MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • ಮದ್ವೆಯಾಗಿ 9 ವರ್ಷವಾದ್ರೂ Bhagyalakshmi ತಾಂಡವ್​ಗೆ​ ಮಕ್ಕಳೇಕೆ ಇಲ್ಲ? ಕೊನೆಗೂ ಕಾರಣ ಕೊಟ್ಟ ಸ್ಟಾರ್​ ದಂಪತಿ

ಮದ್ವೆಯಾಗಿ 9 ವರ್ಷವಾದ್ರೂ Bhagyalakshmi ತಾಂಡವ್​ಗೆ​ ಮಕ್ಕಳೇಕೆ ಇಲ್ಲ? ಕೊನೆಗೂ ಕಾರಣ ಕೊಟ್ಟ ಸ್ಟಾರ್​ ದಂಪತಿ

ಭಾಗ್ಯಲಕ್ಷ್ಮಿ ಧಾರಾವಾಹಿಯ ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಮತ್ತು ಅವರ ಪತ್ನಿ ಸಂಗೀತಾ ಭಟ್ ದಂಪತಿ ಮಕ್ಕಳನ್ನು ಹೊಂದದಿರಲು ನಿರ್ಧರಿಸಿದ ಕಾರಣವೇನು?. Bhagyalakshmi Tandav Sudarshan Rangaprasad about not having child

2 Min read
Suchethana D
Published : Sep 14 2025, 10:25 AM IST
Share this Photo Gallery
  • FB
  • TW
  • Linkdin
  • Whatsapp
18
ಸಿಡುಕು ಮೋರೆ ಸಿದ್ದಪ್ಪ
Image Credit : our own

ಸಿಡುಕು ಮೋರೆ ಸಿದ್ದಪ್ಪ

ಸದಾ ಸಿಡುಕು ಮೋರೆ, ಹೆಂಡತಿ ಎಂದರೆ ಕಾಲ ಕಸಕ್ಕಿಂತ ಕಡಿಮೆ. 16 ವರ್ಷ ಸಂಸಾರದಿಂದ ಎರಡು ಮಕ್ಕಳಾದ ಮೇಲೆ ಪತ್ನಿ ಬಿಟ್ಟು ಲವರ್​ನ ಮದ್ವೆಯಾದ ಪಾಪಿ, ಲವರ್​ ಜೊತೆ ಮದ್ವೆಯಾದರೂ ಪತ್ನಿಯ ಬೆನ್ನು ಬಿಡದ ರಾಕ್ಷಸ... ಹೀಗೆಲ್ಲಾ ಬೈದುಕೊಂಡರೆ ಅದು ಬೇರ್ಯಾರೂ ಅಲ್ಲ, Colors Kannadaದ ಭಾಗ್ಯಲಕ್ಷ್ಮಿ ಸೀರಿಯಲ್​ ನಾಯಕ ತಾಂಡವ್​ನೇ ಆಗಿರುತ್ತಾನೆ!

28
ಭಾಗ್ಯಲಕ್ಷ್ಮಿ ನಾಯಕ- ಖಳ ನಾಯಕ
Image Credit : our own

ಭಾಗ್ಯಲಕ್ಷ್ಮಿ ನಾಯಕ- ಖಳ ನಾಯಕ

Bhagyalkashmi Serialನಲ್ಲಿ ಈತನೇ ನಾಯಕ, ಈತನೇ ಖಳನಾಯಕ! ಪತ್ನಿ, ಮುದ್ದಾದ ಮಕ್ಕಳು ಇದ್ದರೂ ಇನ್ನೊಬ್ಬಳ ಸಹವಾಸ ಮಾಡಿದ್ದಾನೆ. ತಾಂಡವ್​ನನ್ನು ಕಂಡ್ರೆ ಸೀರಿಯಲ್​ ಪ್ರಿಯರು ಉಗಿಯುತ್ತಿದ್ದಾರೆ. ಸಾಮಾನ್ಯವಾಗಿ ಖಳನಾಯಕ ಎಂದರೆ ಹೊರಗಡೆಯಲ್ಲಿಯೂ ಅವರನ್ನು ಬೈಯುವವರೇ ಹೆಚ್ಚು. ತಾವು ನೋಡುತ್ತಿರುವುದು ಧಾರಾವಾಹಿ, ಅದರಲ್ಲಿ ಇರುವುದು ಕಾಲ್ಪನಿಕ ಪಾತ್ರಗಳು ಎನ್ನುವುದನ್ನು ಮರೆತು, ಖಳನಾಯಕರನ್ನು ಚೆನ್ನಾಗಿ ಉಗಿಯುವುದೂ ಇದೆ. ಅದೇ ರೀತಿ ತಾಂಡವ್​ ಪಾತ್ರಧಾರಿಯೂ ಅನುಭವಿಸುತ್ತಿದ್ದಾರೆ. ಅಂದಹಾಗೆ, ಖಳನಾಯಕನಾಗಿ ಮಿಂಚುತ್ತಿರುವ ತಾಂಡವ್​ ಪಾತ್ರಧಾರಿಯ ನಿಜವಾದ ಹೆಸರು ಸುದರ್ಶನ್‌ ರಂಗಪ್ರಸಾದ್‌. (Sudarshan Rangaprasad)

Related Articles

Related image1
Wedding Anniversary: ಅಲ್ಲಿ ಸಿಡುಕು ಮೋರೆ, ಇಲ್ಲಿ ಕೂಲ್​ ಗಂಡ: ಭಾಗ್ಯಲಕ್ಷ್ಮಿ ತಾಂಡವ್​ ಇಂಟರೆಸ್ಟಿಂಗ್​ ಮಾಹಿತಿ...
Related image2
ನನ್ನ ರಿಯಲ್‌ ಹೆಂಡ್ತಿಯಾಗಿದ್ರೆ ನನ್ನ ಕಿಡ್ನಿ ಮಾರಿ ಐಫೋನ್‌ ತಗೊಂಡ್‌ ಬರುತ್ತಿದ್ದಳು ಅಷ್ಟೇ!
38
ನಟಿ- ಮಾಡೆಲ್​ ಆಗಿರೋ ಸಂಗೀತಾ
Image Credit : Asianet News

ನಟಿ- ಮಾಡೆಲ್​ ಆಗಿರೋ ಸಂಗೀತಾ

ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ತಾಂಡವ್​ಗೆ ಇಬ್ಬರು ಪತ್ನಿಯರ ಜೊತೆಗೆ ಇಬ್ಬರು ಮಕ್ಕಳು. ಆದರೆ ರಿಯಲ್​ ಲೈಫ್​ ಸುದರ್ಶನ್​ ರಂಗಪ್ರಸಾದ್​ ಅವರಿಗೆ ಸೆಲೆಬ್ರಿಟಿ ಪತ್ನಿ ಇದ್ದಾರೆ. ಅವರೇ ಸಂಗೀತಾ ಭಟ್​. ಇವರ ಮದುವೆಯಾಗಿ 9 ವರ್ಷಗಳಾಗಿವೆ. ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಏನೂ ಗೊತ್ತಿಲ್ಲದ, ಹೆಚ್ಚು ಕಲಿಯದ ಭಾಗ್ಯ ತಾಂಡವ್​ ಪತ್ನಿಯಾದರೆ, ಅಸಲಿ ಜೀವನದಲ್ಲಿ ನಟಿ ಸಂಗೀತಾ ಭಟ್​, ತಾಂಡವ್​ ಅರ್ಥಾತ್​ ಸುದರ್ಶನ ರಂಗಪ್ರಸಾದ್​ ಅವರ ಪತ್ನಿ. ಸಂಗೀತಾ ಭಟ್‌ ನಟಿಯಾಗಿ, ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದಾರೆ.

48
ಹಲವು ಭಾಷಾ ನಟಿ
Image Credit : sangeetha bhat instagram

ಹಲವು ಭಾಷಾ ನಟಿ

ತಮಿಳು ಸಿನಿಮಾ ಮೂಲಕ ಸಂಗೀತ ಭಟ್‌ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದ ಸಂಗೀತಾ ಭಟ್‌ ಸ್ವಲ್ಪ ಕಾಲ ಸಿನಿ ಪಯಣದಿಂದ ದೂರವೇ ಉಳಿದು 2 ವರ್ಷಗಳ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಿದ್ದರು. ಇವರು ತುಂಬಾ ಸುದ್ದಿ ಮಾಡಿದ್ದು, ಮೀ ಟೂ ಅಭಿಯಾನ ಜೋರಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ. 2018 ರಲ್ಲಿ ನಡೆದ ಮಿ ಟೂ ಅಭಿಯಾನದ ವೇಳೆ ಸಂಗೀತಾ ಭಟ್‌, ತಾವೂ ಕೂಡಾ ಚಿತ್ರರಂಗದಲ್ಲಿ ಕಿರುಕುಳ ಅನುಭವಿಸಿರುವ ಬಗ್ಗೆ ತಿಳಿಸಿದ್ದರು. ನಟನೆಯಿಂದ ದೂರ ಉಳಿದ ನಂತರ ಸಂಗೀತಾ ಅವರು ಕೆಲವು ದಿನಗಳ ಕಾಲ ಜರ್ಮನಿಯಲ್ಲಿದ್ದರು. ಕಳೆದ ವರ್ಷ ಬಿಡುಗಡೆಯಾದ '48 ಅವರ್ಸ್‌' ಸಿನಿಮಾ ಅವರ ಕೊನೆಯ ಚಿತ್ರ.

58
ಮಕ್ಕಳಾಗದ್ದಕ್ಕೆ ಉತ್ತರ
Image Credit : Google

ಮಕ್ಕಳಾಗದ್ದಕ್ಕೆ ಉತ್ತರ

ಇಂತಿಪ್ಪ ದಂಪತಿಗೆ ಮದುವೆಯಾಗಿ ಇಷ್ಟು ವರ್ಷವಾದರೂ ಮಕ್ಕಳೇಕೆ ಆಗಿಲ್ಲ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನು ಸದಾ ಕಾಡುತ್ತಲೇ ಇರುತ್ತದೆ. ಇದೀಗ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ. ಸಂಗೀತಾ (Sangeeta Bhat) ಅವರ ʻಕಮಲ್‌ ಶ್ರೀದೇವಿʼ ಸಿನಿಮಾದ ಟ್ರೈಲರ್‌ ಲಾಂಚ್‌ ಈಚೆಗೆ ನಡೆದ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ಅವರು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಪತಿ ಸುದರ್ಶನ್​ ಕೂಡ ಇದ್ದರು.

68
ಜವಾಬ್ದಾರಿ ಇಷ್ಟವಿಲ್ಲ
Image Credit : our own

ಜವಾಬ್ದಾರಿ ಇಷ್ಟವಿಲ್ಲ

ನಮಗೆ ಜವಾಬ್ದಾರಿ ಎಂದರೆ ಸ್ವಲ್ಪ ಕಷ್ಟವೇ. ಮಕ್ಕಳ ವಿಷಯದಲ್ಲಿ ಜವಾಬ್ದಾರಿ ಹೊರುವುದು ಕಷ್ಟ ಆಗಬಹುದು. ಇದನ್ನು ಕೇಳಿದ್ರೆ ತುಂಬಾ ಜನ ಬೈದುಕೊಳ್ಳುತ್ತಾರೆ ಎನ್ನುವುದು ಗೊತ್ತು. ಮಕ್ಕಳ ಜವಾಬ್ದಾರಿ ಬೇಡ್ವಾ ಎಂದೂ ಪ್ರಶ್ನಿಸುತ್ತಾರೆ. ಆದರೆ, ನಾವಿರುವ ಸನ್ನಿವೇಶದಲ್ಲಿ, ನಮ್ಮ ಜೀವನದಲ್ಲಿ ಆದ ಕೆಲವು ಘಟನೆಗಳಿಂದ ಇನ್ನೊಂದು ಜೀವಿಯನ್ನು ಈ ಭೂಮಿಯ ಮೇಲೆ ತರಲು ನಾವು ರೆಡಿ ಇಲ್ಲ. ಇದೇ ಕಾರಣಕ್ಕೆ ಮಕ್ಕಳು ಮಾಡಿಕೊಳ್ಳದೇ ಇರಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

78
ಜನ ಬೈದರೂ ತಲೆ ಕೆಡಿಸಿಕೊಳ್ಳುವುದಿಲ್ಲ
Image Credit : Instagram

ಜನ ಬೈದರೂ ತಲೆ ಕೆಡಿಸಿಕೊಳ್ಳುವುದಿಲ್ಲ

ನಮ್ಮ ನಿರ್ಧಾರಕ್ಕೆ ಜನ ಬೈದುಕೊಳ್ಳಬಹುದು. ಆದರೆ ಅದಕ್ಕೆ ಕೆಡಿಸಿಕೊಳ್ಳುವುದಿಲ್ಲ. ಹೇಗೆ ಐದು ಬೆರಳುಗಳೂ ಸರಿಸಮಾನವಾಗಿ ಇರುವುದಿಲ್ಲವೋ ಹಾಗೆ ವ್ಯಕ್ತಿವ್ಯಕ್ತಿಗಳಲ್ಲಿಯೂ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಇರುತ್ತವೆ. ಇದು ನಾವು ಕಂಡುಕೊಂಡಿರುವ ದಾರಿ, ಇದು ನಮ್ಮ ಚಾಯ್ಸ್​ ಅಷ್ಟೇ. ಮಗು ಬೇಡ ಎನ್ನುವುದು ನಮ್ಮ ನಿರ್ಧಾರ ಎಂದು ದಂಪತಿ ಹೇಳಿದ್ದಾರೆ.

88
ನಾವು ತ್ಯಾಗ ಮಾಡುವುದು...
Image Credit : our own

ನಾವು ತ್ಯಾಗ ಮಾಡುವುದು...

ಇನ್ನೊಂದು ಜೀವವನ್ನು ಭೂಮಿಯ ಮೇಲೆ ತಂದು ಅದಕ್ಕಾಗಿ ನಮ್ಮ ಜೀವನವನ್ನು ತ್ಯಾಗ ಮಾಡಬೇಕು. ಈಗ ಎಲ್ಲವೂ ಸಿಕ್ಕಾಪಟ್ಟೆ ದುಬಾರಿ. ಈ ಪರಿಸ್ಥಿತಿಯಲ್ಲಿ ಮಗುವನ್ನು ನೋಡಿಕೊಂಡು ತ್ಯಾಗ ಮಾಡಿ ಅದನ್ನು ಮುಂದೆ ತರುವುದು ಕಷ್ಟವಾಗುತ್ತದೆ. ಆದ್ದರಿಂದ ಮಗು ಬೇಡ ಎಂದಿದ್ದಾರೆ ಸಂಗೀತಾ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ
ಸಂಬಂಧಗಳು
ಮಕ್ಕಳು
ಮದುವೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved