ಸರ್ಕಾರದ ಕಾಶಿಯಾತ್ರೆ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್

Aug 10, 2023, 8:13 PM IST

ಬೆಂಗಳೂರು(ಆ.10):  ಸರ್ಕಾರದ ಕಾಶಿಯಾತ್ರೆ  ಕಾರ್ಯಕ್ರಮಕ್ಕೆ ಭರ್ಜರಿಯಾದ ರೆಸ್ಪಾನ್ಸ್ ಸಿಗುತ್ತಿದೆ. ಹೌದು, ಸರ್ಕಾರವೇ ಸಬ್ಸಿಡಿ ನೀಡಿ ಕಾಶಿ ಯಾತ್ರೆಗೆ ಕಳುಹಿಸಿ ಕೊಡ್ತಾಯಿದೆ. ಈಗಾಗಲೇ ನಾಲ್ಕು ಬ್ಯಾಚ್‌ಗಳಲ್ಲಿ ಕಾಶಿ ಯಾತ್ರೆ ರೈಲು ಹೊರಟಿದ್ದು ಈಗ ಕಾಶಿಯಾತ್ರೆ ಸಹಾಯ ಧನವನ್ನು ಮತ್ತಷ್ಟು ಹೆಚ್ಚಿಸಿದೆ. ಕಾಶಿಯಾತ್ರೆ ಸರ್ಕಾರದಿಂದಲೇ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. 5 ಸಾವಿರ ಇದ್ದ ಸಹಾಯ ಧನ 7500 ರೂ.ಗೆ ಹೆಚ್ಚಿಸಲಾಗಿದೆ. ಸೆಪ್ಟಂಬರ್‌ 23 ರಂದು 6ನೇ ಬ್ಯಾಚ್‌ ಹೊರಡಲಿದೆ. ಭಾರತ ಗೌರವ ಕಾಶಿ ರೈಲಿಗೆ ರಾಜ್ಯದಲ್ಲಿ ಮತ್ತೊಂದು ಸ್ಪಾಪ್‌ ನೀಡಲಾಗಿದೆ. ಕಾಶಿ ರೈಲು ತುಮಕೂರಿನಲ್ಲಿಯೂ ನಿಲುಗಡೆಯಾಗಲಿದೆ. 

ಕಾಶಿಯಾತ್ರೆ ಸಬ್ಸಿಡಿ 7500ಗೆ ಹೆಚ್ಚಳಕ್ಕೆ ಚಿಂತನೆ: ಸಚಿವ ರಾಮಲಿಂಗಾರೆಡ್ಡಿ