳು, ಹಣ ಇತ್ಯಾದಿಗಳನ್ನು ಅರ್ಪಿಸುತ್ತಾರೆ. ಇದನ್ನು ಮಾಡಿದರೆ, ತಾಯಿಯ ಅನುಗ್ರಹ ಯಾವಾಗಲೂ ತನ್ನ ಭಕ್ತರ ಮೇಲೆ ಇರುತ್ತದೆ ಎಂದು ನಂಬಲಾಗಿದೆ.


 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಚಿನ್ನ

Latest Videos
Recommended Stories
Recommended image1
ಇದು 'ಭಾರತದ ಪುಟ್ಟ ಇಂಗ್ಲೆಂಡ್', ಬೆಂಗಳೂರಿನಿಂದ ಕೆಲವೇ ಗಂಟೆಗಳ ದೂರದಲ್ಲಿದೆ
Recommended image2
ಅಯ್ಯಯ್ಯೋ! ಬೆಂಗಳೂರು ಹೋಟೆಲ್‌ನಲ್ಲಿ ನನ್ ಚಿನ್ನದ ಸರ ಕದ್ದವ್ರೇ ಎಂದ ಯುವತಿ; ಅಸಲಿ ಸತ್ಯ ಬಿಚ್ಚಿಟ್ಟ ಸಿಬ್ಬಂದಿ!
Recommended image3
ರೈಲಿನಲ್ಲಿ ಹಿರಿಯ ನಾಗರಿಕರಿಗೆ ಮತ್ತೆ ಸಿಗುತ್ತಾ ಟಿಕೆಟ್ ರಿಯಾಯಿತಿ? ಇಲ್ಲಿದೆ ಲೇಟೆಸ್ಟ್ ಅಪ್‌ಡೇಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved