MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Politics
  • ನವೆಂಬರ್ ಕ್ರಾಂತಿ ಅಂದ್ರೆ ನಿತಿನ್ ಗಡ್ಕರಿ ಪ್ರಧಾನಿ ಆಗೋದಾ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ

ನವೆಂಬರ್ ಕ್ರಾಂತಿ ಅಂದ್ರೆ ನಿತಿನ್ ಗಡ್ಕರಿ ಪ್ರಧಾನಿ ಆಗೋದಾ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ

ನವೆಂಬರ್‌ನಲ್ಲಿ ನಿತಿನ್ ಗಡ್ಕರಿ ಪ್ರಧಾನಿಯಾಗುವ ಮೂಲಕ 'ನವೆಂಬರ್ ಕ್ರಾಂತಿ' ಆಗಬಹುದು ಎಂದು ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಇದೇ ವೇಳೆ, ಸರ್ದಾರ್ ಪಟೇಲರೇ ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಿದ್ದನ್ನು ನೆನಪಿಸಿ, ಸಂಪುಟ ಪುನಾರಚನೆ ಚರ್ಚೆನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2 Min read
Mahmad Rafik
Published : Oct 14 2025, 11:23 AM IST
Share this Photo Gallery
  • FB
  • TW
  • Linkdin
  • Whatsapp
15
ನವೆಂಬರ್ ಕ್ರಾಂತಿಯ ಚರ್ಚೆ
Image Credit : facebook

ನವೆಂಬರ್ ಕ್ರಾಂತಿಯ ಚರ್ಚೆ

ರಾಜ್ಯ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿಯ ಚರ್ಚೆ ಶುರುವಾಗಿದೆ. ಇಂದು ಬೀದರ್ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ನವೆಂಬರ್ ಕ್ರಾಂತಿ ಅಂದ್ರೆ ನಿತಿನ್ ಗಡ್ಕರಿ ಪ್ರಧಾನಿ ಆಗಬಹುದು ಅಲ್ಲಾ ಎಂಬ ಹೊಸ ವ್ಯಾಖ್ಯಾನ ನೀಡಿದ್ದಾರೆ. ನವೆಂಬರ್‌ನಲ್ಲಿ ನಿತಿನ್ ಗಡ್ಕರಿ ಪ್ರಧಾನಿಯಾಗಿ ಕ್ರಾಂತಿ ಆಗಬಹುದು ಎಂದಿದ್ದಾರೆ.

25
ನಿತಿನ್ ಗಡ್ಕರಿ
Image Credit : Asianet News

ನಿತಿನ್ ಗಡ್ಕರಿ

ಕೇಂದ್ರ ಸಚಿವರಾಗಿರುವ ನಿತಿನ್ ಗಡ್ಕರಿ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಅವರೇ ಪ್ರಧಾನಿಯಾಗುವ ಸಾಧ್ಯತೆ ಇದೆ ಎಂದು ಸಂತೋಷ್ ಲಾಡ್ ಹೇಳಿದರು. ಮುಂದುವರಿದು ಸಚಿವ ಪ್ರಿಯಾಂಕ್ ಖರ್ಗೆ ಪತ್ರದ ಬಗ್ಗೆಯೂ ಸಂತೋಷ್ ಲಾಡ್ ಪ್ರತಿಕ್ರಿಯಿಸಿದರು.

Related Articles

Related image1
ಬಿಜೆಪಿ ಅಂದರೆ ತಾಲಿಬಾನ್ ಮನಸ್ಥಿತಿ; RSS ಬ್ಯಾನ್ ಖರ್ಗೆ ಹೇಳಿಕೆಗೆ ಪುಷ್ಠಿ ಕೊಟ್ಟ ಸಚಿವ ಸಂತೋಷ್ ಲಾಡ್
Related image2
ರಾಹುಲ್ ಗಾಂಧಿ ಸತ್ಯ ಹೇಳಲು ಹೊರಟಿದ್ದಾರೆ, ಅವರ ಹಿಂದೆ ನಿಲ್ಲೋಣ: ಸಚಿವ ಸಂತೋಷ್ ಲಾಡ್
35
 ಆರ್‌ಎಸ್‌ಎಸ್ ಬ್ಯಾನ್
Image Credit : Social Media

ಆರ್‌ಎಸ್‌ಎಸ್ ಬ್ಯಾನ್

ಸರ್ದಾರ ವಲ್ಲಭಭಾಯಿ ಪಟೇಲ್ ಎರಡು ಬಾರಿ ಆರ್‌ಎಸ್‌ಎಸ್ ಬ್ಯಾನ್ ಮಾಡಿದ್ದರು. ಬಿಜೆಪಿ ಅವರೇ ಸರ್ದಾರ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನು 3 ಸಾವಿರ ಕೋಟಿ ರೂ. ಖರ್ಚು ಮಾಡಿ ಸ್ಥಾಪನೆ ಮಾಡಿದ್ದಾರೆ. ಸರ್ದಾರ ವಲ್ಲಭಭಾಯಿ ಪಟೇಲ್ ಅವರು ಕಾಂಗ್ರೆಸ್ಸಿಗರು ಮತ್ತು ಗೃಹಸಚಿವರಾಗಿದ್ದವರು ಎಂಬುವುದು ಬಿಜೆಪಿ ಗಮನಕ್ಕಿರಲಿ. ದೇಶ ಪ್ರೇಮ ಅನ್ನೋದು ಪ್ರತಿಯೊಬ್ಬರಲ್ಲಿಯೂ ಇದೆ. ಭಾರತ ದೇಶದಲ್ಲಿದ್ದರೆ ಎಲ್ಲರೂ ದೇಶ ಪ್ರೇಮಿಗಳ. ಹಿಂದೂ, ಸಿಖ್, ಇಸಾಯಿ, ಮುಸ್ಲಿಂ ಎಲ್ಲರೂ ದೇಶ ಪ್ರೇಮಿಗಳು ಎಂದು ಸಂತೋಷ್ ಲಾಡ್ ಹೇಳಿದರು.

45
ಸಂಪುಟ ಪುನಾರಚನೆ
Image Credit : Asianet News

ಸಂಪುಟ ಪುನಾರಚನೆ

ಮುಖ್ಯಮಂತ್ರಿಗಳು ಪ್ರತಿ ವರ್ಷವೂ ಸೌಹಾರ್ದಯುತವಾದ ಸಭೆಯನ್ನು ಮಾಡುತ್ತಾರೆ. ಸೌಜನ್ಯಕ್ಕಾಗಿ ಎಲ್ಲರೂ ಸಭೆಗೆ ಹೋಗುತ್ತಾರೆ. ನಾನು ಸಹ ಸಭೆಗೆ ಹೋಗಿದ್ದೆ. ಅಲ್ಲಿ ಯಾವುದೇ ಸಂಪುಟ ಪುನಾರಚನೆ ಚರ್ಚೆಗಳು ನಡೆದಿಲ್ಲ. ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡಲು ಸಿಎಂ ಮತ್ತು ಡಿಸಿಎಂ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಇದೆಲ್ಲರ ಜೊತೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನ ಫೈನಲ್ ಆಗುತ್ತೆ ಎಂದು ಸಂತೋಷ್ ಲಾಡ್ ತಿಳಿಸಿದರು.

 ಇದನ್ನೂ ಓದಿ: ಎರಡೇ ದಿನದಲ್ಲಿ ನಿಕೇತ್ ರಾಜ್ ಮೌರ್ಯಗೆ ಕೊಕ್, ಬಿಎಂಟಿಸಿ ಚುಕ್ಕಾಣಿ ಬದಲಿಸಿದ ಸಿಎಂ, ನಿಗಮ ಮಂಡಳಿಗಳಲ್ಲಿ ಮಹತ್ವದ ಬದಲಾವಣೆ

55
ನಮ್ಮ ಗ್ಯಾರಂಟಿ
Image Credit : our own

ನಮ್ಮ ಗ್ಯಾರಂಟಿ

ಈಗ ನಮ್ಮ ಗ್ಯಾರಂಟಿ ಇಟ್ಟುಕೊಂಡೇ ಪ್ರಧಾನಿ ಮೋದಿ ಸಾಹೇಬ್ರು ಎಲ್ಲಾ ಕಡೆ ತಿರುಗಾಡುತ್ತಿದ್ದಾರೆ. ಬಿಹಾರ ಮಹಿಳೆಯರಿಗೆ 10 ಸಾವಿರ ರೂಪಾಯಿ ನೀಡುತ್ತಿದ್ದಾರೆ. 10 ಸಾವಿರ ರೂಪಾಯಿ ಕೊಟ್ಟು ಪ್ರಧಾನಿಗಳು ಮತ ಹಾಕಿಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಇದಕ್ಕಿಂತ ಒಳ್ಳೆಯ ಕಾರ್ಯಕ್ರಮ ಇದೆಯಾ ಎಂದು ಸಂತೋಷ್ ಲಾಡ್ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಬೆಂಗಳೂರಿನ ರಸ್ತೆಗಳ ದುಸ್ಥಿತಿ ಬಗ್ಗೆ ಕಿರಣ್ ಮಜುಂದಾರ್ ಅಸಮಾಧಾನ: ಉದ್ಯಮಿಯ ಟ್ವಿಟ್‌ಗೆ ಎಂಬಿ ಪಾಟೀಲ್ ಗರಂ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸಂತೋಷ್ ಲಾಡ್
ನರೇಂದ್ರ ಮೋದಿ
ಬಿಜೆಪಿ
ಕಾಂಗ್ರೆಸ್
ಕರ್ನಾಟಕ ರಾಜಕೀಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved