MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಕೆಜಿಎಫ್ ‘ಚಾಚಾ’ ಹರೀಶ್ ರಾಯ್‌ಗೆ ಕ್ಯಾನ್ಸರ್‌: ಚಿಕಿತ್ಸೆ ವೆಚ್ಚ ಭರಿಸುವುದಾಗಿ ಘೋಷಿಸಿದ ಧ್ರುವ ಸರ್ಜಾ

ಕೆಜಿಎಫ್ ‘ಚಾಚಾ’ ಹರೀಶ್ ರಾಯ್‌ಗೆ ಕ್ಯಾನ್ಸರ್‌: ಚಿಕಿತ್ಸೆ ವೆಚ್ಚ ಭರಿಸುವುದಾಗಿ ಘೋಷಿಸಿದ ಧ್ರುವ ಸರ್ಜಾ

ನನಗೆ ಚಿರು ಸರ್ಜಾ ಅವರಷ್ಟು ಧ್ರುವ ಸರ್ಜಾ ಕ್ಲೋಸ್‌ ಇರಲಿಲ್ಲ. ಆದರೂ ಅವರ ಕಾಳಜಿ ಕಂಡು ಮನಸ್ಸು ತುಂಬಿಬಂತು ಎಂದಿದ್ದಾರೆ ನಟ ಹರೀಶ್ ರಾಯ್‌.

1 Min read
Govindaraj S
Published : Aug 30 2025, 06:29 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Social Media

‘ಕೆಜಿಎಫ್‌’ ಸಿನಿಮಾದ ʻಚಾಚಾ’ ಆಗಿ ಫೇಮಸ್‌ ಆಗಿರುವ ನಟ ಹರೀಶ್ ರಾಯ್‌ ಥೈರಾಯ್ಡ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಯಾಚಿಸಿದ್ದರು.

25
Image Credit : Social Media

ಇದಕ್ಕೆ ಸ್ಪಂದಿಸಿರುವ ನಟ ಧ್ರುವ ಸರ್ಜಾ ಆಸ್ಪತ್ರೆಯ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ. ಜೊತೆಗೆ, ‘ನಿಮ್ಮ ಜೊತೆ ನಾವೆಲ್ಲ ಇದ್ದೇವೆ, ಕಣ್ಣೀರು ಹಾಕದಿರಿ’ ಎಂದು ಧೈರ್ಯ ತುಂಬಿದ್ದಾರೆ.

Related Articles

Related image1
'ಕೆಡಿ' ನನ್ನ ಅದೃಷ್ಟದ ಸಿನಿಮಾ, ಶಿಲ್ಪಾ ಶೆಟ್ಟಿಯಿಂದ ಬಹಳಷ್ಟು ಕಲಿತೆ: ನಟ ಧ್ರುವ ಸರ್ಜಾ
Related image2
Now Playing
ಸ್ವಿಡ್ಜರ್​ಲ್ಯಾಂಡ್​​ನಲ್ಲಿ ಕೆಡಿ ಸಿನಿಮಾದ ಹಾಡಿನ ಶೂಟಿಂಗ್: ಭೂಲೋಕದ ಸ್ವರ್ಗದಲ್ಲಿ ಧ್ರುವ ಸರ್ಜಾ ರೀಷ್ಮಾ ರೊಮ್ಯಾನ್ಸ್
35
Image Credit : Social Media

ಈ ಬಗ್ಗೆ ಹರೀಶ್‌ ರಾಯ್‌, ಧ್ರುವ ಸರ್ಜಾ ಮೊದಲಿಗೆ ನನಗೆ ಅವರ ಪರಿಚಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಹೇಳಿದರು. ಆದರೆ ಈಗಾಗಲೇ ಇನ್ನೊಂದೆಡೆ ನನ್ನ ಕ್ಯಾನ್ಸರ್‌ ಚಿಕಿತ್ಸೆ ಆರಂಭವಾಗಿದೆ. ಅದರ ಒಂದು ಇಂಜೆಕ್ಷನ್‌ಗೇ 3.5 ಲಕ್ಷ ರು.ಗೂ ಅಧಿಕ ಬೆಲೆ ಇದೆ ಎಂದೆ.

45
Image Credit : Social Media

ಹಾಗಿದ್ದರೆ ಅದೇ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಸಿ, ಆ ವೆಚ್ಚಗಳನ್ನೆಲ್ಲ ನಾನೇ ಭರಿಸುತ್ತೇನೆ, ಕಣ್ಣೀರು ಹಾಕಬೇಡಿ ಎಂದರು. ಹಾಗೆ ನೋಡಿದರೆ ನನಗೆ ಚಿರು ಸರ್ಜಾ ಅವರಷ್ಟು ಧ್ರುವ ಸರ್ಜಾ ಕ್ಲೋಸ್‌ ಇರಲಿಲ್ಲ. ಆದರೂ ಅವರ ಕಾಳಜಿ ಕಂಡು ಮನಸ್ಸು ತುಂಬಿಬಂತು ಎಂದಿದ್ದಾರೆ.

55
Image Credit : Social Media

ಇನ್ನು ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಹರೀಶ್ ರಾಯ್ ಈಗ ಗುರುತೇ ಸಿಗಲಾರದಷ್ಟು ಬದಲಾಗಿದ್ದಾರೆ. ಕ್ಯಾನ್ಸರ್ ಹೊಟ್ಟೆಗೆ ಪಸರಿಸಿದ್ದು ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇವರ ದೇಹದ ತೂಕ ಕಡಿಮೆಯಾಗಿದ್ದು, ಹೊಟ್ಟೆಯಲ್ಲಿ ನೀರು ತುಂಬಿ ಊದಿಕೊಂಡಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಧ್ರುವ ಸರ್ಜಾ
ಕ್ಯಾನ್ಸರ್
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved