ಆಷಾಢ ಏಕಾದಶಿ; ನಿಮ್ಮ ಪೂಜೆ, ವ್ರತ ಹೀಗಿದ್ದರೆ ಉತ್ತಮ ಫಲ ಖಂಡಿತ!
ಭಗವಂತ ವಿಷ್ಣುವಿಗೆ ಅರ್ಪಿತವಾದ ಪ್ರಮುಖ ದಿನಗಳಲ್ಲಿ ದೇವಶಯಾನಿ ಏಕಾದಶಿಯೂ ಒಂದು. ಈ ದಿನದಂದು ಭಕ್ತರು ದಿನವಿಡೀ ಉಪವಾಸ ಮಾಡಿ ವ್ರತ ಮಾಡುತ್ತಾರೆ. ಹೀಗೆ ಮಾಡುವುದರಿಂದ ದೊರಕುವ ಫಲವೇನು?ಈ ವರ್ಷ ಜುಲೈ1ರ ಬುಧವಾರ ದೇವಶಯಾನಿ ಏಕಾದಶಿಯನ್ನು ಆಚರಿಸಲಾಗುತ್ತದೆ.
ಆಶಾಢ ಮಾಸ ಶುಕ್ಲ ಪಕ್ಷದಲ್ಲಿ ವಿಷ್ಣುವಿಗೆ ಸಮರ್ಪಿತವಾದ ದಿನವೇ ದೇವಶಯಾನಿ ಏಕಾದಶಿ.
ದೇವಶಯಾನಿ ಏಕಾದಶಿ ನಂತರ ನಾಲ್ಕು ತಿಂಗಳ ಕಾಲ ವಿಷ್ಣು ಯೋಗ ನಿದ್ರೆಗೆ ಜಾರಿ ಪ್ರಬೋಧಿನಿ ಏಕಾದಶಿಯಂದು ಎದ್ದೇಳುತ್ತಾನೆ.
ಏಕಾದಶಿ ದಿನ ವ್ರತ ಮಾಡಿ, ಉಪವಾಸ ಮಾಡಿದರೆ, ವಿಷ್ಣು ಭೂಮಿ ಮೇಲೆ ಆನಂದಮಯ ಜೀವನ ಕರುಣಿಸುತ್ತಾನೆ ಎಂದು ನಂಬಲಾಗುತ್ತದೆ.
ಪುನರ್ಜನ್ಮ ಹಾಗೂ ಮೋಕ್ಷ ಬಯಸುವವರು ಈ ದಿನದಂದು ವಿಷ್ಣುವನ್ನು ಪ್ರಾರ್ಥಿಸುತ್ತಾರೆ.
ಏಕಾಗ್ರತೆ ಹಾಗೂ ಪ್ರಾಮಾಣಿಕವಾಗಿ ವ್ರತ ಮಾಡುವುದರಿಂದ ಈ ದಿನ ಭಕ್ತರು ತಿಳಿದೋ, ತಿಳಿಯದೇ ಮಾಡುವ ತಪ್ಪುಗಳಿಂದ ಮುಕ್ತನಾಗುತ್ತಾರೆ.
ಏಕಾದಶಿ ವ್ರತದಿಂದ ನಮ್ಮನ್ನು ನಾವು ವಿಮರ್ಶಿಸಿಕೊಳ್ಳುವಂತೆ ಮಾಡುತ್ತದೆ. ದೇಹ ಶುದ್ಧಿ ಮಾಡುವುದಲ್ಲದೆ, ನಮ್ಮ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನೂ, ಕೆಟ್ಟ ದೃಷ್ಟಿಯನ್ನು ತೆಗೆದು ಹಾಕುತ್ತದೆ.
ಏಕಾದಶಿ ದಿನದಂದು ಉಪವಾಸ ಮಾಡಿದರೆ, ಗಂಗಾನದಿಯಲ್ಲಿ ಪುಣ್ಯ ಸ್ನಾನ ಮಾಡಿದಷ್ಟು ಪುಣ್ಯ ಬರುತ್ತದೆ.
ವೇದಿಕ್ ಕ್ಯಾಲೆಂಡರ್ ಪ್ರಕಾರ ಏಕಾದಶಿಯಂದು ಉಪವಾಸ ಮಾಡಿದರೆ ಶೇ.90 ಕ್ಯಾನ್ಸರ್ ಗುಣಮುಖವಾಗುತ್ತದೆ.