ಒಮ್ಮೊಮ್ಮೆ ಊಟವೂ ಸಿಗೋದು ಕಷ್ಟ, ನಮ್ಮ ಕಷ್ಟ ನಮಗೆ ಗೊತ್ತು ಸಾರ್... ಚಾಲಕನ ಕಣ್ಣೀರು

Apr 6, 2021, 3:43 PM IST

ಬೆಂಗಳೂರು (ಏ. 06): 6 ನೇ ವೇತನ ಆಯೋಗ ಜಾರಿಗೆ ಪಟ್ಟು ಹಿಡಿದು ನಾಳೆ ಸಾರಿಗೆ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಮುಷ್ಕರದ ಬಗ್ಗೆ ಸಾರಿಗೆ ನೌಕರರನ್ನು ಮಾತನಾಡಿಸಿದಾಗ, ಒಬ್ಬೊಬ್ಬರದ್ದು ಒಂದೊಂದು ಕತೆ. 'ನಾವು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದೇವೆ. ನಮ್ಮ ಕಷ್ಟ ನಮಗೆ ಗೊತ್ತು. ಒಮ್ಮೊಮ್ಮೆ ಊಟವೂ ಸಿಗೋದು ಕಷ್ಟ' ವಿಜಯಪುರದಲ್ಲಿ ಬಸ್ ಚಾಲಕ ಕಣ್ಣೀರು ಹಾಕಿದ್ದಾನೆ. ನಮ್ಮ ಪ್ರತಿನಿಧಿ ಚಾಲಕರ ಜೊತೆ ಮಾತನಾಡಿದ್ದಾರೆ. ಚಾಲಕರ ಸಮಸ್ಯೆ ಏನು..?

ನಾಳೆ ಸಾರಿಗೆ ನೌಕರರ ಮುಷ್ಕರ; ಪ್ರಯಾಣಿಕರೇ ಗಮನಿಸಿ, ಪರ್ಯಾಯ ವ್ಯವಸ್ಥೆ ಹೀಗಿದೆ