'ಈಗ ಉಳುವವನೇ ಭೂ ಒಡೆಯನಾಗಿದ್ದವನು, ಮುಂದೆ ಉಳ್ಳವನೇ ಭೂ ಒಡೆಯನಾಗುತ್ತಾನೆ'

Sep 28, 2020, 3:21 PM IST

ಬೆಂಗಳೂರು (ಸೆ. 28): ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ರೈತರನ್ನು ಜೀವಂತ ಸಮಾಧಿ ಮಾಡುವ ಕಾಯ್ದೆ ಇದಾಗಿದೆ. ಇದಕ್ಕೆ ನಾವು ಅವಕಾಶ ಕೊಡಲಾಗುವುದಿಲ್ಲ. ಮುಂದೆ ನಿಂತು ಹೋರಾಟ ಮಾಡಬೇಕಾಗುತ್ತದೆ. ಸರ್ಕಾರ ಖಾಸಗಿಯವರ ಪರವಾಗಿ ನಿಂತಿದೆ. ಈಗ ಯಾರು ಉಳುವವನೇ ಭೂ ಒಡೆಯನಾಗಿದ್ದನೋ, ಮುಂದೆ ಉಳ್ಳವನೇ  ಭೂ ಒಡೆಯನಾಗುತ್ತಾನೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕ ಬಂದ್: ಈ ಭಾಗಗಳಲ್ಲಿ ಬೆಂಬಲವಿಲ್ಲ, ಜನಜೀವನ ಸಹಜಸ್ಥಿತಿ

ಯಾವಾಗ ದೇಶದ ರೈತರಿಗೆ, ಜನಸಾಮಾನ್ಯರಿಗೆ ತೊಂದರೆಯಾಗುತ್ತದೋ ಆಗ ಅವರ ಜೊತೆ ನಿಲ್ಲೋದು ಕಾಂಗ್ರೆಸ್ ಮಾತ್ರ. ಈ ವಿಧೇಯಕವನ್ನು ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ' ಎಂದರು.