Russia- Ukraine Crisis: ಭಾರತೀಯರ ಏರ್‌ಲಿಫ್ಟ್‌ಗೆ ನಾಲ್ವರು ಸಚಿವರಿಗೆ ಹೊಣೆ

Feb 28, 2022, 4:10 PM IST

ಉಕ್ರೇನ್‌ನಲ್ಲಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಭಾರತೀಯರ ಏರ್‌ಲಿಫ್ಟ್‌ಗೆ ಕೇಂದ್ರ ಸಚಿವರಿಗೆ ನೇತೃತ್ವ ವಹಿಸಲಾಗಿದೆ. ನಾಲ್ವರು ಸಚಿವರು 'ಆಪರೇಶನ್ ಗಂಗಾ' ನೇತೃತ್ವ ವಹಿಸಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾಗೆ ರೊಮೇನಿಯಾಗೆ ತೆರಳಲು ಸೂಚಿಸಿದ್ದಾರೆ. ಕಿರಣ್ ರಿಜಿಜುಗೆ ಸ್ಲೊವಾಕಿಯಾಗೆ ತೆರಳಲು ಸೂಚನೆ ನೀಡಲಾಗಿದೆ. ಸಚಿವ ಹರ್ದೀಪ್ ಪುರಿಗೆ ಹಂಗೇರಿ, ವಿ.ಕೆ ಸಿಂಗ್‌ಗೆ ಪೊಲೆಂಡ್‌ಗೆ ತೆರಳಲು ಸೂಚನೆ ನೀಡಿದ್ದಾರೆ. 

ಯುದ್ಧ ಭೂಮಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯ ಮುಂದುವರೆದಿದೆ. ಯುದ್ಧಭೂಮಿಯಿಂದ ಈವರೆಗೆ 1158 ಜನ ವಾಪಸ್ಸಾಗಿದ್ದಾರೆ. ಇನ್ನೂ ಸಾವಿರಾರು ಜನರನ್ನು ಕರೆತರಲಿದೆ ಏರ್‌ ಇಂಡಿಯಾ.