MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Politics
  • ಕರಿ ಟೋಪಿ ವಿವಾದ: ಕೇರಳದಲ್ಲಿ ಸಿಎಂ ವಿರುದ್ಧ ಡಿಕೆಶಿ ಮಾಟ ಮಾಡಿಸಿ ಕೋಣ, ಹಂದಿ ಬಲಿ ಕೊಟ್ಟಿದ್ದಾರೆ: ಮುನಿರತ್ನ ಗಂಭೀರ ಆರೋಪ!

ಕರಿ ಟೋಪಿ ವಿವಾದ: ಕೇರಳದಲ್ಲಿ ಸಿಎಂ ವಿರುದ್ಧ ಡಿಕೆಶಿ ಮಾಟ ಮಾಡಿಸಿ ಕೋಣ, ಹಂದಿ ಬಲಿ ಕೊಟ್ಟಿದ್ದಾರೆ: ಮುನಿರತ್ನ ಗಂಭೀರ ಆರೋಪ!

ಶಾಸಕ ಮುನಿರತ್ನರನ್ನು ಡಿಸಿಎಂ ಡಿಕೆ ಶಿವಕುಮಾರ್ 'ಕರಿ ಟೋಪಿ' ಎಂದು ಕರೆದಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಅವಮಾನದಿಂದ ಆಕ್ರೋಶಗೊಂಡ ಮುನಿರತ್ನ, ಡಿಕೆಶಿ ತಮ್ಮನ್ನು ಕೊಲೆ ಮಾಡುತ್ತಾರೆ ಮತ್ತು ಸಿಎಂ ಸಿದ್ದರಾಮಯ್ಯನವರನ್ನು ಮುಗಿಸಲು ಕೇರಳದಲ್ಲಿ ಮಾಟ ಮಾಡಿಸಿದ್ದಾರೆ ಎಂದು  ಆರೋಪ ಮಾಡಿದ್ದಾರೆ.

2 Min read
Gowthami K
Published : Oct 12 2025, 04:33 PM IST
Share this Photo Gallery
  • FB
  • TW
  • Linkdin
  • Whatsapp
16
ಮುನಿರತ್ನ ಡಿಕೆಶಿ ಕರಿ ಟೋಪಿ ವಿವಾದ
Image Credit : Asianet News

ಮುನಿರತ್ನ ಡಿಕೆಶಿ ಕರಿ ಟೋಪಿ ವಿವಾದ

ಬೆಂಗಳೂರು: ಗಣವೇಷಧಾರಿಯಾಗಿದ್ದ ಶಾಸಕ ಮುನಿರತ್ನರನ್ನು ಏಯ್​ ಕರಿ ಟೋಪಿ ಬಾ ಇಲ್ಲಿ ಎಂದು ವೇದಿಕೆ ಮೇಲಿನಿಂದಲೇ ಕರೆದ ಡಿಕೆ ಶಿವಕುಮಾರ್ ವಿರುದ್ಧ ಶಾಸಕ ಮುನಿರತ್ನ ಆಕ್ರೋಶ ವ್ಯಕ್ತ ಪಡಿಸಿ ಧರಣಿ ನಡೆಸಿದರು. ಡಿಸಿಎಂ ಹೇಳಿಕೆಗೆ ಮುನಿರತ್ನ ಕೆಂಡವಾದರು. ಇದೀಗ ಈ ಬಗ್ಗೆ ಹೇಳಿಕೆ ನೀಡಿ ಡಿಕೆಶಿ ಸಿದ್ದರಾಮಯ್ಯ ಅವರನ್ನು ಮುಗಿಸಲು ಕೇರಳದಲ್ಲಿ ಮಾಠ ಮಾಡಿಸಿದ್ದಾರೆ. ಈ ಬಗ್ಗೆ ನನಗೆ ಗೊತ್ತಿದೆ. ಜೊತೆಗೆ ಕೋಣ, ಹಂದಿ ಬಲಿ ಕೊಟ್ಟಿದ್ದಾರೆ. ಡಿಕೆಶಿ ನನ್ನನ್ನು ಕೊಲೆ ಮಾಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

26
ಆಹ್ವಾನ ಇಲ್ಲದೆ ಬಂದಿದ್ದ ಮುನಿರತ್ನ
Image Credit : Asianet News

ಆಹ್ವಾನ ಇಲ್ಲದೆ ಬಂದಿದ್ದ ಮುನಿರತ್ನ

ಅಕ್ಟೋಬರ್ 12ರಂದು ಬೆಂಗಳೂರಿನ ಮತ್ತಿಕೆರೆ ಬಳಿಯ ಜೆಪಿ ಪಾರ್ಕ್‌ನಲ್ಲಿ ಡಿಕೆ ಶಿವಕುಮಾರ್​ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದರು. ಇದೇ ಕಾರ್ಯಕ್ರಮಕ್ಕೆ ಮುನಿರತ್ನ, RSS ಪಥಸಂಚಲನ ಮುಗಿಸಿ ಸಾಮಾನ್ಯ ಜನರಂತೆ ಭಾಗಿಯಾಗಿದ್ದರು. ಡಿಕೆಶಿ ವಾಕಿಂಗ್ ಗೆ ಸಂಘದ ಗಣವೇಷದಲ್ಲೇ ಶಾಸಕ ಮುನಿರತ್ನ ಆಗಮಿಸಿದರು. ಈ ವೇಳೆ ಮೊದಲಿಗೆ ಮುನಿರತ್ನರನ್ನು ನೋಡಿಯೂ ನೋಡಿದಂತೆ ಡಿಕೆಶಿ ಹೋದರು. ತಮ್ಮ ಕ್ಷೇತ್ರದ ಪಾರ್ಕ್ ನಲ್ಲಿ ನಡೆಯುವತ್ತಿರುವ ಡಿಕೆಶಿ ಅವರ ನಡಿಗೆ ಕಾರ್ಯಕ್ರಮಕ್ಕೆ‌ ಕ್ಷೇತ್ರದ ಶಾಸಕನಾಗಿ ಮುನಿರತ್ನ ಆಗಮಸಿದ್ದರು. ಬಳಿಕ ಶಾಸಕ ಮುನಿರತ್ನ ಅವರನ್ನ ನೋಡಿ ಡಿಕೆಶಿ ಕೈ ಎತ್ತಿ ವಿಶ್ ಮಾಡಿದರು.

Related Articles

Related image1
ಡಿಕೆಶಿ ಕರಿ ಟೋಪಿ ಹೇಳಿಕೆ ವಿವಾದ, ಮುನಿರತ್ನ ಅವರದ್ದೇ ತಪ್ಪು, ಆರ್‌ಎಸ್‌ಎಸ್‌ಗೆ ಅವಮಾನವಾಗಿದೆ: ಸಚಿವ ಶರಣಬಸಪ್ಪ
Related image2
ಬಿಜೆಪಿ ಶಾಸಕ ಮುನಿರತ್ನ ಆರೋಪಗಳಿಗೆ ಕುಸುಮಾ ಹನುಮಂತರಾಯಪ್ಪ ಮೊದಲ ಪ್ರತಿಕ್ರಿಯೆ
36
ಗಾಂಧಿ ಫೋಟೋ ಹಿಡಿದು ಧರಣಿ ಕುಳಿತ ಮುನಿರತ್ನ
Image Credit : Asianet News

ಗಾಂಧಿ ಫೋಟೋ ಹಿಡಿದು ಧರಣಿ ಕುಳಿತ ಮುನಿರತ್ನ

ಯಾವುದೇ ಆಹ್ವಾನ ಇಲ್ಲದಿದ್ದರೂ ಶಾಸಕ ಮುನಿರತ್ನ ಬಂದು ಕುಳಿತಿದ್ದರು. ಅದ್ಯಾವಾಗ ಡಿಕೆ ಶಿವಕುಮಾರ್​ ಏಯ್​, ಕರಿ ಟೋಪಿ ಎಂಎಲ್​ಎ ಬಾ ಇಲ್ಲಿ ಅಂದ್ರೋ ಮುನಿರತ್ನ ಪಿತ್ತ ನೆತ್ತಿಗೇರಿತು. ಮೈಕ್ ಕೈಗೆ ಎತ್ತಿಕೊಂಡ ಮುನಿರತ್ನ ಒಬ್ಬ ಶಾಸಕನಿಗೆ ಏನು ಗೌರವ ಕೊಡಬೇಕು ಅದನ್ನ ಕೊಟ್ಟಿದ್ದೀರಾ? ನನಗೆ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿಲ್ಲ. ಒಂದು ಎಂಪಿ , MLA ಫೋಟೋ ಇಲ್ಲ ಎಂದು ಡಿಕೆ ಸುಮ್ಮಖದಲ್ಲೇ ಅಧಿಕಾರಿಗಳ ವಿರುದ್ಧ ಮುನಿರತ್ನ ವಾಗ್ದಾಳಿ ನಡೆಸಿದರು. ಕರಿ ಟೋಪಿ ಅಂತ ಕರೆದ್ದಿದ್ದಕ್ಕೆ‌ ಮುನಿರತ್ನ ಜೆಪಿ ಪಾರ್ಕ್ ಮುಂದೆ ಗಾಂಧಿ ಫೋಟೋ ಹಿಡಿದು ಧರಣಿ ಕುಳಿತರು. ಈ ವೇಳೆ ಇತ್ತ ಸ್ಟೇಜ್ ನಲ್ಲೇ ಗಲಾಟೆ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ಗಲಾಟೆಗಿಳಿದರು. ಇಲ್ಲಿ ರಾಜಕೀಯ ಮಾಡೋಕೆ ಬರಬೇಡಿ ಅಂತಾ ಗಲಾಟೆ ಮಾಡಿದರು.

46
ಡಿಕೆ ಶಿವಕುಮಾರ್ ನನ್ನ ಕೊಲೆ ಮಾಡುತ್ತಾರೆ: ಮುನಿರತ್ನ
Image Credit : Asianet News

ಡಿಕೆ ಶಿವಕುಮಾರ್ ನನ್ನ ಕೊಲೆ ಮಾಡುತ್ತಾರೆ: ಮುನಿರತ್ನ

ಇದಾದ ಬಳಿಕ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜೊತೆಗೆ ಮಾತನಾಡಿದ ಮುನಿರತ್ನ ಅವರಿ ಡಿಕೆ ಶಿವಕುಮಾರ್ ಮೇಲೆ ಹಕ್ಕು ಚ್ಯುತಿ ಮಂಡಿಸುತ್ತೇನೆ. ನನ್ ಹಕ್ಕಿಗೆ ಚ್ಯುತಿ ಆಗಿದೆ. ಡಿಕೆ ಶಿವಕುಮಾರ್ ನನ್ನ ಕೊಲೆ ಮಾಡುತ್ತಾರೆ. ಹೇಗಿದ್ದರೂ ನನ್ನ ಸಾಯಿಸುತ್ತಾರೆ. ಹೀಗಾಗಿ ಹೆದರಿಕೊಂಡು ಕೂರೋದು ಯಾಕೆ ಎಂದು ವೇದಿಕೆಗೆ ಹೋಗಿದ್ದೇನೆ. ಸಾಯೋನಿಗೆ ಭಯ ಯಾಕೆ? ಎಂದು ಡಿಕೆ ಶಿವಕುಮಾರ್ ಮೇಲೆ ಮುನಿರತ್ನ ಗಂಭೀರ ಆರೋಪ ಮಾಡಿದರು.

56
ಸಿದ್ದರಾಮಯ್ಯ ಮೇಲೆ ಡಿಕೆಶಿ ಮಾಠ ಮಾಡಿಸಿದ್ದಾರೆ
Image Credit : Asianet News

ಸಿದ್ದರಾಮಯ್ಯ ಮೇಲೆ ಡಿಕೆಶಿ ಮಾಠ ಮಾಡಿಸಿದ್ದಾರೆ

ಸಿದ್ದರಾಮಯ್ಯ ಹಳೆ ಸಿದ್ದರಾಮಯ್ಯ ಅಲ್ಲ. ಸಿದ್ದರಾಮಯ್ಯನವರನ್ನು ಮುಗಿಸಬೇಕು ಎಂದು ಡಿಕೆ ಶಿವಕುಮಾರ್ ಕೇರಳದಲ್ಲಿ ಮಾಠ ಮಾಡಿಸಿದ್ದಾರೆ. ಕೋಣನ ಬಲಿ ಕೊಟ್ಟಿದ್ದಾರೆ. ಕಾಡು ಹಂದಿ ಬಲಿ ನೀಡಿದ್ದಾರೆ. ನನ್ನ ಬಳಿ ಮಾಹಿತಿ ಇದೆ. ಸಿದ್ದರಾಮಯ್ಯ ಮೇಲೆ ರೇಪ್ ಕೇಸ್ ಹಾಕೋಕೆ ಆಗಲ್ಲ. ಹೀಗಾಗಿ ಮಾಠ ಮಂತ್ರ ಮಾಡಿಸ್ತಾ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

66
ಡಿಕೆ ರವಿ ಸತ್ತು ನಂಗೆ ಸಮಸ್ಯೆ
Image Credit : Asianet News

ಡಿಕೆ ರವಿ ಸತ್ತು ನಂಗೆ ಸಮಸ್ಯೆ

ಡಿಕೆ ರವಿ ಸತ್ತು ನಂಗೆ ಸಮಸ್ಯೆ ಆಗಿದೆ. ಆ ಪುಣ್ಯಾತ್ಮ ಬದುಕಿದ್ರೆ ಹೀಗೆ ಆಗ್ತಿರಲಿಲ್ಲ. ಕುಸುಮಾಗೆ ಶಾಸಕ ಆಗುವ ಹುಚ್ಚು ಬಂದಿದೆ. ಅವರ ಹುಚ್ಚಿಗೆ ನಾನು ಬಲಿ ಆಗ್ತಾ ಇದ್ದೇನೆ. ಜೆಪಿ ಪಾರ್ಕ್ ಲ್ಲಿ ಕಾರ್ಯಕ್ರಮ, ನಾನು ವೇದಿಕೆಗೆ ಹೋಗಿರಲಿಲ್ಲ. ಆದರೆ ಏ ಕರಿ ಟೊಪ್ಪಿ ಎಂದ್ರು, ಇದು ಅವಮಾನ ಮಾಡಿದ್ದು. ಇದಕ್ಕೆ ನಾನು ಪ್ರತಿರೋಧ ವ್ಯಕ್ತಪಡಿಸಿದೆ. ನನಗೆ ಒದ್ದಿದ್ದಾರೆ, ನನ್ನ ಮೇಲೆ ಹಲ್ಲೆ ಆಗಿದೆ ಎಂದು ಮುನಿರತ್ನ ಹೇಳಿಕೆ ನೀಡಿದ್ದಾರೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಡಿ.ಕೆ. ಶಿವಕುಮಾರ್
ಸಿದ್ದರಾಮಯ್ಯ
ಕರ್ನಾಟಕ ಸುದ್ದಿ
ಕರ್ನಾಟಕ ರಾಜಕೀಯ
ಆರ್‌ಎಸ್‌ಎಸ್‌

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved