MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಚಿಕ್ಕಮಗಳೂರು: ಕಳಪೆ ಬೀಜ ಮಾರಾಟ; ಬಿತ್ತನೆ ಮಾಡಿದ ರೈತನ ಬದುಕು ಮೂರಾಬಟ್ಟೆ!

ಚಿಕ್ಕಮಗಳೂರು: ಕಳಪೆ ಬೀಜ ಮಾರಾಟ; ಬಿತ್ತನೆ ಮಾಡಿದ ರೈತನ ಬದುಕು ಮೂರಾಬಟ್ಟೆ!

ಸಾಲ ಮಾಡಿ ಕಲ್ಲಂಗಡಿ ಬೆಳೆದ  ರೈತ ಕಣ್ಣೀರು ಹಾಕುವ ಪರಿಸ್ಥಿತಿ ಚಿಕ್ಕಮಗಳೂರು ಬಯಲುಸೀಮೆ ಭಾಗದಲ್ಲಿ ಎದುರಾಗಿದೆ.ಬಯಲುಸೀಮೆಭಾಗವಾದ  ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ನಾಗರಾಳ ಗ್ರಾಮದ ರೈತ ಗುರುಶಾಂತಪ್ಪ ಕಲ್ಲಂಗಡಿ ಬೆಳೆದು ಸಂಕಷ್ಟಕ್ಕೆ ಒಳಾಗಿದ್ದಾರೆ. ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

2 Min read
Author : Suvarna News
| Updated : Jan 05 2025, 12:02 AM IST
Share this Photo Gallery
  • FB
  • TW
  • Linkdin
  • Whatsapp
15

ಇದ್ದ ಎರಡು ವರೆ ಎಕರೆಯಲ್ಲಿ 4 ಲಕ್ಷಕ್ಕೂ ಅಧಿಕ ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ರು. ಕಲ್ಲಂಗಡಿ ಬೆಳೆ 60 ದಿನಗಳ ಕಾಲ ಅಕ್ಕಪಕ್ಕದ ಜಮೀನಿಗಿಂತ ಹುಲುಸಾಗಿ, ಸಲೀಸಾಗಿ ಬೆಳೆದಿತ್ತು. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಬಳ್ಳಿಯಲ್ಲಿ ಗಿಡದ ತುಂಬಾ ಹೂ. ಆ ರೈತ ಕೂಡ ಹಾಕಿದ ಹಣಕ್ಕೆ ಮೋಸ ಇಲ್ಲ ಎಂದೇ ಭಾವಿಸಿದ್ದ. ಆದ್ರೆ, ಹೂವಾದ ಕಲ್ಲಂಗಡಿ ಕಾಯಾಗಲೇ ಇಲ್ಲ. ವಿಜ್ಞಾನಿಗಳು ಸ್ಥಳಕ್ಕೆ ಬಂದು ನೋಡಿದಾಗ ಕನ್ಫರ್ಮ್ ಆಯ್ತು. ಅದು ನಕಲಿ ಬೀಜ ಅಂತ. ರೈತನಿಗೆ ಒಂದೇ ಕ್ಷಣಕ್ಕೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ
 

25
ಬೀಜದ ಕಂಪನಿ ವಿರುದ್ಧ ಆಕ್ರೋಶ

ಬೀಜದ ಕಂಪನಿ ವಿರುದ್ಧ ಆಕ್ರೋಶ

ಕಡೂರು ಪಟ್ಟಣದ ಓಂಕಾರೇಶ್ವರ ಅಂಗಡಿಯಿಂದ ಓಡೋಪಸ್ ಕಲ್ಲಂಗಡಿ ಬೀಜವನ್ನ ತಂದು ಉಳುಮೆ ಮಾಡಿದ್ದರು. ರೈತ ಗುರುಶಾಂತಪ್ಪ ಸುಪ್ರಿತಾ ಹೆಸರಿನ ಬೀಜ ತರಲು ಹೋಗಿದ್ದರು. ಆದರೆ, ಅಂಗಡಿ ಮಾಲೀಕ ಓಡೋಪಸ್ ತೆಗೆದುಕೊಳ್ಳಿ ತುಂಬಾ ಚೆನ್ನಾಗಿದೆ. ಕಲ್ಲಂಗಡಿ 18-20 ಕೆಜಿ ಬರುತ್ತೆ ಎಂದು ಹೇಳಿ ಕೊಟ್ಟಿದ್ದರು. ಆದರೆ, ತಂದು ನೆಟ್ಟು ಗೊಬ್ಬರ, ನೀರು, ಔಷಧಿ ಸಿಂಪಡಿಸಿದ ಬಳಿಕ ಸಮೃದ್ಧವಾಗಿ ಬೆಳೆದಿತ್ತು. ಹೂವು ಆಗಿತ್ತು. ಆದರೆ, ಹೂವು ಕಾಯಾಗದೆ 4 ಲಕ್ಷದ 30 ಸಾವಿರ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಇದೀಗ, ನೊಂದ ರೈತ ಸರ್ಕಾರ, ಗೊಬ್ಬರ ವ್ಯಾಪಾರಿ, ಬೀಜದ ಕಂಪನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
 

35
ಡಿಸಿ ಕಚೇರಿ ಮುಂಭಾಗ ಪ್ರತಿಭಟನೆಯ ಎಚ್ಚರಿಕೆ :

ಡಿಸಿ ಕಚೇರಿ ಮುಂಭಾಗ ಪ್ರತಿಭಟನೆಯ ಎಚ್ಚರಿಕೆ :

ರೈತರ ಹೊಲಕ್ಕೆ ಭೇಟಿ ನೀಡಿದ ವಿಜ್ಞಾನಿಗಳು ಕಳಪೆ ಬೀಜ. ಗಂಡು ಬೀಜ. ಹೂವಾಗಿದೆ, ಕಾಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೀಗ, ರೈತರ ಹೊಲಕ್ಕೆ ಭೇಟಿ ನೀಡ್ತಿರೊ ರೈತ ಮುಖಂಡರು ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ. 

45
ರೈತರ ಆಕ್ರೋಶ

ರೈತರ ಆಕ್ರೋಶ

ಸಾವಿರಾರು ರೂಪಾಯಿ ಹಣ ನೀಡಿ ಬೀಜ ತಂದು, ಗೊಬ್ಬರ ಹಾಕಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ರು ಬೆಳೆ ಈ ರೀತಿಯಾದ್ರೆ ರೈತ ಏನು ಮಾಡಬೇಕು. ಅತಿವೃಷ್ಟಿ-ಅನಾವೃಷ್ಟಿಯಾದ್ರೆ ಹಣೆಬರಹ ಎಂದು ಸುಮ್ಮನಾಗಬಹುದು. ಆದ್ರೆ, ರೈತರ ಮೇಲೆ ಸರ್ಕಾರ ಹಾಗೂ ಬೀಜದ ಕಂಪನಿಗಳು ಈ ರೀತಿ ಸವಾರಿ ಮಾಡಿದರೆ ಏನಾಗಬೇಕು. ಅನ್ನ ನೀಡುವ ಕೈ ಮಣ್ಣಾಗಲಿದೆ. ಕೂಡಲೇ ಸರ್ಕಾರ ಕುಲಾಂತರಿ ಬೀಜಗಳ ಬಗ್ಗೆ ಎಚ್ಚರ ವಹಿಸಬೇಕು. ನಷ್ಟದಿಂದ ಕಣ್ಣೀರಿಡ್ತಿರೋ ರೈತನಿಗೆ ಸರ್ಕಾರ, ಕಂಪನಿ, ಏಜೆನ್ಸ್ ಹಾಗೂ ಮಾರಾಟಗಾರರಿಂದ ನಷ್ಟ ಭರಿಸಿಕೊಡಬೇಕು. ಇಲ್ಲವಾದರೆ, ಜಿಲ್ಲಾಧಿಕಾರಿ ಕಚೇರಿ ಬಳಿಕ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ. 

55
ಕಾಫಿನಾಡು ರೈತರ ಪರಿಸ್ಥಿತಿ

ಕಾಫಿನಾಡು ರೈತರ ಪರಿಸ್ಥಿತಿ

ಒಟ್ಟಾರೆ, ಈಗ್ಲೇ ಹೊಲಗದ್ದೆ-ತೋಟಗಳಲ್ಲಿ ಕೆಲಸ ಮಾಡೋದಕ್ಕೆ ಜನ ಸಿಗ್ತಿಲ್ಲ. ದಿನಕ್ಕೆ 750 ರೂಪಾಯಿ ಕೂಲಿ ಒಂದು ಹೊತ್ತು ಊಟ ಅಂದ್ರು ಜನ ಬರ್ತಿಲ್ಲ. ಮಳೆ ನಂಬಿ ಕೃಷಿ ಮಾಡಲಾಗದೆ ಅನ್ನ ನೀಡೋ ಗದ್ದೆಗಳು ಸೈಟ್-ಲೇಔಟ್ ಆಗುತ್ತಿವೆ. ಈ ಮಧ್ಯೆ ಗೊಬ್ಬರದ ಕಂಪನಿ, ಮಾರಾಟಗಾರರು ಹಾಗೂ ಸರ್ಕಾರ ಈ ರೀತಿ ಮಾಡಿದ್ರೆ ರೈತ ತನ್ನ ತಲೆ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಳ್ಳುತ್ತಾನೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News
ಚಿಕ್ಕಮಗಳೂರು
ರೈತರು
ಕೃಷಿ

Latest Videos
Recommended Stories
Recommended image1
ಅಜೀಂ ಪ್ರೇಮ್‌ಜಿ ವಿವಿಯಲ್ಲಿ ದೇಶವಿರೋಧಿ ಚಟುವಟಿಕೆ ಆರೋಪ, ಪ್ರತಿಭಟಿಸಿದ ಎಬಿವಿಪಿ ವಿದ್ಯಾರ್ಥಿಗಳು ಅರೆಸ್ಟ್
Recommended image2
ಪುತ್ತೂರು ಬಿಜೆಪಿ ನಾಯಕನ ಪುತ್ರನಿಂದ ಸಹಪಾಠಿಗೆ ಮಗು ಕರುಣಿಸಿದ ಪ್ರಕರಣ: ಆತ್ಮ*ಹತ್ಯೆಗೆ ಯತ್ನಿಸಿದ ಮಗುವಿನ ತಾಯಿ
Recommended image3
ಲಾಡ್-ಜಕ್ಕಪ್ಪನವರ ಜಟಾಪಟಿ: 120 ಎಕರೆ ಭೂಮಿ ಹುಡುಕಾಟದಲ್ಲಿ ಹೈರಾಣದ್ರು ಅಧಿಕಾರಿಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved