ಧರ್ಮಸ್ಥಳಕ್ಕೆ ಭೂತನಾದ ಧೂತ ಸಮೀರ? ಸುಜಾತಾ ಭಟ್ ಮುಂದಿಟ್ಟು, ವಾಸಂತಿ ಫೋಟೋಗೆ ಅನನ್ಯಾ ಎಂದು ಚುಕ್ಕಿ ಇಟ್ಟ!

ಧರ್ಮಸ್ಥಳಕ್ಕೆ ಭೂತನಾದ ಧೂತ ಸಮೀರ? ಸುಜಾತಾ ಭಟ್ ಮುಂದಿಟ್ಟು, ವಾಸಂತಿ ಫೋಟೋಗೆ ಅನನ್ಯಾ ಎಂದು ಚುಕ್ಕಿ ಇಟ್ಟ!

Published : Aug 20, 2025, 12:18 PM IST
ಧರ್ಮಸ್ಥಳದಲ್ಲಿ ಕಾಣೆಯಾದಳೆಂದು ಹೇಳಲಾದ 'ಅನನ್ಯಾ'ಳ ಫೋಟೋ, ವಾಸ್ತವದಲ್ಲಿ 2007ರಲ್ಲಿ ಮೃತಪಟ್ಟ ವ್ಯಕ್ತಿಯದ್ದಾಗಿದೆ. ಯೂಟ್ಯೂಬರ್ ಸಮೀರ್ ನೇತೃತ್ವದಲ್ಲಿ ನಡೆದ ಈ ಷಡ್ಯಂತ್ರದಲ್ಲಿ ಸುಜಾತಾ ಭಟ್ ಕೂಡ ಭಾಗಿಯಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ಬೆಂಗಳೂರು (ಆ.20): ಧರ್ಮಸ್ಥಳದಲ್ಲಿ ನನ್ನ ಮಗಳು 'ಅನನ್ಯಾ ಭಟ್' ಕಾಣೆಯಾಗಿದ್ದಾಳೆ ಹುಡುಕಿಕೊಡಿ ಎಂದು ಕಟ್ಟುಕಥೆ ಹೇಳಿದ ಸುಜಾತಾ ಭಟ್ ಅವರ ಸುಳ್ಳುಗಳ ಸರಣಿ ಬಯಲಾಗಿದೆ. ಧೂತ ಯೂಟ್ಯೂಬರ್‌ ಸಮೀರ್‌ನೊಂದಿಗೆ ಸೇರಿಕೊಂಡು, 'ನಿಗೂಢ ಸಾವು' ಎಂದು ಹೇಳಿ ಒಂದು ನಕಲಿ ಫೋಟೋವನ್ನು ಬಿಡುಗಡೆ ಮಾಡಿರುವುದು ಈ ಪ್ರಕರಣಕ್ಕೆ ಮತ್ತಷ್ಟು ಗಂಭೀರ ತಿರುವು ನೀಡಿದೆ.

ಸುಜಾತಾ ಭಟ್ ಬಿಡುಗಡೆ ಮಾಡಿದ 'ಅನನ್ಯಾ' ಎಂಬ ಫೋಟೋ, ರಂಗಪ್ರಸಾದ್ ಅವರ ಸೊಸೆ ವಾಸಂತಿ ಅವರ ಫೋಟೋ ಎಂದು ಬಯಲಾಗಿದೆ. ವಾಸಂತಿ ಅವರು 2007ರಲ್ಲಿಯೇ ನಿಧನರಾಗಿದ್ದು, ಸಂಬಂಧಿಕರು ಇಲ್ಲದಿರುವ ಈ ಫೋಟೋವನ್ನು ಬಳಸಿಕೊಳ್ಳಲು ಯೂಟ್ಯೂಬರ್ ಸಮೀರ್ ತಂತ್ರ ರೂಪಿಸಿದ್ದ ಎನ್ನಲಾಗಿದೆ.

ಷಡ್ಯಂತ್ರದ ರೂವಾರಿ ಯೂಟ್ಯೂಬರ್ ಸಮೀರ್?
'ಅನನ್ಯಾ' ಎಂಬ ಯುವತಿಯೇ ಇಲ್ಲ ಎಂದು ಸುವರ್ಣ ನ್ಯೂಸ್ ವರದಿ ಮಾಡಿದ ನಂತರ, ಧರ್ಮಸ್ಥಳ ವಿರೋಧಿ ಗ್ಯಾಂಗ್ ವಿಚಲಿತಗೊಂಡಿತ್ತು. ಈ ಹಂತದಲ್ಲಿ, ಫೋಟೋಗಾಗಿ ಇಂಟರ್‌ನೆಟ್‌ನಲ್ಲಿ ಹುಡುಕಾಟ ನಡೆಸಿದ ಗ್ಯಾಂಗ್, ಸುಲಭವಾಗಿ ಸಿಕ್ಕಿಬೀಳುವ ಭಯದಿಂದ ಹಳೆಯ, ಮೃತಪಟ್ಟ ಹುಡುಗಿಯ ಫೋಟೋ ಬಳಸುವ ನಿರ್ಧಾರಕ್ಕೆ ಬಂದಿತು. ಆಗ, ಸುಜಾತಾ ಭಟ್ ಅವರು ರಂಗಪ್ರಸಾದ್ ಅವರ ಸೊಸೆ ವಾಸಂತಿ ಅವರ ಫೋಟೋ ನೀಡಿದ್ದಾರೆ. ಈ ಫೋಟೋ ಸತ್ತ ಮಹಿಳೆಯದಾಗಿರುವುದರಿಂದ ಯಾರೂ ಪತ್ತೆಹಚ್ಚಲು ಸಾಧ್ಯವಿಲ್ಲ ಎಂಬುದು ಈ ಗ್ಯಾಂಗ್‌ನ ಲೆಕ್ಕಾಚಾರವಾಗಿತ್ತು.

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
Read more