MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • 'ಸಿಕ್ಕರೇ.. ಸಿಕ್ಕರೇ... ಒಳ್ಳೆ ಹುಡುಗ್ರು ಸಿಕ್ಕರೇ..': ಲೈಫ್‌ ಟುಡೇ ಚಿತ್ರದಲ್ಲಿ ಜೋಗಿ ಪ್ರೇಮ್‌ ಗಾಯನ

'ಸಿಕ್ಕರೇ.. ಸಿಕ್ಕರೇ... ಒಳ್ಳೆ ಹುಡುಗ್ರು ಸಿಕ್ಕರೇ..': ಲೈಫ್‌ ಟುಡೇ ಚಿತ್ರದಲ್ಲಿ ಜೋಗಿ ಪ್ರೇಮ್‌ ಗಾಯನ

ಸಿಕ್ಕರೆ ಸಿಕ್ಕರೆ ಒಳ್ಳೆ ಹುಡುಗ್ರು ಸಿಕ್ಕರೇ ಎಂಬ ಹಾಡು ತುಂಬಾ ಇಷ್ಟ ಆಗಿತ್ತು. ಸಾಹಿತ್ಯ ತುಂಬಾ ಚೆನ್ನಾಗಿದೆ. ಹಾಗಾಗಿ ದೊಡ್ಡ ದೊಡ್ಡ ಸಿಂಗರ್‌ಗಳಿದ್ದಾರೆ, ಶಂಕರ್‌ ಮಹಾದೇವ್‌ ಅವರಂಥ ದೊಡ್ಡ ಗಾಯಕರಿದ್ದಾರೆ.

1 Min read
Govindaraj S
Published : Sep 10 2025, 06:20 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Social Media

ಜಲ್ಸಾ ಮತ್ತು 'ಇರುವುದೆಲ್ಲವ ಬಿಟ್ಟು' ಸಿನಿಮಾಗಳ ನಿರ್ದೇಶಕ ಕಾಂತ ಕನ್ನಲ್ಲಿ ನಿರ್ದೇಶನದ ಚಿತ್ರ ಲೈಫ್ ಟುಡೇ ಸಿನಿಮಾ ಚಿತ್ರೀಕರಣ ಪೂರ್ಣಗೊಂಡು ಇದೀಗ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ.

26
Image Credit : Social Media

ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗ್ತಿರುವ ಈ ಚಿತ್ರದ ತಮಿಳು ವರ್ಷಶ್ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಜೀವಿ ಪ್ರಕಾಶ್ ಧನಿಯಾಗಿದ್ದ ಸುದ್ದಿ ನಿಮಗೆಲ್ಲಾ ತಿಳಿದೆ ಇದೆ.

Related Articles

Related image1
ಭಯಪಟ್ಟು ಮಾಡಿರುವ ಪಾತ್ರ ನನ್ನದು.. ತುಂಬಾ ಖುಷಿ ಇದೆ: ಪ್ರಜ್ವಲ್ ದೇವರಾಜ್ ಹೇಳಿದ್ದೇನು?
Related image2
ವಿಶ್ವಾದ್ಯಂತ ಒಂದೇ ದಿನ ರಿಷಬ್‌ ಶೆಟ್ಟಿ 'ಕಾಂತಾರ ಚಾಪ್ಟರ್ 1' ಬಿಡುಗಡೆ
36
Image Credit : Social Media

ಇದೀಗ ಅದೇ ಹಾಡಿನ ಕನ್ನಡ ವರ್ಶನ್‌ 'ಸಿಕ್ಕರೇ.. ಸಿಕ್ಕರೇ... ಒಳ್ಳೆ ಹುಡುಗ್ರು ಸಿಕ್ಕರೇ..' ಹಾಡಿಗೆ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಡೈರೆಕ್ಚರ್ ಜೋಗಿ ಪ್ರೇಮ್ ದನಿಯಾಗಿದ್ದಾರೆ.

46
Image Credit : Social Media

ಸಿಕ್ಕರೆ ಸಿಕ್ಕರೆ ಒಳ್ಳೆ ಹುಡುಗ್ರು ಸಿಕ್ಕರೇ ಎಂಬ ಹಾಡು ತುಂಬಾ ಇಷ್ಟ ಆಗಿತ್ತು. ಸಾಹಿತ್ಯ ತುಂಬಾ ಚೆನ್ನಾಗಿದೆ. ಹಾಗಾಗಿ ದೊಡ್ಡ ದೊಡ್ಡ ಸಿಂಗರ್‌ಗಳಿದ್ದಾರೆ, ಶಂಕರ್‌ ಮಹಾದೇವ್‌ ಅವರಂಥ ದೊಡ್ಡ ಗಾಯಕರಿದ್ದಾರೆ.

56
Image Credit : Social Media

ಅವರಲ್ಲಿ ಹಾಡಿಸಿ ಎಂದಿದ್ದೆ. ಆದರೆ ನಾನೇ ಹಾಡಬೇಕು ಎಂದು ಚಿತ್ರತಂಡದ ಬೇಡಿಕೆ ಆಗಿತ್ತು. ಸಂಗೀತ ಗೊತ್ತಿಲ್ಲ. ಆದರೆ ಸಂಗೀತ ಜ್ಞಾನ ಇದೆ ಎಂದರು ನಿರ್ದೇಶಕ ಜೋಗಿ ಪ್ರೇಮ್.

66
Image Credit : Social Media

ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ನಿರ್ದೇಶನ, ರಾಮ್‌ ನಾರಾಯಣ್‌ ಸಾಹಿತ್ಯ ಬರೆದಿರುವ ಹಾಡು ಇದಾಗಿದೆ. ಕನ್ನಡ ಹಾಗೂ ತಮಿಳಿನಲ್ಲಿ ಮೂಡಿ ಬರಲಿರುವ ಚಿತ್ರ ಇದಾಗಿದ್ದು, ತಮಿಳಿನಲ್ಲಿ ಇದೇ ಹಾಡನ್ನು ಜಿ.ವಿ. ಪ್ರಕಾಶ್‌ ಹಾಡಿದ್ದಾರೆ. ನಿರ್ಮಾಪಕ ಪ್ರದೀಪ್‌, ನಾಯಕ ಕಿರಣ್ ಆದಿತ್ಯ ಹಾಜರಿದ್ದರು. ಲೇಖಚಂದ್ರ ಚಿತ್ರದ ನಾಯಕಿ. ತಬಲನಾಣಿ, ಅಪೂರ್ವ, ಕಾಕ್ರೋಚ್‌ ಸುಧಿ, ಜಗ್ಗಪ್ಪ ತಾರಾಗಣದಲ್ಲಿದ್ದಾರೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಸ್ಯಾಂಡಲ್ವುಡ್ ಫಿಲ್ಮ್
ಸಿನಿಮಾ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved