ಆಸಿಡಿಟಿಗೇನು ಕಾರಣ? ಇದರ ಲಕ್ಷಣ ಮತ್ತಿತರ ಮಾಹಿತಿ ಇಲ್ಲಿದೆ...
ಊಟದಲ್ಲಿ ಏನೇ ಹೆಚ್ಚು ಕಮ್ಮಿಯಾದರೆ ಆ್ಯಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಇದರಿಂದ ತುಂಬಾನೆ ಇರಿಟೇಟ್ ಆಗುತ್ತದೆ. ಈ ಸಮಸ್ಯೆ ಯಾಕೆ ಬರುತ್ತದೆ? ಅಷ್ಟಕ್ಕೂ ಆಸಿಡಿಟಿ ಎಂದರೇನು? ಇದರ ಲಕ್ಷಣಗಳೇನು? ಸುಲಭ ವಿಧಾನದ ಮೂಲಕ ಹೇಗೆ ಆಸಿಡಿಟಿ ಸಮಸ್ಯೆ ನಿವಾರಣೆ ಮಾಡುವುದು ನೋಡೋಣ...
ದೇಹದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ (HCL) ಉತ್ಪತ್ತಿಯಾಗುತ್ತದೆ, ಇದು ಆಹಾರವನ್ನು ವಿಭಜಿಸುವ ಮೂಲಕ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಹೊಟ್ಟೆ ಉಬ್ಬರವು ಜಠರದ ಗ್ರಂಥಿಗಳಲ್ಲಿ ಈ ಆಮ್ಲವನ್ನು ನೈಸರ್ಗಿಕವಾಗಿ ಉತ್ಪಾದಿಸುತ್ತದೆ; ಆಮ್ಲವು ನಿರ್ಜಲೀಕರಣ, ಆಲ್ಕೋಹಾಲ್, ಒತ್ತಡ ಅಥವಾ ಆಹಾರ ಅಭ್ಯಾಸಗಳಂತಹ ಪ್ರಚೋದನೆಗಳಿಂದಾಗಿ ಈ ಆಮ್ಲವು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದಾಗ ಆಮ್ಲೀಯತೆ ಉಂಟಾಗುತ್ತದೆ. ಇದನ್ನು ಆಸಿಡಿಟಿ ಎಂದು ಕರೆಯಲಾಗುತ್ತದೆ.
ಆಸಿಡಿಟಿ ಲಕ್ಷಣಗಳು
ಬಾಯಿಯಲ್ಲಿ ಹುಳಿ ರುಚಿ, ಬಾಯಿ ಮತ್ತು ಹೊಟ್ಟೆಯಲ್ಲಿ ಉರಿ, ಭಾರ, ಎದೆ ನೋವು, ಮಲಬದ್ಧತೆ, ಕೆಟ್ಟ ಉಸಿರಾಟ, ಚಡಪಡಿಕೆ, ಗಂಟಲಿನಲ್ಲಿ ಒಂದು ಮುದ್ದೆಯ ಇರುವಿಕೆ ಅನುಭವ, ವಾಂತಿ, ವಾಕರಿಕೆ, ಅಜೀರ್ಣ ಮತ್ತು ಪದೇ ಪದೇ ಹಿಕ್ಅಪ್ ಅಥವಾ ಬರ್ಪ್ಸ್, ದೌರ್ಬಲ್ಯ
ಆಸಿಡಿಟಿ ಗೆ ಕಾರಣಗಳು
ಕೆಟ್ಟ ಆಹಾರ ಪದ್ಧತಿಗಳು
ಪ್ರಬಲ ಔಷಧೋಪಚಾರಗಳ ಅಡ್ಡ ಪರಿಣಾಮ
ಒತ್ತಡ ಮತ್ತು ದೈಹಿಕ ವ್ಯಾಯಾಮದ ಕೊರತೆ
ಪದೇ ಪದೆ ಮದ್ಯ ಸೇವನೆ ಮತ್ತು ಧೂಮಪಾನ, ನಂತರ ನಿದ್ರೆಯ ಕೊರತೆ
ಕಾಫಿ, ಟೀ, ಸಾಫ್ಟ್ ಡ್ರಿಂಕ್ಸ್ ಅಥವಾ ಕಾರ್ಬೋನೇಟೆಡ್ ಪಾನೀಯಗಳನ್ನು ಕುಡಿಯುವುದು ಅಥವಾ ಪಿಜ್ಜಾ, ಕರಿದ ಆಹಾರ ಅಥವಾ ಡೋನಟ್ ಗಳಂತಹ ಕೊಬ್ಬುಯುಕ್ತ ಆಹಾರವನ್ನು ಪ್ರತಿದಿನ ಸೇವಿಸುವುದು
ಆ್ಯಸಿಡಿಟಿ ಬಾರದಂತೆ ತಡೆಯುವ ಹಾಗೂ ಆ್ಯಸಿಡಿಟಿ ನಿವಾರಣೆ ಮಾಡುವ ವಿಧಾನಗಳು...
ಪ್ರತಿದಿನ ಎಳನೀರು ಸೇವಿಸಿದ್ರೂ ಆ್ಯಸಿಡಿಟಿ ಸಮಸ್ಯೆಯಿಂದ ದೂರವಿರಬಹುದು. ಅಷ್ಟೇ ಅಲ್ಲ ಆ್ಯಸಿಡಿಟಿ ಸಮಸ್ಯೆ ಇರೋರು ಉಪ್ಪಿನಕಾಯಿ ಹಾಗೂ ಖಾರ ಪದಾರ್ಥಗಳ ಸೇವನೆಯಿಂದ ದೂರವಿರಿ.
ಆ್ಯಸಿಡಿಟಿಗೆ ನಿಂಬೆಹಣ್ಣು ಒಳ್ಳೆಯ ಮದ್ದು. ಒಂದು ಗ್ಲಾಸ್ ನಿಂಬೆ ಜ್ಯೂಸ್ಗೆ ಕಪ್ಪು ಉಪ್ಪು ಹಾಕಿ ಸೇವಿಸಿ.
ಪುದೀನ ಎಲೆಗಳನ್ನ ಒಂದು ಕಪ್ ನೀರಿಗೆ ಹಾಕಿ ಕುದಿಸಿ. ಬಳಿಕ ಈ ಮಿಶ್ರಣವನ್ನ ಸೋಸಿ ಊಟವಾದ ಬಳಿಕ ಸೇವಿಸಿ.
ಒಂದು ಗ್ಲಾಸ್ ತಂಪು ನೀರಿಗೆ ಒಂದು ಚಮಚ ನಿಂಬೆ ರಸ ಹಾಕಿ ಹಾಗೂ ಅರ್ಧ ಚಮಚ ಬೇಕಿಂಗ್ ಸೋಡಾ ಹಾಕಿ ಕುಡಿಯಿರಿ.
ಶುಂಠಿಯನ್ನು ಜಗಿಯಿರಿ ಅಥವಾ ಒಂದು ಚಮಚ ಜೇನು ತುಪ್ಪಕ್ಕೆ ಸ್ವಲ್ಪ ಶುಂಠಿ ರಸ ಸೇರಿಸಿ ಸೇವಿಸಿ.
ಒಂದು ಕಪ್ ನೀರನ್ನು ಬಿಸಿ ಮಾಡಿ ಅದಕ್ಕೆ 1 ಚಮಚ ಚಕ್ಕೆಯನ್ನು ಹಾಕಿ ಅದನ್ನು ರಾತ್ರಿ ಇಡೀ ಇಟ್ಟುಬಿಡಿ. ಬೆಳಗ್ಗೆ ನೀರನ್ನು ಸೋಸಿ ಅದಕ್ಕೆ 1 ಚಮಚ ಜೇನು ತುಪ್ಪ ಸೇರಿಸಿ ಸೇವಿಸಿ.
ದಿನಾ ಬೆಳಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವುದಕ್ಕೂ ಮುನ್ನ ಒಂದು ಗ್ಲಾಸ್ ಬಿಸಿ ನೀರನ್ನು ಕುಡಿಯಿರಿ.
ತಂಪು ಹಾಲನ್ನು ಕುಡಿಯಿರಿ. ಸಕ್ಕರೆ ಹಾಕದೆ ಹಾಲನ್ನು ಕುಡಿದರೆ ಒಳ್ಳೆಯದು.
ಲವಂಗವನ್ನು ಜಗಿಯಿರಿ ಅಥವಾ ಅದನ್ನು ನೀರಿನ ಜೊತೆ ಕುದಿಸಿ ಆ ನೀರನ್ನು ಕುಡಿಯಿರಿ.
ಆ್ಯಸಿಡಿಟಿ ಸಮಸ್ಯೆ ಇರೋರು ಕಾಫಿ, ಆಲ್ಕೋಹಾಲ್ನಿಂದ ದೂರವಿರಿ. ನೀರಿನಂಶ ಅಧಿಕವಿರುವ ತರಕಾರಿ ಮುಳ್ಳು ಸೌತೆಯನ್ನ ಊಟದ ಬಳಿಕ ಸೇವಿಸಿದ್ರೆ ಒಳ್ಳೆಯದು.