ಆತನ ಬಾಯಿಗೆ ನಡುಗಿತು ಬ್ರಹ್ಮಾವರ ಸ್ಟೇಷನ್..​! ಧರ್ಮಸ್ಥಳ ವಿರೋಧಿ ಗ್ಯಾಂಗ್​​ನ ಮುಂದಿನ ನಡೆ ಏನು?

ಆತನ ಬಾಯಿಗೆ ನಡುಗಿತು ಬ್ರಹ್ಮಾವರ ಸ್ಟೇಷನ್..​! ಧರ್ಮಸ್ಥಳ ವಿರೋಧಿ ಗ್ಯಾಂಗ್​​ನ ಮುಂದಿನ ನಡೆ ಏನು?

Published : Aug 22, 2025, 02:36 PM IST

ಧರ್ಮಸ್ಥಳ ವಿರೋಧಿ ಗ್ಯಾಂಗ್​ನ ಲೀಡರ್​ ತಿಮರೋಡಿ ಮತ್ತು AI ವಿಡಿಯೋಗಳಿಂದ ಜನರನ್ನು ಹುಚ್ಚೆಬ್ಬಿಸಿದ ಅವನ ಶಿಷ್ಯನ ಕಥೆ. ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿಯಲು ಯತ್ನಿಸಿದ ಇವರಿಬ್ಬರ ಬಣ್ಣ ಈಗ ಬಯಲಾಗಿದೆ. ಸುಜಾತಾ ಭಟ್​​ಳ ಷಡ್ಯಂತ್ರ ವಿಫಲವಾಗಿದೆ. ಇವರ ಮುಂದಿನ ನಡೆ ಏನು?

ಆತ ಧರ್ಮಸ್ಥಳ ವಿರೋಧಿ ಗ್ಯಾಂಗ್​​ನ ಲೀಡರ್​.. ಧರ್ಮಸ್ಥಳಕ್ಕೇ ಜೆಸಿಬಿ ನುಗ್ಗಿಸುತ್ತೇನೆ ಅಂದವನು.. ಇವತ್ತು ಅವನದ್ದೇ ಹರಕಲು ಬಾಯಿಯಿಂದ ಪೊಲೀಸರ ಅತಿಥಿಯಾಗಿದ್ದಾನೆ.. ಇನ್ನೂ ಮತ್ತೊಬ್ಬ ಅವನ ಶಿಷ್ಯ.. AI ವಿಡಿಯೋಗಳಿಂದಲೇ ಏನೂ ಗೊತ್ತಿಲ್ಲದ ಜನರನ್ನ ಹುಚ್ಚೆಬ್ಬಿಸಿದ್ದ.. ಇವರಿಬ್ಬರೂ ಸೇರಿಕೊಂದು ಧರ್ಮಸ್ಥಳಕ್ಕೆ ಹೇಗೆಲ್ಲಾ ಕಪ್ಪು ಮಸಿ ಬಳೆಯಬಹುದೋ ಹಾಗೆಲ್ಲಾ ಬಳೆದುಬಿಟ್ಟಿದ್ರು.. ಆದ್ರಿವತ್ತು ಅದೇ ಗ್ಯಾಂಗ್​ನ ಲೀಡರ್​​ ಅರೆಸ್ಟ್​​ ಆದ್ರೆ ಮತ್ತೊಬ್ಬ ಎಸ್ಕೆಪ್​ ಆಗಿ ಕೋರ್ಟ್​ ಮೊರೆ ಹೋಗಿದ್ದ.. ಸದ್ಯ ಜಾಮೀನು ಪಡೆದುಕೊಂಡಿದ್ದಾನೆ.. ಅಷ್ಟಕ್ಕೂ ಅವರಿಬ್ಬರ ಮೇಲೆ ಪೊಲೀಸರ ಕಣ್ಣು ಬಿದ್ದಿದ್ದೇಕೆ..? ಈ ಹರಕಲು ಬಾಯಿಯ ತಿಮರೋಡಿ ಇವತ್ತು ಮಾಡಿದ ಹೈಡ್ರಾಮ ಹೇಗಿತ್ತು.? ಇದೆಲ್ಲವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್​​.ಐ.ಆರ್​​

ಒಂದೆಡೆ ಬುರುಡೆ ಗ್ಯಾಂಗ್​ಗೆ ಕಾನೂನು ಕುಣಿಕೆ ಬಿಗಿಯಾಗುತ್ತಿದ್ರೆ, ಮತ್ತೊಂದೆಡೆ ಧರ್ಮಸ್ಥಳದ ಪರ ರಾಜ್ಯವ್ಯಾಪಿ ಬೆಂಬಲ ವ್ಯಕ್ತವಾಗುತ್ತಿದೆ. ಇನ್ನೂ ತಿಮರೋಡಿ ಮತ್ತು ಸಮೀರ್​​ ಕಥೆ ಇದಾದ್ರೆ ಇನ್ನೂ ಮ್ಯಾಜಿಕ್​ ಅಜ್ಜಿ ಸುಜಾತಾ ಭಟ್​​ ಕಥೆ ಇನ್ನೂ ಬಾಕಿ​ ಇದೆ.. ಈ ಬಗ್ಗೆ ಮತ್ತಷ್ಟು ರೋಚಕ ಸಂಗತಿಗಳನ್ನ ನಮ್ಮ ಟೀಂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರತಂದಿದೆ.

ನನ್ನ ಮಗಳ ಅಸ್ತಿಪಂಜರ ಹುಡುಕಿಕೊಡಿ ಅಂತ ಬಂದಿದ್ದ ಸುಜಾತಾ ಭಟ್​​​ ಅಸಲಿಯತ್ತನ್ನ ನಾವೇ ಬಯಲು ಮಾಡಿದ್ದೇವೆ.. ಯಾರದ್ದೋ ಫೋಟೋ ತಂದು ನನ್ನ ಮಗಳು ಅಂದಿದ್ದ ಸುಜಾತಾ ಭಟ್​​ಳ ಪ್ರತಿಯೊಂದು ಷಡ್ಯಂತ್ರ ಕೂಡ ಈಗ ವಿಫಲವಾಗಿದೆ.. ಆದ್ರೆ ಈಗ ಇಲ್ಲದೇ ಇರೋ ಅನನ್ಯ ಭಟ್​​ ಕ್ಯಾರೆಕ್ಟರ್​​ ಹುಟ್ಟಿಕೊಂಡಿದ್ದು ಎಲ್ಲಿ ಮತ್ತು ಹೇಗೆ ಅನ್ನೋ ವಿಷಯ ಕೂಡ ಬಯಲಾಗಿದೆ.. ಐನಾತಿ ಅಜ್ಜಿ ಕಥೆ ಹೇಳಿದ್ರೆ.. ತಿಮರೋಡಿ ಚಿತ್ರಕಥೆ ಬರೆದಿದ್ದ ಇನ್ನೂ AI ಸಮೀರ ಕಥೆಗೆ ಗ್ರಾಫಿಕ್ಸ್​​ ಟಚ್​ ಕೊಟ್ಟಿದ್ದ.. ಅಷ್ಟೇ ಅಲ್ಲ.. ಸಾವಿರಾರು ಹೆಣಗಳನ್ನ ಹೂತಿದ್ದೇನೆ ಅಂತ ಬಂದಿರೋ ಅನಾಮಿಕನ ಬಣ್ಣವೂ ಬಯಲಾಗಿದೆ.

ಬುರುಡೆ ಬಯಲಾಟದಲ್ಲಿ ಪಾತ್ರಧಾರಿಗಳ ಅಸಲಿಯತ್ತು ಈಗ ಹೊರಬರುತ್ತಿದೆ. ಈ ಕಪಟ ನಾಟಕಕ್ಕೆ ತೆರೆ ಬೀಳುವ ಎಲ್ಲ ಲಕ್ಷಣಗಳು ಕಾಣ್ತಿವೆ.. ಟೆಂಪಲ್​ಟೌನ್​ ಮೇಲೆ ಕವಿದಿದ್ದ ಅಪಪ್ರಚಾರ, ಗುಮಾನಿಗಳ ಕಾರ್ಮೋಡ ಸರಿದು ಸತ್ಯದರ್ಶನವಾಗಲಿ.. ಭಕ್ತರ ಆತಂಕ, ದುಗುಡಗಳೆಲ್ಲ ದೂರವಾಗಲಿ ಈ ಎಲ್ಲದರ ಸಂಪೂರ್ಣ ಡಿಟೇಲ್ ವೀಡಿಯೋದಲ್ಲಿದೆ ನೋಡಿ.

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
Read more