MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ವಿಶ್ವದ ಮೊದಲ ಎಂಜಿನಿಯರ್, ಶಿವನ ಅವತಾರ ವಿಶ್ವಕರ್ಮರ ಜಯಂತಿ ಮಹತ್ವ ಏನು?

ವಿಶ್ವದ ಮೊದಲ ಎಂಜಿನಿಯರ್, ಶಿವನ ಅವತಾರ ವಿಶ್ವಕರ್ಮರ ಜಯಂತಿ ಮಹತ್ವ ಏನು?

ಪ್ರತಿವರ್ಷ ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುತ್ತದೆ. ಯಾರು ಈ ವಿಶ್ವಕರ್ಮ? ಈ ದಿನದ ಮಹತ್ವ ಏನು? ಯಾಕೆ ವಿಶ್ವಕರ್ಮರನ್ನು ಪೂಜಿಸಲಾಗುತ್ತೆ ಅನ್ನೋದನ್ನು ತಿಳಿಯೋಣ.  

2 Min read
Author : Suvarna News
Published : Sep 14 2023, 05:32 PM IST
Share this Photo Gallery
  • FB
  • TW
  • Linkdin
  • Whatsapp
17

ಭಾರತವು ವಿವಿಧ ಹಬ್ಬಗಳ ಭೂಮಿಯಾಗಿದ್ದು, ವಿವಿಧ ಹಬ್ಬವನ್ನು ದೇಶಾದ್ಯಂತ ಅತ್ಯಂತ ಸಂತೋಷ, ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬಗಳು ಭಾರತೀಯರ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಇವುಗಳಲ್ಲಿ ಒಂದು ವಿಶ್ವಕರ್ಮ ಪೂಜೆ (Vishwakarma Puja) ಅಥವಾ ವಿಶ್ವಕರ್ಮ ಜಯಂತಿಯನ್ನು ಹಿಂದೂ ವಾಸ್ತುಶಿಲ್ಪದ ದೇವರಾದ ವಿಶ್ವಕರ್ಮನಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಆಚರಿಸಲಾಗುತ್ತದೆ.  ಈ ಹಬ್ಬವನ್ನು ಸಾಮಾನ್ಯವಾಗಿ ಮನೆಗಳಲ್ಲಿ ಆಚರಿಸಲಾಗುವುದಿಲ್ಲ, ಆದರೆ ಕೆಲಸದ ಸ್ಥಳಗಳು, ವ್ಯಾಪಾರ ಸ್ಥಳಗಳು, ಕಾರ್ಖಾನೆ, ಗಿರಣಿ ಮತ್ತು ಕಚೇರಿಗಳಲ್ಲಿ ಪೂಜಿಸಲಾಗುತ್ತದೆ.
 

27

ಕನ್ಯಾ ಸಂಕ್ರಾಂತಿಯನ್ನು ಪ್ರತಿವರ್ಷ ಸೆಪ್ಟೆಂಬರ್ 17 ರಂದು ಭಗವಾನ್ ವಿಶ್ವಕರ್ಮನ ಜನ್ಮದಿನದಂದು ಆಚರಿಸಲಾಗುತ್ತದೆ. ಶಿವನ ತ್ರಿಶೂಲ, ಲಂಕಾ ಮಹಲ್, ದ್ವಾರಕಾ ಮುಂತಾದ ದೇವರುಗಳು ಮತ್ತು ದೇವತೆಗಳ ಆಯುಧಗಳು ಮತ್ತು ಕಟ್ಟಡಗಳ ನಿರ್ಮಾಣವು ಭಗವಾನ್ ವಿಶ್ವಕರ್ಮರಿಂದಾಗಿದೆ. ಕುಶಲಕರ್ಮಿಗಳು, ಪೀಠೋಪಕರಣ ತಯಾರಕರು, ಯಂತ್ರೋಪಕರಣಗಳು ಮತ್ತು ಕಾರ್ಖಾನೆಗಳಿಗೆ ಸಂಬಂಧಿಸಿದ ಜನರು ಭಗವಾನ್ ವಿಶ್ವಕರ್ಮ ಜಯಂತಿಯನ್ನು (Vishwakarma Jayanti) ಆಡಂಬರದಿಂದ ಆಚರಿಸುತ್ತಾರೆ.  
 

37

ಯಾರು ಈ ಭಗವಾನ್ ವಿಶ್ವಕರ್ಮ?
ಭಗವಾನ್ ವಿಶ್ವಕರ್ಮನನ್ನು ದೇವತೆಗಳ ವಾಸ್ತುಶಿಲ್ಪಿ ಎನ್ನಲಾಗುತ್ತೆ. ಆದ್ದರಿಂದ, ಅವರನ್ನು ಕರಕುಶಲತೆಯ ದೇವರು ಎಂದೂ ಕರೆಯಲಾಗುತ್ತದೆ. ಅವನ ತಂದೆ ಹೆಸರು ವಾಸ್ತು, ಅವನು ಧರ್ಮದ ಏಳನೇ ಮಗು ಮತ್ತು ಧರ್ಮ ಬ್ರಹ್ಮ ಜಿ ಅವರ ಮಗ. ಭಗವಾನ್ ವಿಶ್ವಕರ್ಮನನ್ನು ನಿರ್ಮಾಣ ಮತ್ತು ಸೃಜನತೆಯ ದೇವರು ಎಂದು ಪರಿಗಣಿಸಲಾಗಿದೆ. ತಾಂತ್ರಿಕ ಪ್ರಪಂಚದ ಭಗವಾನ್ ವಿಶ್ವಕರ್ಮನ ಹಬ್ಬವನ್ನು ಪ್ರತಿವರ್ಷ ಕನ್ಯಾ ಸಂಕ್ರಾಂತಿಯ (Kanya Sankranti) ದಿನದಂದು ಆಚರಿಸಲಾಗುತ್ತದೆ, ಇದು ಸಾಮಾನ್ಯವಾಗಿ ಸೆಪ್ಟೆಂಬರ್ 16 ಅಥವಾ 17 ರಂದು ಬರುತ್ತದೆ.  
 

47

ವಿಶ್ವಕರ್ಮ ಪುರಾಣದ ಪ್ರಕಾರ, ನಾರಾಯಣನು ಮೊದಲು ಬ್ರಹ್ಮ ಮತ್ತು ನಂತರ ವಿಶ್ವಕರ್ಮ ನನ್ನು ಸೃಷ್ಟಿಸಿದರಂತೆ. ಬ್ರಹ್ಮನ ಸೂಚನೆ ಮೇರೆಗೆ, ವಿಶ್ವಕರ್ಮ ಪುಷ್ಪಕ ವಿಮಾನ, ಇಂದ್ರಪುರಿ, ತ್ರೇತಾಯುಗದಲ್ಲಿ ಲಂಕಾ, ದ್ವಾಪರದಲ್ಲಿ ದ್ವಾರಕಾ ಮತ್ತು ಹಸ್ತಿನಾಪುರ, ಕಲಿಯುಗದಲ್ಲಿ ಜಗನ್ನಾಥ ಪುರಿಯನ್ನು (Puri Jagannath) ನಿರ್ಮಿಸಿದರು. ಇದರೊಂದಿಗೆ, ಭಗವಾನ್ ವಿಶ್ವಕರ್ಮ ಪ್ರಾಚೀನ ಧರ್ಮಗ್ರಂಥಗಳಲ್ಲಿ ವಾಸ್ತು ಶಾಸ್ತ್ರ, ಯಂತ್ರ ನಿರ್ಮಾಣ್, ವಿಮಾನ ವಿದ್ಯೆ ಇತ್ಯಾದಿಗಳ ಜ್ಞಾನದ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ.
 

57

ವಿಶ್ವಕರ್ಮನ ಜನ್ಮದಿನವನ್ನು ಪ್ರತಿವರ್ಷ ಸೆಪ್ಟೆಂಬರ್ 17 ರಂದು (September 17) ವಿಶ್ವಕರ್ಮ ಜಯಂತಿ ಎಂದು ಆಚರಿಸಲಾಗುತ್ತದೆ. ವಿಶ್ವಕರ್ಮನನ್ನು ಶಿವನ ಅವತಾರವೆಂದು ಪರಿಗಣಿಸಲಾಗಿದೆ. ವಿಶ್ವಕರ್ಮನಿಗೆ ವಿಶ್ವದಲ್ಲೇ ಮೊದಲ ವಾಸ್ತುಶಿಲ್ಪಿ ಮತ್ತು ಎಂಜಿನಿಯರಿಂಗ್ ಎಂಬ ಬಿರುದನ್ನು ನೀಡಲಾಗಿದೆ. ಈ ದಿನ, ಎಲ್ಲಾ ಜನರು ತಮ್ಮ ಮನೆಗಳಲ್ಲಿ ಸಂತೋಷ ಮತ್ತು ಶಾಂತಿಗಾಗಿ ಮತ್ತು ತಮ್ಮ ಮತ್ತು ತಮ್ಮ ವ್ಯವಹಾರದಲ್ಲಿ ಪ್ರಗತಿಗಾಗಿ ವಿಶ್ವಕರ್ಮ ಪೂಜೆಯನ್ನು ಮಾಡುತ್ತಾರೆ.  
 

67

ವಿಶ್ವಕರ್ಮ ಪೂಜೆಯ ಮಹತ್ವ
ನಮ್ಮ ಋಷಿಮುನಿಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರೊಂದಿಗೆ ವಿಶ್ವಕರ್ಮನನ್ನು ಪೂಜಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಭಗವಾನ್ ವಿಶ್ವಕರ್ಮನನ್ನು ಪ್ರಾಚೀನ ಕಾಲದ ಮೊದಲ ಎಂಜಿನಿಯರ್ (engineer). ಈ ದಿನ, ಕೈಗಾರಿಕಾ ವಲಯಕ್ಕೆ ಸಂಬಂಧಿಸಿದ ಸೆಸ್, ಉಪಕರಣಗಳು ಇತ್ಯಾದಿಗಳನ್ನು ಪೂಜಿಸುವುದು ಕೆಲಸದಲ್ಲಿ ದಕ್ಷತೆಯನ್ನು ತರುತ್ತದೆ. ಕರಕುಶಲತೆ ಬೆಳೆಯುತ್ತದೆ. ವ್ಯಾಪಾರ ಹೆಚ್ಚಾಗುತ್ತದೆ ಮತ್ತು ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ. .

77

ವಿಶ್ವಕರ್ಮ ಪೂಜೆ ಶುಭ ಮುಹೂರ್ತ ಯಾವಾಗ?
ಭಗವಾನ್ ವಿಶ್ವಕರ್ಮ ಪೂಜೆಯ ಶುಭ ಮುಹೂರ್ತ - ಸೆಪ್ಟೆಂಬರ್ 17 ರಂದು ಬೆಳಿಗ್ಗೆ 07.39 ರಿಂದ 09.11 ರವರೆಗೆ 
ಎರಡನೇ ಶುಭ ಸಮಯ- ಮಧ್ಯಾಹ್ನ 01.48 ರಿಂದ 03.20
3 ನೇ ಶುಭ ಸಮಯ - ಮಧ್ಯಾಹ್ನ 03.20 ರಿಂದ ಸಂಜೆ 04.52

About the Author

SN
Suvarna News
ಹಬ್ಬ

Latest Videos
Recommended Stories
Recommended image1
4 ರಾಶಿಗೆ ದೊಡ್ಡ ಅದೃಷ್ಟ, ಶುಕ್ರನ ಮಾಲವ್ಯ ರಾಜಯೋಗದಿಂದ ರಾಜವೈಭೋಗ
Recommended image2
ಬುಧನ ಹಿಮ್ಮುಖ ಚಲನೆ, ಈ 4 ರಾಶಿಗಳಿಗೆ ಸಂಕಷ್ಟ ತಪ್ಪಿದ್ದಲ್ಲ!
Recommended image3
ಅಡ್ಡಪಲ್ಲಕ್ಕಿ ಉತ್ಸವದ ವೇಳೆ ಬಂದೂಕಿನಿಂದ 'ಗಾಳಿಯಲ್ಲಿ ಗುಂಡು' ಹಾರಿಸಿದ ಬಸನಗೌಡ ಪಾಟೀಲ್; ಈಗ ಪೊಲೀಸರ ಅತಿಥಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved