MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ನೂರೊಂದು ನೆನಪು ಎದೆಯಾಳದಿಂದ... ಹಾಡಿಗೆ 'ಅಣ್ಣಯ್ಯ' ಶಿವು ದನಿಯಾದ್ರೆ ಹೀಗಿರತ್ತೆ ನೋಡಿ...

ನೂರೊಂದು ನೆನಪು ಎದೆಯಾಳದಿಂದ... ಹಾಡಿಗೆ 'ಅಣ್ಣಯ್ಯ' ಶಿವು ದನಿಯಾದ್ರೆ ಹೀಗಿರತ್ತೆ ನೋಡಿ...

'ಅಣ್ಣಯ್ಯ' ಸೀರಿಯಲ್ ಖ್ಯಾತಿಯ ನಟ ವಿಕಾಶ್ ಉತ್ತಯ್ಯ, ವಿಷ್ಣುವರ್ಧನ್ ಅವರ 'ನೂರೊಂದು ನೆನಪು' ಹಾಡಿಗೆ ಲಿಪ್‌ಸಿಂಕ್ ಮಾಡಿ ಗಮನ ಸೆಳೆದಿದ್ದಾರೆ. ಮೂಲತಃ ಕೊಡಗಿನವರಾದ ಇವರು, ವಕೀಲ ವೃತ್ತಿ ಬಿಟ್ಟು ನಟನೆಗೆ ಬಂದಿದ್ದು, 'ಅಪಾಯವಿದೆ ಎಚ್ಚರಿಕೆ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

2 Min read
Suchethana D
Published : Sep 22 2025, 06:40 PM IST
Share this Photo Gallery
  • FB
  • TW
  • Linkdin
  • Whatsapp
17
ಬಂಧನ ಚಿತ್ರವನ್ನು ನೆನಪಿಸಿದ ಅಣ್ಣಯ್ಯ
Image Credit : our own

ಬಂಧನ ಚಿತ್ರವನ್ನು ನೆನಪಿಸಿದ ಅಣ್ಣಯ್ಯ

ನೂರೊಂದು ನೆನಪು ಎದೆಯಾಳದಿಂದ... 1984ರಲ್ಲಿ ಬಿಡುಗಡೆಗೊಂಡ ನಟ ವಿಷ್ಣುವರ್ಧನ್​- ಸುಹಾಸಿನಿ ನಟನೆಯ ಬಂಧನ ಚಿತ್ರದ ಈ ಹಾಡು ಇಂದಿಗೂ ಹಚ್ಚ ಹಸಿರಾಗಿದೆ. ಭಗ್ನಪ್ರೇಮಿಗಳ ಕಣ್ಣಲ್ಲಿ ನೀರು ತರಿಸುವ ಈ ಹಾಡನ್ನು ಇಂದಿಗೂ ಅದೆಷ್ಟೋ ಮಂದಿ ಗುನುಗುನಿಸುತ್ತಲೇ ಇದ್ದಾರೆ. ಮೊನ್ನೆ ತಾನೇ, ಅಂದರೆ ಇದೇ ಸೆಪ್ಟೆಂಬರ್​ 18ರಂದು ಅವರ 75ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಇದೇ ಸಂದರ್ಭದಲ್ಲಿ ಅವರಿಗೆ ಕರ್ನಾಟಕ ಸರ್ಕಾರ 'ಕರ್ನಾಟಕ ರತ್ನ' ಎಂದು ಘೋಷಿಸುವ ಮೂಲಕ ವಿಶೇಷ ರೀತಿಯಲ್ಲಿ ಗೌರವವನ್ನೂ ಸಲ್ಲಿಸಿದೆ. ಈ ದಿನದಂದು ಅವರ ಹಲವು ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ನಟನನ್ನು ನೆನಪಿಸಿಕೊಂಡಿದ್ದಾರೆ.

27
ನೂರೊಂದು ನೆನಪು... ಹಾಡಿಗೆ ಲಿಪ್​ಸಿಂಕ್​
Image Credit : Instagram

ನೂರೊಂದು ನೆನಪು... ಹಾಡಿಗೆ ಲಿಪ್​ಸಿಂಕ್​

ಅಣ್ಣಯ್ಯ ಸೀರಿಯಲ್​ ಖ್ಯಾತಿಯ ಶಿವು ಅರ್ಥಾತ್​ ಅವರು, ವಿಕಾಶ್​ ಉತ್ತಯ್ಯ (Vikash Uthaiah) ಅವರು ಈ ಹಾಡಿಗೆ ಲಿಪ್​ಸಿಂಕ್​ ಮಾಡಿದ್ದು, ತಮ್ಮ ಭಾವನೆಯ ಮೂಲಕವೇ ಹಾಡಿಗೆ ಅರ್ಥ ಕಲ್ಪಿಸಿದ್ದಾರೆ. ಇದನ್ನು ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಣ್ಣಿನಲ್ಲಿಯೇ ನೂರೊಂದು ನೆನಪು ಹಾಡಿನ ಅರ್ಥ ಹೇಳಿದ್ರಿ ಎಂದು ಭೇಷ್​ ಭೇಷ್​ ಎನ್ನುತ್ತಿದ್ದಾರೆ. ಅಷ್ಟಕ್ಕೂ ವಿಕಾಶ್​ ಅವರು ವಿಷ್ಣುವರ್ಧನ್​ ಅವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಂಡು ಈ ಹಾಡನ್ನು ಹಾಡಿದ್ದಾರೆ.

Related Articles

Related image1
Annayya Serial ಶಿವು-ಪಾರು ರಿಯಲ್‌ ಲೈಫ್‌ನಲ್ಲೂ ಒಂದಾಗ್ತಾ ಇದ್ದಾರಾ? ಮದುವೆ ಬಗ್ಗೆ ನಟಿ ಹೇಳಿದ್ದೇನು?
Related image2
'ಯಾವ ಸಮಸ್ಯೆಯಿಂದ ದಪ್ಪಗಾದ್ರಿ' ಎಂಬ ಪ್ರಶ್ನೆಗೆ Annayya Serial ಗುಂಡಮ್ಮನ ಉತ್ತರ ಕೇಳಿ....
37
ಕೊಡಗಿನ ನಟ ವಿಷ್ಣುವರ್ಧನ್​ ಅಭಿಮಾನಿ
Image Credit : our own

ಕೊಡಗಿನ ನಟ ವಿಷ್ಣುವರ್ಧನ್​ ಅಭಿಮಾನಿ

ಇನ್ನು ನಟ ವಿಕಾಶ್ ಉತ್ತಯ್ಯ ಅವರ ಕುರಿತು ಹೇಳುವುದಾದರೆ, ಅವರ ಅಪಾಯವಿದೆ ಎಚ್ಚರಿಕೆ ಕಳೆದ ಫೆಬ್ರುವರಿಯಲ್ಲಿ ರಿಲೀಸ್​ ಆಗಿದೆ. ಇನ್ನು ಮೂಲತಃ ಕೊಡಗಿನವರಾಗಿರುವ ವಿಕಾಶ್‌ ಉತ್ತಯ್ಯ ಅವರು ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ವಕೀಲರಾಗಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ನಟರಾಗಿದ್ದಾರೆ. ವಿಷ್ಣುವರ್ಧನ್​ ಅವರ ಫ್ಯಾನ್​ ಕೂಡ.

47
ಸಿನಿಮಾದಲ್ಲಿಯೂ ಅಭಿನಯ
Image Credit : social media

ಸಿನಿಮಾದಲ್ಲಿಯೂ ಅಭಿನಯ

ವಿಕಾಶ್ ಉತ್ತಯ್ಯ ಅವರು ಸೀರಿಯಲ್ ಗೆ ಬರುವ ಮುನ್ನ ಕೆಲ ಸಿನಿಮಾಗಳಲ್ಲಿ ಅಭಿನಯಿದ್ದಾರೆ. ಈ ಹಿಂದೆ ಮೇರಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಇವರು, ಇತ್ತೀಚೆಗೆ 2023ರಲ್ಲಿ ದ್ವಂದ್ವ ದ್ವಯಂ, ಆನೆ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ, ಕನಸಿನ ಮಳೆಯಾದವರು ಎಂಬ ಶಾರ್ಟ್ ಫಿಲ್ಮನಲ್ಲೂ ನಟಿಸಿದ್ದಾರೆ.

57
ಲವ್​ ಬಗ್ಗೆ ಹೇಳಿದ್ದ ವಿಕಾಶ್​
Image Credit : vikash uthaiah instagram

ಲವ್​ ಬಗ್ಗೆ ಹೇಳಿದ್ದ ವಿಕಾಶ್​

ಈಚೆಗೆ ಅವರು ತಮ್ಮ ಜೀವನದ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದರು. ವಿಕಾಶ್​ ಅವರು, ಕೆಲ ದಿನಗಳ ಹಿಂದೆ ನಾನು ಲವ್​ನಲ್ಲಿ ಬಿದ್ದಿದ್ದೇನೆ, ಅವಳಿಗೆ ಹೇಳುವ ಮುನ್ನ ನಿಮಗೆ ಹೇಳುತ್ತೇನೆ ಎಂದು ವಿಡಿಯೋ ಹರಿಬಿಟ್ಟು ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದರು. ಆದರೆ ಸೋಷಿಯಲ್​ ಮೀಡಿಯಾದಲ್ಲಿ ಆ ಹೆಸರನ್ನು ಕಲ್ಪನೆ ಮಾಡಿಕೊಂಡು ವಿಡಿಯೋಗಳೆಲ್ಲಾ ಹರಿದಾಡಿಬಿಟ್ಟಿದ್ದವು. ಆ ಹುಡುಗಿ ಇವಳೇ ಇರಬೇಕು ಎಂದು ಯಾರದ್ಯಾರದ್ದೋ ಫೋಟೋ ಹಾಕಿಬಿಟ್ಟಿದ್ದರು. ಇದರಿಂದ ನಟ ಕೈಲಾಶ್​ ಫುಲ್ ಸುಸ್ತಾಗಿ ಹೋದ್ರಂತೆ. ಕೊನೆಗೆ ಅವರು, ನನಗೆ ಲವ್​ ಆಗಿರೋದು ಅಪಾಯವಿದೆ ಎಚ್ಚರಿಕೆ ಮೇಲೆ ಎಂದಿದ್ದರು.

ಇದನ್ನೂ ಓದಿ: ಈ ಪುಟಾಣಿಯೇ ನಿಮ್ಮನೆಗೆ ಪ್ರತಿದಿನ ಬರ್ತಿರೋ 'ಅಣ್ಣಯ್ಯ' ಪಾರು! ಆ್ಯಂಕರಿಂಗ್​ ನೋಡಿ ಫ್ಯಾನ್ಸ್​ ಫಿದಾ...

67
ಕೊಡಗಿನ ವಿಕಾಶ್​
Image Credit : vikash uthaiah instagram

ಕೊಡಗಿನ ವಿಕಾಶ್​

ಕೊಡಗಿನವರಾಗಿರುವ ವಿಕಾಶ್‌, ವಕೀಲರಾಗಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸಕ್ತಿಯಿಂದ ಬಣ್ಣದ ಲೋಕ ಆರಿಸಿಕೊಂಡಿದ್ದಾರೆ. ಇದಾಗಲೇ ಕೆಲವು ಸೀರಿಯಲ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೇರಿ ಎಂಬ ಸಿನಿಮಾದಲ್ಲಿಯೂ ನಟಿಸಿದ್ದರು. 2023ರಲ್ಲಿ ದ್ವಂದ್ವ ದ್ವಯಂ, ಆನೆ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿರುವ ಇವರು, ಕನಸಿನ ಮಳೆಯಾದವರು ಎಂಬ ಶಾರ್ಟ್ ಫಿಲ್ಮನಲ್ಲೂ ನಟಿಸಿದ್ದಾರೆ.

77
ರಾಧಾ ಭಗವತಿ ಜೊತೆ ನಟನೆ
Image Credit : our own

ರಾಧಾ ಭಗವತಿ ಜೊತೆ ನಟನೆ

ಅಪಾಯವಿದೆ ಎಚ್ಚರಿಕೆಯಲ್ಲಿ ವಿಕಾಶ್‌ ಜೊತೆಯಾಗಿ ಅಮೃತಧಾರೆಯ ಮಲ್ಲಿ ಅಂದ್ರೆ ನಟಿ ರಾಧಾ ಭಾಗವತಿ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಮಂಜುನಾಥ್ ವಿ ಜಿ ಹಾಗೂ ಪೂರ್ಣಿಮಾ ಗೌಡ ಅವರು ಹಣ ಹೂಡಿದ್ದಾರೆ. ಸುನಾದ್ ಗೌತಮ್ ಅವರ ಸಂಗೀತ ಈ ಚಿತ್ರಕ್ಕಿದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದೆ.

 
 
 
 
View this post on Instagram
 
 
 
 
 
 
 
 
 
 
 

A post shared by Vikash Uthaiah (@vikash_uthaiah)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಣ್ಣಯ್ಯ ಧಾರಾವಾಹಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ಸಂಬಂಧಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved