MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Politics
  • ರಾಮಾಯಾಣ, ಮಹಾಭಾರತ & ಆರ್‌ಆರ್‌ ನಗರ ಕುರುಕ್ಷೇತ್ರಕ್ಕೆ 'ಹೆಣ್ಣು' ಕಾರಣ ಎಂದ ಬಿಜೆಪಿ ಶಾಸಕ ಮುನಿರತ್ನ

ರಾಮಾಯಾಣ, ಮಹಾಭಾರತ & ಆರ್‌ಆರ್‌ ನಗರ ಕುರುಕ್ಷೇತ್ರಕ್ಕೆ 'ಹೆಣ್ಣು' ಕಾರಣ ಎಂದ ಬಿಜೆಪಿ ಶಾಸಕ ಮುನಿರತ್ನ

Munirathna vs DK Shivakumar RR Nagar: ಡಿಸಿಎಂ ಡಿಕೆ ಶಿವಕುಮಾರ್ ತಮಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ಆರೋಪಿಸಿದ್ದಾರೆ. ಓರ್ವ ಮಹಿಳೆಯನ್ನು ಶಾಸಕಿಯನ್ನಾಗಿಸಲು ತನ್ನನ್ನು ಸಾಯಿಸಲು ಅಥವಾ ರಾಜೀನಾಮೆ ಕೊಡಿಸಲು ಡಿಕೆಶಿ ಪ್ಲಾನ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

2 Min read
Mahmad Rafik
Published : Oct 12 2025, 11:19 AM IST
Share this Photo Gallery
  • FB
  • TW
  • Linkdin
  • Whatsapp
15
ಆರ್‌ಆರ್‌ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ
Image Credit : Asianet News

ಆರ್‌ಆರ್‌ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ

ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ನಡಿಗೆ ಕಾರ್ಯಕ್ರಮ ಮುಗಿಸಿ ತೆರಳಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಆರ್‌ಆರ್‌ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ, ನನಗೆ ಡ್ರಾಮ ಗೊತ್ತಿಲ್ಲ. ನಾನು RSS ಕಾರ್ಯಕ್ರಮ ಮುಗಿಸಿ ಗಣವೇಶದಲ್ಲಿ ಬಂದಿದ್ದೀನಿ. ಇವರು ಹಲ್ಲುಜ್ಜದೇ ಸ್ನಾನ ಮಾಡದೇ ಬಂದಿದ್ದಾರೆ ಎಂದು ವ್ಯಂಗ್ಯ ಮಾಡಿದರು.

25
ಚನ್ನಪಟ್ಟಣ, ರಾಮನಗರದ ರೌಡಿ
Image Credit : Asianet News

ಚನ್ನಪಟ್ಟಣ, ರಾಮನಗರದ ರೌಡಿ

ಚನ್ನಪಟ್ಟಣ, ರಾಮನಗರದಿಂದ ರೌಡಿಗಳನ್ನ ಬಿಡಿಸಿಕೊಂಡು ಬಂದಿದ್ದಾರೆ. ಕರಿಟೋಪಿ ಬಾ ಅಂತಾ ಕರೆದು ಇಡೀ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಜನರಿಗೆ ಅವಮಾನ ಮಾಡಿದ್ದಾರೆ. ಸ್ಥಳೀಯ ಶಾಸಕರಾಗಿರುವ ನನಗೆ ಮತ್ತು ಸಂಸದ ಸಿಎನ್ ಮಂಜುನಾಥ್‌ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿಲ್ಲ. ವೇದಿಕೆ ಮೇಲೆ ನಮ್ಮ ಒಂದು ಫೋಟೋ ಸಹ ಹಾಕಿಲ್ಲ. ಇಲ್ಲಿಗೆ ನಾನು ಬಂದ್ಮೇಲೆ ವೇದಿಕೆ ಮೇಲೆ ಕರೆಯುತ್ತಾರೆ ಎಂದು ಕಿಡಿಕಾರಿದರು.

Related Articles

Related image1
55 ವರ್ಷದ ನಂತರ ಬಾಲ್ಯದ ಗೆಳೆಯನನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್
Related image2
ನವೆಂಬರ್ ತನಕ ಕಾದು ನೋಡುವ ತಂತ್ರ, ಬಳಿಕ ಗೂಗ್ಲಿ ಹಾಕ್ತಾರಾ ಡಿಕೆ ಶಿವಕುಮಾರ್?
35
ಒಂದು ಹೆಣ್ಣು ಕಾರಣ.
Image Credit : Asianet News

ಒಂದು ಹೆಣ್ಣು ಕಾರಣ.

ಮಹಾಭಾರತ ಮತ್ತು ರಾಮಾಯಣ ನಡೆಯಲು ಒಂದು ಹೆಣ್ಣು ಕಾರಣ. ಈಗ ಆರ್ ಆರ್ ನಗರದಲ್ಲಿ ಕುರುಕ್ಷೇತ್ರ ಮಾಡ್ತಿರೋದು ಒಂದು ಹೆಣ್ಣು. ಒಂದು ಹೆಣ್ಣಿಗೋಸ್ಕರ ಇಷ್ಟೆಲ್ಲ ಮಾಡ್ತಿದ್ದಾರೆ. ಹೆಣ್ಣನ್ನ ಇಟ್ಟುಕೊಂಡು ಏನೇನೋ ಪ್ಲಾನ್ ಮಾಡ್ತಿದ್ದಾರೆ. ಒಂದು ಹೆಣ್ಣನ್ನು MLA ಮಾಡೋಕೆ ಹೀಗೆಲ್ಲ ಮಾಡಬೇಕಾ ಎಂದು ಮುನಿರತ್ನ ಪ್ರಶ್ನೆ ಮಾಡಿದರು.

45
ಗಂಭೀರವಾದ ಆರೋಪ
Image Credit : Asianet News

ಗಂಭೀರವಾದ ಆರೋಪ

ನನ್ನ ಸಾಯಿಸಬೇಕು, ಇಲ್ಲ ರಾಜೀನಾಮೆ ಕೊಡಿಸಬೇಕು. ನನ್ನಿಂದ ರಾಜೀನಾಮೆ ಕೊಡಿಸಿ ಆ ಹೆಣ್ಣನ್ನು ಶಾಸಕಿ ಮಾಡಿ ಸಚಿವೆಯನ್ನಾಗಿಸೋದು ಇವರ ಪ್ಲಾನ್ ಆಗಿದೆ. ನನ್ನ ಸಾಯಿಸೋಕೆ ಪ್ಲಾನ್ ಮಾಡಿದ್ದಾರೆ ಎಂದು ಗಂಭೀರವಾದ ಆರೋಪವನ್ನು ಮುನಿರತ್ನ ಮಾಡಿದರು.

ಇದನ್ನೂ ಓದಿ: RSSಗೆ ಅವಮಾನ ಮಾಡಿದ್ದು ನಾನಲ್ಲ, ಮುನಿರತ್ನ; ಡಿಸಿಎಂ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್

55
 ಕೋರ್ಟ್ ಗೆ ದೂರು
Image Credit : Asianet News

ಕೋರ್ಟ್ ಗೆ ದೂರು

ಈ ಹಲ್ಲೆಯಾಗಿದೆ ಎಂದು ಹೇಳುತ್ತಿದ್ದು ದೂರು ಕೊಡ್ತೀರಾ ಎಂಬ ಮಾಧ್ಯಮದ ಪ್ರಶ್ನೆಗೆ ಪೊಲೀಸರು ಸೀಟ್ ಸೇಲ್ ಆಗಿದೆ. ನಾನು ಕೋರ್ಟ್ ಗೆ ದೂರು ಕೊಡ್ತೀನಿ. ಫ್ಲೆಕ್ಸ್ ಹಾಕಿರೋದು, ಹಲ್ಲೆ ಮಾಡಿರೋದು ಎಲ್ಲ ಕೋರ್ಟ್ ಮುಂದೆ ಇಡ್ತೀನಿ ಎಂದು ಹೇಳಿದರು. ಮತ್ತೊಂದೆಡೆ ಬಿಜೆಪಿ ನಾಯಕರು ಈ ಘಟನೆ ಸಂಬಂಧ ಪ್ರತಿಕ್ರಿಯೆ ನೀಡುತ್ತಿದ್ದು ಡಿಕೆ ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಏಯ್‌ ಕರಿ ಟೋಪಿ MLA ಬಾರಯ್ಯ: ಗಣವೇಷಧಾರಿ ಮುನಿರತ್ನರನ್ನ ಕರೆದ ಡಿಕೆಶಿ; ವೇದಿಕೆ ಮೇಲೆ ಹೈಡ್ರಾಮಾ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಡಿ.ಕೆ. ಶಿವಕುಮಾರ್
ಕಾಂಗ್ರೆಸ್
ಕರ್ನಾಟಕ ಸುದ್ದಿ
ಕರ್ನಾಟಕ ರಾಜಕೀಯ
ಆರ್‌ಎಸ್‌ಎಸ್‌
ಬಿಜೆಪಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved