ಸಂಕ್ರಾಂತಿ: ಎಳ್ಳು, ಬೆಲ್ಲ, ತುಪ್ಪ ದಾನ ಮಾಡಿ, ಶುಭ ಲಾಭ ಪಡೆಯಿರಿ
First Published Jan 13, 2021, 7:04 PM IST
ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವಾಗ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಜನವರಿ 14 ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯದೇವನು ತನ್ನ ಮಗ ಶನಿಯನ್ನು ಭೇಟಿ ಮಾಡಲು ಬರುತ್ತಾನೆ ಎಂದು ನಂಬಲಾಗಿದೆ. ಸಾಮಾನ್ಯವಾಗಿ ಶುಕ್ರನ ಕಾಲವೂ ಅದೇ ಸಮಯದಲ್ಲಿ ಪ್ರಾರಂಭವಾಗುತ್ತದೆ, ಆದ್ದರಿಂದ ಶುಭ ಕಾರ್ಯಗಳು ಇಲ್ಲಿಂದ ಪ್ರಾರಂಭವಾಗುತ್ತವೆ.

ಮಕರ ಸಂಕ್ರಾಂತಿಯ ದಿನ ಸ್ನಾನ, ದಾನ-ಧರ್ಮ ಮುಂತಾದ ಕಾರ್ಯಗಳಿಗೆ ವಿಶೇಷ ಮಹತ್ವವಿದೆ. ಈ ದಿನದಂದು ಮಾಡಿದ ದೇಣಿಗೆ ಅಥವಾ ದಾನ ಅತ್ಯಮೂಲ್ಯವಾಗಿರುತ್ತದೆ. ಈ ದಿನ ಶನಿದೇವರಿಗೆ ಬೆಳಕನ್ನು ದಾನ ಮಾಡುವುದು ಕೂಡ ಶುಭಕರ. ಮಕರ ಸಂಕ್ರಾಂತಿಯ ದಿನ ದಾನ ಮಾಡುವುದರಿಂದ ಸುಖ ಸಮೃದ್ಧಿ ಮತ್ತು ಸಂಪತ್ತಿನ ಆಗಮನ ಆಗುತ್ತದೆ ಎನ್ನಲಾಗುತ್ತದೆ.

ಎಳ್ಳು ದಾನಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ಬ್ರಾಹ್ಮಣರಿಗೆ ಎಳ್ಳನ್ನು ದಾನ ಮಾಡುವುದು ಪುಣ್ಯವೆಂದು ಪರಿಗಣಿಸಲಾಗಿದೆ. ಇದರ ಜೊತೆಗೆ ಈ ದಿನದಂದು ವಿಷ್ಣು, ಸೂರ್ಯ ಮತ್ತು ಶನಿದೇವರನ್ನು ಸಹ ಎಳ್ಳಿನಿಂದ ಪೂಜಿಸಲಾಗುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?