ಕೊಡಗು- ಮಡಿಕೇರಿಯಲ್ಲಿ ಕಂಡು ಕೇಳರಿಯದ ಮೇಘಸ್ಪೋಟ,  ಭೂಕುಸಿತ ಕಂಟಕ

ಕೊಡಗು- ಮಡಿಕೇರಿಯಲ್ಲಿ ಕಂಡು ಕೇಳರಿಯದ ಮೇಘಸ್ಪೋಟ, ಭೂಕುಸಿತ ಕಂಟಕ

Published : Aug 05, 2022, 04:50 PM IST

ಜೂನ್‌ ಅಂತ್ಯದ ವೇಳೆ 10ಕ್ಕೂ ಹೆಚ್ಚು ಬಾರಿ ಕೊಡಗು- ಮಡಿಕೇರಿಯಲ್ಲಿ ಭೂಕಂಪವಾಗಿದೆ. ಈಗ ಅತಿವೃಷ್ಟಿಯಿಂದ ಗುಡ್ಡ ಕುಸಿತ, ಮನೆ ಮೇಲೆ ಗುಡ್ಡ ಬಂದು ಎರಗುವುದು, ಮನೆಗಳಿಗೆ ನೀರು ನುಗ್ಗುತ್ತಿದೆ. ಇಲ್ಲಿನ ಜನರು ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿದ್ದಾರೆ.

 ಜೂನ್‌ ಅಂತ್ಯದ ವೇಳೆ 10ಕ್ಕೂ ಹೆಚ್ಚು ಬಾರಿ ಕೊಡಗು- ಮಡಿಕೇರಿಯಲ್ಲಿ ಭೂಕಂಪವಾಗಿದೆ. ಈಗ ಅತಿವೃಷ್ಟಿಯಿಂದ ಗುಡ್ಡ ಕುಸಿತ, ಮನೆ ಮೇಲೆ ಗುಡ್ಡ ಬಂದು ಎರಗುವುದು, ಮನೆಗಳಿಗೆ ನೀರು ನುಗ್ಗುತ್ತಿದೆ. ಇಲ್ಲಿನ ಜನರು ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿದ್ದಾರೆ. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಈ ಗಡಿಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಗುಡ್ಡದಿಂದ ಭಾರೀ ಸದ್ದಿನೊಂದಿಗೆ ಏಕಾಏಕಿ ಕೆಸರು ಮಿಶ್ರಿತ ಜಲರಾಶಿ ನುಗ್ಗಿ ಅಪಾರ ಹಾನಿಯಾಗಿದೆ. ಈ ಭಾಗದಲ್ಲಿ ಅರ್ಧ ಎಕರೆಯಷ್ಟುವಿಶಾಲ ಪ್ರದೇಶದಲ್ಲಿ ಭಾರೀ ಭೂಪ್ರದೇಶ ಕುಸಿತವಾಗಿದೆ. ಭೂಮಿ ಕೆಸರಿನಂತಾಗಿ ಹರಿದು ಹೋಗಿದೆ. ಕೆಸರು ನೀರಿನಿಂದ 150 ರಬ್ಬರ್‌ ಮರಗಳು, 150 ಕಾಫಿ ಗಿಡ, 40ಕ್ಕೂ ಅಧಿಕ ಅಡಕೆ ಮರಗಳು ಸಂಪೂರ್ಣ ನಾಶವಾಗಿವೆ.

‘ನಾವು ಇಲ್ಲಿ ಹುಟ್ಟಿ, ಬೆಳೆದು ಇಷ್ಟುವರ್ಷವಾದರೂ ಇಂಥ ಅನುಭವ ಯಾವತ್ತೂ ಆಗಿಲ್ಲ. ಸ್ಫೋಟದ ಸದ್ದಿನೊಂದಿಗೆ ಪ್ರವಾಹದ ರೀತಿಯಲ್ಲಿ ಬೆಟ್ಟದಿಂದ ಕೆಸರು ನೀರು ಹರಿದು ಬರುವ ಇಂಥ ಕಂಡು ಕೇಳರಿಯದ ವಿದ್ಯಮಾನ ನಾವು ಈವರೆಗೆ ನೋಡೇ ಇಲ್ಲ. ವಿಚಿತ್ರವಾದ ಈ ಬೆಳವಣಿಗೆ ಕಾರಣ ಏನು? ಈ ರೀತಿ ನೀರು ಎಲ್ಲಿಂದ ಬರುತ್ತಿದೆ? ಆ ರೀತಿ ಸದ್ದು ಯಾಕಾಗುತ್ತಿದೆ ಎಂಬುದನ್ನು ವಿಜ್ಞಾನಿಗಳೇ ಹೇಳಬೇಕು’

- ಇದು ಕೊಡಗು ಜಿಲ್ಲೆಯ ಮಡಿಕೇರಿ ಜಿಲ್ಲೆಯ ಚೆಂಬು ಗ್ರಾಮದ ಸಮೀಪದ ದಬ್ಬಡ್ಕದಲ್ಲಿ ಉಂಟಾಗಿರುವ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಬಾಲಕೃಷ್ಣ ಮತ್ತು ದೇವಕಿ ದಂಪತಿ ಮಾತು. ಕಂಡು ಕೇಳರಿಯದ ಮೇಘಸ್ಪೋಟಕ್ಕೆ ಸಾಕ್ಷಿಯಾಗುತ್ತಿದೆ ಕೊಡಗು- ಮಡಿಕೇರಿ. ಇದಕ್ಕೆ ಕಾರಣವೇನು..? 


 

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
Read more