ಕೊಡಗು- ಮಡಿಕೇರಿಯಲ್ಲಿ ಕಂಡು ಕೇಳರಿಯದ ಮೇಘಸ್ಪೋಟ,  ಭೂಕುಸಿತ ಕಂಟಕ

ಕೊಡಗು- ಮಡಿಕೇರಿಯಲ್ಲಿ ಕಂಡು ಕೇಳರಿಯದ ಮೇಘಸ್ಪೋಟ, ಭೂಕುಸಿತ ಕಂಟಕ

Published : Aug 05, 2022, 04:50 PM IST

ಜೂನ್‌ ಅಂತ್ಯದ ವೇಳೆ 10ಕ್ಕೂ ಹೆಚ್ಚು ಬಾರಿ ಕೊಡಗು- ಮಡಿಕೇರಿಯಲ್ಲಿ ಭೂಕಂಪವಾಗಿದೆ. ಈಗ ಅತಿವೃಷ್ಟಿಯಿಂದ ಗುಡ್ಡ ಕುಸಿತ, ಮನೆ ಮೇಲೆ ಗುಡ್ಡ ಬಂದು ಎರಗುವುದು, ಮನೆಗಳಿಗೆ ನೀರು ನುಗ್ಗುತ್ತಿದೆ. ಇಲ್ಲಿನ ಜನರು ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿದ್ದಾರೆ.

 ಜೂನ್‌ ಅಂತ್ಯದ ವೇಳೆ 10ಕ್ಕೂ ಹೆಚ್ಚು ಬಾರಿ ಕೊಡಗು- ಮಡಿಕೇರಿಯಲ್ಲಿ ಭೂಕಂಪವಾಗಿದೆ. ಈಗ ಅತಿವೃಷ್ಟಿಯಿಂದ ಗುಡ್ಡ ಕುಸಿತ, ಮನೆ ಮೇಲೆ ಗುಡ್ಡ ಬಂದು ಎರಗುವುದು, ಮನೆಗಳಿಗೆ ನೀರು ನುಗ್ಗುತ್ತಿದೆ. ಇಲ್ಲಿನ ಜನರು ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿದ್ದಾರೆ. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಈ ಗಡಿಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಗುಡ್ಡದಿಂದ ಭಾರೀ ಸದ್ದಿನೊಂದಿಗೆ ಏಕಾಏಕಿ ಕೆಸರು ಮಿಶ್ರಿತ ಜಲರಾಶಿ ನುಗ್ಗಿ ಅಪಾರ ಹಾನಿಯಾಗಿದೆ. ಈ ಭಾಗದಲ್ಲಿ ಅರ್ಧ ಎಕರೆಯಷ್ಟುವಿಶಾಲ ಪ್ರದೇಶದಲ್ಲಿ ಭಾರೀ ಭೂಪ್ರದೇಶ ಕುಸಿತವಾಗಿದೆ. ಭೂಮಿ ಕೆಸರಿನಂತಾಗಿ ಹರಿದು ಹೋಗಿದೆ. ಕೆಸರು ನೀರಿನಿಂದ 150 ರಬ್ಬರ್‌ ಮರಗಳು, 150 ಕಾಫಿ ಗಿಡ, 40ಕ್ಕೂ ಅಧಿಕ ಅಡಕೆ ಮರಗಳು ಸಂಪೂರ್ಣ ನಾಶವಾಗಿವೆ.

‘ನಾವು ಇಲ್ಲಿ ಹುಟ್ಟಿ, ಬೆಳೆದು ಇಷ್ಟುವರ್ಷವಾದರೂ ಇಂಥ ಅನುಭವ ಯಾವತ್ತೂ ಆಗಿಲ್ಲ. ಸ್ಫೋಟದ ಸದ್ದಿನೊಂದಿಗೆ ಪ್ರವಾಹದ ರೀತಿಯಲ್ಲಿ ಬೆಟ್ಟದಿಂದ ಕೆಸರು ನೀರು ಹರಿದು ಬರುವ ಇಂಥ ಕಂಡು ಕೇಳರಿಯದ ವಿದ್ಯಮಾನ ನಾವು ಈವರೆಗೆ ನೋಡೇ ಇಲ್ಲ. ವಿಚಿತ್ರವಾದ ಈ ಬೆಳವಣಿಗೆ ಕಾರಣ ಏನು? ಈ ರೀತಿ ನೀರು ಎಲ್ಲಿಂದ ಬರುತ್ತಿದೆ? ಆ ರೀತಿ ಸದ್ದು ಯಾಕಾಗುತ್ತಿದೆ ಎಂಬುದನ್ನು ವಿಜ್ಞಾನಿಗಳೇ ಹೇಳಬೇಕು’

- ಇದು ಕೊಡಗು ಜಿಲ್ಲೆಯ ಮಡಿಕೇರಿ ಜಿಲ್ಲೆಯ ಚೆಂಬು ಗ್ರಾಮದ ಸಮೀಪದ ದಬ್ಬಡ್ಕದಲ್ಲಿ ಉಂಟಾಗಿರುವ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಬಾಲಕೃಷ್ಣ ಮತ್ತು ದೇವಕಿ ದಂಪತಿ ಮಾತು. ಕಂಡು ಕೇಳರಿಯದ ಮೇಘಸ್ಪೋಟಕ್ಕೆ ಸಾಕ್ಷಿಯಾಗುತ್ತಿದೆ ಕೊಡಗು- ಮಡಿಕೇರಿ. ಇದಕ್ಕೆ ಕಾರಣವೇನು..? 


 

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
Read more