MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರು ಗ್ಯಾಸ್ಟ್ರಿಕ್ ಹೆಂಡ್ತಿಗೆ ಹೈಡೋಸ್ ಅನಸ್ತೇಶಿಯಾ ಕೊಟ್ಟ ಡಾಕ್ಟರ್ ಗಂಡ; FSL ವರದಿ ಬಿಚ್ಚಿಟ್ಟ ಪೊಲೀಸರು!

ಬೆಂಗಳೂರು ಗ್ಯಾಸ್ಟ್ರಿಕ್ ಹೆಂಡ್ತಿಗೆ ಹೈಡೋಸ್ ಅನಸ್ತೇಶಿಯಾ ಕೊಟ್ಟ ಡಾಕ್ಟರ್ ಗಂಡ; FSL ವರದಿ ಬಿಚ್ಚಿಟ್ಟ ಪೊಲೀಸರು!

ಬೆಂಗಳೂರಿನ ವೈದ್ಯ ದಂಪತಿಯ 11 ತಿಂಗಳ ದಾಂಪತ್ಯವು ಪತ್ನಿಯ ಸಾವಿನೊಂದಿಗೆ ದುರಂತ ಅಂತ್ಯ. ಆರಂಭದಲ್ಲಿ ಸಹಜ ಸಾವು ಎಂದು ಭಾವಿಸಲಾಗಿದ್ದ ಈ ಪ್ರಕರಣ, ಎಫ್‌ಎಸ್‌ಎಲ್ ವರದಿಯಿಂದ ಕೊಲೆ ಎಂದು ಸಾಬೀತು. ಪತಿಯೇ ಪತ್ನಿಗೆ ಅನಸ್ತೇಶಿಯಾ ಓವರ್‌ಡೋಸ್ ನೀಡಿ ಕೊಲೆ ಮಾಡಿರುವುದು ಬಯಲು.

2 Min read
Sathish Kumar KH
Published : Oct 15 2025, 05:03 PM IST
Share this Photo Gallery
  • FB
  • TW
  • Linkdin
  • Whatsapp
110
ಎಫ್‌ಎಸ್‌ಎಲ್ ವರದಿ ಬಿಚ್ಚಿಟ್ಟ ಸಾವಿನ ಸತ್ಯ
Image Credit : Asianet News

ಎಫ್‌ಎಸ್‌ಎಲ್ ವರದಿ ಬಿಚ್ಚಿಟ್ಟ ಸಾವಿನ ಸತ್ಯ

ಬೆಂಗಳೂರು ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಾಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರಿಬ್ಬರು ಪರಸ್ಪರ ಒಪ್ಪಿ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಇಬ್ಬರ ಹೈಪ್ರೊಫೈಲ್ ದಾಂಪತ್ಯ ಕೇವಲ 11 ತಿಂಗಳಿಗೆ ಹೆಂಡತಿ ಸಾವಿನ ಮೂಲಕ ಅಂತ್ಯವಾಗಿದೆ. ಇದನ್ನು ಸಹಜ ಸಾವೆಂದು ಅಂತ್ಯಕ್ರಿಯೆ ಮಾಡಲಾಗಿತ್ತು. 

ಆದರೆ, ಪೊಲೀಸರ ತನಿಖೆ ಉದ್ದೇಶದಿಂದ ಮೃತದೆಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಿದಾಗ ಆಕೆಯ ಗಂಡ ಜನರಲ್ ಸರ್ಜನ್ ಡಾ. ಮಹೇಂದ್ರ ರೆಡ್ಡಿಯೇ ಪತ್ನಿ ಡಾ. ಕೃತಿಕಾ ರೆಡ್ಡಿ ಅವರಿಗೆ ಅನಸ್ತೇಶಿಯಾ ಓವರ್‌ಡೋಸ್ ನೀಡಿ ಕೊಲೆ ಮಾಡಿರುವುದು ಎಫ್‌ಎಸ್‌ಎಲ್ ವರದಿಯಿಂದ ಸಾಬೀತಾಗಿದೆ.

210
ಅಹಸಜ ಸಾವು ಕೇಸ್‌, ಕೊಲೆಯಾಗಿ ಬದಲು
Image Credit : Asianet News

ಅಹಸಜ ಸಾವು ಕೇಸ್‌, ಕೊಲೆಯಾಗಿ ಬದಲು

ಈ ಕುರಿತು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ದಾಖಲಾಗಿದ್ದ 'ಯುಡಿಆರ್' (ಅಸಹಜ ಸಾವು) ಪ್ರಕರಣವನ್ನು ಕೊಲೆ ಪ್ರಕರಣವಾಗಿ ಮಾರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Related Articles

Related image1
ಗ್ಯಾಸ್ಟ್ರಿಕ್ ಸಮಸ್ಯೆ ಮುಚ್ಚಿಟ್ಟು ಮದುವೆಯಾದ ಹೆಂಡತಿಗೆ ಇಂಜೆಕ್ಷನ್ ಕೊಟ್ಟು ಕೊಲೆಗೈದ ಡಾಕ್ಟರ್ ಗಂಡ!
Related image2
IAS ಹೆಂಡ್ತಿ ವಿದೇಶ ಪ್ರವಾಸದಲ್ಲಿದ್ದಾಗಲೇ ಗಂಡ ಐಪಿಎಸ್ ಅಧಿಕಾರಿ ಸಾವಿಗೆ ಶರಣು
310
ಘಟನೆಯ ಹಿನ್ನೆಲೆ ಮತ್ತು ತನಿಖೆ:
Image Credit : Asianet News

ಘಟನೆಯ ಹಿನ್ನೆಲೆ ಮತ್ತು ತನಿಖೆ:

ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಡಾ. ಮಹೇಂದ್ರ ರೆಡ್ಡಿ ಮತ್ತು ಡಾ. ಕೃತಿಕಾ ರೆಡ್ಡಿ ಇಬ್ಬರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷವಷ್ಟೇ ಅಂದರೆ 26/05/2024 ರಂದು ಮದುವೆಯಾಗಿದ್ದರು. ಈ ದಂಪತಿ ಮದುವೆಯಾಗಿ ಕೇವಲ 11 ತಿಂಗಳ ನಂತರ, ಅಂದರೆ 23/04/2025 ರಂದು ಕೃತಿಕಾ ರೆಡ್ಡಿ ತಮ್ಮ ತಂದೆಯ ಮನೆಯಲ್ಲಿದ್ದಾಗ ಸಾವನ್ನಪ್ಪಿದ್ದರು.

410
ಸಾವಿನ ಬಗ್ಗೆ ಯಾರೂ ದೂರು ಕೊಡಲಿಲ್ಲ
Image Credit : Asianet News

ಸಾವಿನ ಬಗ್ಗೆ ಯಾರೂ ದೂರು ಕೊಡಲಿಲ್ಲ

ಈ ಕುರಿತು ಮಾಹಿತಿ ನೀಡಿದ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, 'ಏಪ್ರಿಲ್ ತಿಂಗಳಲ್ಲಿ ಮಹಿಳೆಯ ಸಾವಿನ ಬಗ್ಗೆ ಯುಡಿಆರ್ ಪ್ರಕರಣ ದಾಖಲಿಸಲಾಗಿತ್ತು. ಮಹಿಳೆ ಸಾವನ್ನಪ್ಪಿದಾಗ ಯಾರೂ ದೂರು ನೀಡಿರಲಿಲ್ಲ. ಕುಟುಂಬದವರು ಕೂಡ ಮೊದಲು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರಲಿಲ್ಲ. ಹೀಗಾಗಿ ನಾವೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೆವು' ಎಂದು ತಿಳಿಸಿದರು.

510
ಎಫ್‌ಎಸ್‌ಎಲ್ ವರದಿಯೇ ನಿರ್ಣಾಯಕ
Image Credit : Asianet News

ಎಫ್‌ಎಸ್‌ಎಲ್ ವರದಿಯೇ ನಿರ್ಣಾಯಕ

ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸ್ಯಾಂಪಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿತ್ತು. ಸುಮಾರು 6 ತಿಂಗಳ ಬಳಿಕ ಬಂದ ಎಫ್‌ಎಸ್‌ಎಲ್ ವರದಿಯು ಪ್ರಕರಣದ ದಿಕ್ಕನ್ನೇ ಬದಲಾಯಿಸಿತು.

610
ಅನಸ್ತೇಶಿಯಾ ಓವರ್‌ಡೋಸ್
Image Credit : Asianet News

ಅನಸ್ತೇಶಿಯಾ ಓವರ್‌ಡೋಸ್

ವೈದ್ಯಕೀಯ ಇಲಾಖೆಯಿಂದ ಎಫ್‌ಎಸ್‌ಎಲ್ ವರದಿಯಲ್ಲಿ ಡಾ. ಕೃತಿಕಾಗೆ ಅನಸ್ತೇಶಿಯಾ ಓವರ್‌ಡೋಸ್ ಕೊಟ್ಟು ಸಾವಾಗಿದೆ ಎಂಬುದು ಗೊತ್ತಾಗಿದೆ. ಇದರ ಅನ್ವಯ ಈಗ ಯುಡಿಆರ್ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಮಾರ್ಪಡಿಸಿದ್ದೇವೆ' ಎಂದು ಕಮಿಷನರ್ ಸ್ಪಷ್ಟಪಡಿಸಿದರು.

710
ಆರೋಪಿ ಬಂಧನ:
Image Credit : Asianet News

ಆರೋಪಿ ಬಂಧನ:

ಎಫ್‌ಎಸ್‌ಎಲ್ ವರದಿ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿ ಮೃತ ಮಹಿಳೆ ಕೃತಿಕಾ ಅವರ ಗಂಡ ಡಾ. ಮಹೇಂದ್ರ ರೆಡ್ಡಿ ಅವರನ್ನು ಮಣಿಪಾಲದಲ್ಲಿ ಬಂಧಿಸಿದ್ದಾರೆ.

810
ಡಾ.ಕೃತಿಕಾ ಅಪ್ಪನಿಂದ ದೂರು ಸ್ವೀಕಾರ
Image Credit : Asianet News

ಡಾ.ಕೃತಿಕಾ ಅಪ್ಪನಿಂದ ದೂರು ಸ್ವೀಕಾರ

ನಮ್ಮ ಪೊಲೀಸ್ ಇಲಾಖೆಯ ಸೋಕೋ ಟೀಮ್ (SOCO Team) ಮತ್ತು ಎಫ್‌ಎಸ್‌ಎಲ್ (FSL) ತನಿಖಾ ತಂಡಗಳು ತುಂಬಾ ಚೆನ್ನಾಗಿ ಸಾಕ್ಷ್ಯ ಕಲೆ ಹಾಕಿದ್ದರು ಎಂದು ಕಮಿಷನರ್ ಶ್ಲಾಘಿಸಿದರು. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಮೃತ ಕೃತಿಕಾ ಅವರ ತಂದೆಯನ್ನು ಕರೆಸಿ ಮತ್ತೆ ದೂರು ಪಡೆದುಕೊಂಡಿದ್ದೇವೆ. ಆಗ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.

910
ಕೊಲೆ ಹಿಂದಿನ ಕಾರಣ ಇನ್ನೂ ನಿಗೂಢ
Image Credit : Asianet News

ಕೊಲೆ ಹಿಂದಿನ ಕಾರಣ ಇನ್ನೂ ನಿಗೂಢ

ಸದ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, 'ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬ ಬಗ್ಗೆ ಕೂಡ ತನಿಖೆ ಮುಂದುವರೆಸಿದ್ದಾರೆ' ಎಂದು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದರು.

1010
ಅನೈತಿಕ ಸಂಬಂಧ, ಆಸ್ತಿ ಕಾರಣವಿದೆಯೇ?
Image Credit : Asianet News

ಅನೈತಿಕ ಸಂಬಂಧ, ಆಸ್ತಿ ಕಾರಣವಿದೆಯೇ?

ಅನಸ್ತೇಶಿಯಾದಂತಹ ಸೂಕ್ಷ್ಮ ವೈದ್ಯಕೀಯ ಜ್ಞಾನವನ್ನು ಬಳಸಿಕೊಂಡು ಪತ್ನಿಯನ್ನು ಕೊಲೆ ಮಾಡಿದ ಈ ಕ್ರೂರ ಘಟನೆ ಬಗ್ಗೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ಇದರ ಹಿಂದೆ ಅನೈತಿಕ ಸಂಬಂಧದ ಕೈವಾಡವಿದೆಯೇ ಅಥವಾ ಆಸ್ತಿ ಇತ್ಯಾದಿ ಕಾರಣಗಳಿವೆಯೇ ಎಂಬುದರ ಬಗ್ಗೆ ತನಿಖೆ ಮುಂದುವರೆಯುತ್ತಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಬೆಂಗಳೂರು ನಗರ
ಸಂಬಂಧಗಳು
ವೈದ್ಯರು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved