ಧರ್ಮಸ್ಥಳಕ್ಕೆ ಭೂತನಾದ ಧೂತ ಸಮೀರ? ಸುಜಾತಾ ಭಟ್ ಮುಂದಿಟ್ಟು, ವಾಸಂತಿ ಫೋಟೋಗೆ ಅನನ್ಯಾ ಎಂದು ಚುಕ್ಕಿ ಇಟ್ಟ!

ಧರ್ಮಸ್ಥಳಕ್ಕೆ ಭೂತನಾದ ಧೂತ ಸಮೀರ? ಸುಜಾತಾ ಭಟ್ ಮುಂದಿಟ್ಟು, ವಾಸಂತಿ ಫೋಟೋಗೆ ಅನನ್ಯಾ ಎಂದು ಚುಕ್ಕಿ ಇಟ್ಟ!

Published : Aug 20, 2025, 12:18 PM IST
ಧರ್ಮಸ್ಥಳದಲ್ಲಿ ಕಾಣೆಯಾದಳೆಂದು ಹೇಳಲಾದ 'ಅನನ್ಯಾ'ಳ ಫೋಟೋ, ವಾಸ್ತವದಲ್ಲಿ 2007ರಲ್ಲಿ ಮೃತಪಟ್ಟ ವ್ಯಕ್ತಿಯದ್ದಾಗಿದೆ. ಯೂಟ್ಯೂಬರ್ ಸಮೀರ್ ನೇತೃತ್ವದಲ್ಲಿ ನಡೆದ ಈ ಷಡ್ಯಂತ್ರದಲ್ಲಿ ಸುಜಾತಾ ಭಟ್ ಕೂಡ ಭಾಗಿಯಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ಬೆಂಗಳೂರು (ಆ.20): ಧರ್ಮಸ್ಥಳದಲ್ಲಿ ನನ್ನ ಮಗಳು 'ಅನನ್ಯಾ ಭಟ್' ಕಾಣೆಯಾಗಿದ್ದಾಳೆ ಹುಡುಕಿಕೊಡಿ ಎಂದು ಕಟ್ಟುಕಥೆ ಹೇಳಿದ ಸುಜಾತಾ ಭಟ್ ಅವರ ಸುಳ್ಳುಗಳ ಸರಣಿ ಬಯಲಾಗಿದೆ. ಧೂತ ಯೂಟ್ಯೂಬರ್‌ ಸಮೀರ್‌ನೊಂದಿಗೆ ಸೇರಿಕೊಂಡು, 'ನಿಗೂಢ ಸಾವು' ಎಂದು ಹೇಳಿ ಒಂದು ನಕಲಿ ಫೋಟೋವನ್ನು ಬಿಡುಗಡೆ ಮಾಡಿರುವುದು ಈ ಪ್ರಕರಣಕ್ಕೆ ಮತ್ತಷ್ಟು ಗಂಭೀರ ತಿರುವು ನೀಡಿದೆ.

ಸುಜಾತಾ ಭಟ್ ಬಿಡುಗಡೆ ಮಾಡಿದ 'ಅನನ್ಯಾ' ಎಂಬ ಫೋಟೋ, ರಂಗಪ್ರಸಾದ್ ಅವರ ಸೊಸೆ ವಾಸಂತಿ ಅವರ ಫೋಟೋ ಎಂದು ಬಯಲಾಗಿದೆ. ವಾಸಂತಿ ಅವರು 2007ರಲ್ಲಿಯೇ ನಿಧನರಾಗಿದ್ದು, ಸಂಬಂಧಿಕರು ಇಲ್ಲದಿರುವ ಈ ಫೋಟೋವನ್ನು ಬಳಸಿಕೊಳ್ಳಲು ಯೂಟ್ಯೂಬರ್ ಸಮೀರ್ ತಂತ್ರ ರೂಪಿಸಿದ್ದ ಎನ್ನಲಾಗಿದೆ.

ಷಡ್ಯಂತ್ರದ ರೂವಾರಿ ಯೂಟ್ಯೂಬರ್ ಸಮೀರ್?
'ಅನನ್ಯಾ' ಎಂಬ ಯುವತಿಯೇ ಇಲ್ಲ ಎಂದು ಸುವರ್ಣ ನ್ಯೂಸ್ ವರದಿ ಮಾಡಿದ ನಂತರ, ಧರ್ಮಸ್ಥಳ ವಿರೋಧಿ ಗ್ಯಾಂಗ್ ವಿಚಲಿತಗೊಂಡಿತ್ತು. ಈ ಹಂತದಲ್ಲಿ, ಫೋಟೋಗಾಗಿ ಇಂಟರ್‌ನೆಟ್‌ನಲ್ಲಿ ಹುಡುಕಾಟ ನಡೆಸಿದ ಗ್ಯಾಂಗ್, ಸುಲಭವಾಗಿ ಸಿಕ್ಕಿಬೀಳುವ ಭಯದಿಂದ ಹಳೆಯ, ಮೃತಪಟ್ಟ ಹುಡುಗಿಯ ಫೋಟೋ ಬಳಸುವ ನಿರ್ಧಾರಕ್ಕೆ ಬಂದಿತು. ಆಗ, ಸುಜಾತಾ ಭಟ್ ಅವರು ರಂಗಪ್ರಸಾದ್ ಅವರ ಸೊಸೆ ವಾಸಂತಿ ಅವರ ಫೋಟೋ ನೀಡಿದ್ದಾರೆ. ಈ ಫೋಟೋ ಸತ್ತ ಮಹಿಳೆಯದಾಗಿರುವುದರಿಂದ ಯಾರೂ ಪತ್ತೆಹಚ್ಚಲು ಸಾಧ್ಯವಿಲ್ಲ ಎಂಬುದು ಈ ಗ್ಯಾಂಗ್‌ನ ಲೆಕ್ಕಾಚಾರವಾಗಿತ್ತು.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more