MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Education
  • ದೃಷ್ಟಿದೋಷ ಲೆಕ್ಕಿಸದೆ SSLCಯಲ್ಲಿ 592 ಅಂಕ ಗಳಿಸಿದ ಕೌಶಿಕ್

ದೃಷ್ಟಿದೋಷ ಲೆಕ್ಕಿಸದೆ SSLCಯಲ್ಲಿ 592 ಅಂಕ ಗಳಿಸಿದ ಕೌಶಿಕ್

ಚಿಕ್ಕಬಳ್ಳಾಪುರದ ಪೆರೇಸಂದ್ರದ ಕೌಶಿಕ್ ರೆಡ್ಡಿ, ದೃಷ್ಟಿದೋಷವಿದ್ದರೂ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 592/625 ಅಂಕ ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಸಂಸದ ಸುಧಾಕರ್ ಅವರ ಸಾಧನೆಯನ್ನು ಶ್ಲಾಘಿಸಿ, ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.

1 Min read
Sathish Kumar KH
Published : May 02 2025, 10:30 PM IST| Updated : May 02 2025, 10:38 PM IST
Share this Photo Gallery
  • FB
  • TW
  • Linkdin
  • Whatsapp
14

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಮನೋಬಲ, ಆತ್ಮವಿಶ್ವಾಸ, ದೃಢವಾದ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಚಿಕ್ಕಬಳ್ಳಾಪುರದ ಪೆರೇಸಂದ್ರದ ಸಾಧಕ ಕೌಶಿಕ್ ರೆಡ್ಡಿ ಸಾಧನೆಯೇ ಸಾಕ್ಷಿ.

24

ಕೌಶಿಕ್ ಗೆ ಬಾಲ್ಯದಿಂದಲೇ ದೃಷ್ಟಿದೋಷವಿದ್ದರೂ ಅದನ್ನು ಲೆಕ್ಕಿಸದೆ ಕಷ್ಟಪಟ್ಟು ಓದಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 592/625 ಅಂಕ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ. ಇಂದು ಪೆರೇಸಂದ್ರದಲ್ಲಿ ಕೌಶಿಕ್ ಅವನ ತಂದೆಯೊಂದಿಗೆ ಬಂದು ಸಿಹಿ ತಿನ್ನಿಸಿ ಖುಷಿ ಹಂಚಿಕೊಂಡಾಗ ಒಂದು ಕ್ಷಣ ಕಣ್ಣಿನಲ್ಲಿ ನೀರು ತುಂಬಿಕೊಂಡು ಬಂದರೂ ಮರುಕ್ಷಣ ಹೆಮ್ಮೆಯಾಯಿಯು, ಸಂತೋಷವಾಯಿತು.

Related Articles

Related image1
ಪೇನ್ ಕಿಲ್ಲರ್ ಇಂಜೆಕ್ಷನ್ ತಗೊಂಡು SSLC ಪರೀಕ್ಷೆ ಬರೆದು ರ‍್ಯಾಂಕ್ ಬಂದ ಧನುಷ್! ನಮಿತಾಗೆ ಸಿಎ ಆಗುವ ಗುರಿ!
Related image2
Now Playing
ಈ ಸಾಧನೆಗೆ ನನ್ನ ಟೀಚರ್ಸ್‌ಗಳೇ ಕಾರಣ : ಟಾಪರ್‌ ನಿತ್ಯ ಕುಲಕರ್ಣಿ
34

ಮನಸ್ಸಿನ ಸಂಕಲ್ಪದ ಮುಂದೆ ದೇಹದ ಯಾವ ನ್ಯೂನತೆಯೂ ದೊಡ್ಡದಲ್ಲ ಎನ್ನುವುದಕ್ಕೆ ಕೌಶಿಕ್ ಮತ್ತು ಅವನ ಪೋಷಕರ ಛಲವೇ ಎಲ್ಲರಿಗೂ ಮಾದರಿ. ಈ ಯುವಕ ದೃಷ್ಟಿ ದೋಷವಿದ್ದರೂ ಸಾಧನೆಗೆ ಮಾತ್ರ ತಾನೇನೂ ಕಮ್ಮಿಯಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾನೆ ಎಂದು ಸಂಸದ ಸುಧಾಕರ್ ಶ್ಲಾಘಿಸಿದ್ದಾರೆ.

44

ಅಭಿನಂದನೆಗಳು ಕೌಶಿಕ್, ನಿನ್ನ ಭವಿಷ್ಯ ಉಜ್ವಲವಾಗಲಿ, ನಿನ್ನ ಹೆತ್ತವರಿಗೆ, ಹುಟ್ಟೂರಿಗೆ ಇನ್ನಷ್ಟು ಒಳ್ಳೆಯ ಹೆಸರು ತರಲು ದೇವರು ನಿನಗೆ ಶಕ್ತಿ ಕೊಡಲಿ. All the best my boy. You have made us proud! ಎಂದು ಸಂಸದ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಡಾ. ಕೆ. ಸುಧಾಕರ್
ಚಿಕ್ಕಬಳ್ಳಾಪುರ
ಎಸ್‌ಎಸ್‌ಎಲ್‌ಸಿ (SSLC)
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved