ಆಯುಧಗಳಿಗೂ ಪೂಜೆ ಮಾಡೋ ಪದ್ಧತಿ ಬಂದಿದ್ದು ಹೇಗೆ?: ಶತಮಾನದ ಹಿಂದೆ ಹೇಗಿತ್ತು ದಸರಾ ವೈಭವ?

ಆಯುಧಗಳಿಗೂ ಪೂಜೆ ಮಾಡೋ ಪದ್ಧತಿ ಬಂದಿದ್ದು ಹೇಗೆ?: ಶತಮಾನದ ಹಿಂದೆ ಹೇಗಿತ್ತು ದಸರಾ ವೈಭವ?

Published : Oct 02, 2025, 03:46 PM IST

ಜಗತ್ಪ್ರಸಿದ್ಧ ದಸರಾ ಹಬ್ಬದಲ್ಲಿ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ದೇವತೆಗಳ ಆರಾಧನೆಯ ಸಮಯದಲ್ಲಿ ಆಯುಧಗಳನ್ನು ಏಕೆ ಪೂಜಿಸಲಾಗುತ್ತದೆ ಮತ್ತು ಆ ಆಯುಧಗಳೇ ದೈವಸ್ವರೂಪ ಎನ್ನುವುದರ ಹಿಂದಿರುವ ದೈವಾಯುಧ ರಹಸ್ಯದ ಬಗ್ಗೆ ಇಲ್ಲಿದೆ ಡಿಟೇಲ್‌.

ನಮಸ್ಕಾರ ವೀಕ್ಷಕರೇ.. ಕರುನಾಡಿನ ಹೆಮ್ಮೆಯ ಸಂಭ್ರಮದ ಆಚರಣೆ ದಸರಾ.. ಈ ಜಗತ್ಪ್ರಸಿದ್ಧ ದಸರಾದ ಹಿಂದೆ ನಮಗೆ ಗೊತ್ತಿಲ್ಲದ ಅದೆಷ್ಟೋ ವಿಚಾರಗಳು ಅಡಕವಾಗಿವೆ.. ಅವೆಲ್ಲವುಗಳನ್ನು ಒಂದಾದಾಗಿ ಹುಡುಕುತ್ತಾ ಸಾಗೋಣ.. ಅದರಲ್ಲೂ ಮುಖ್ಯವಾಗಿ, ನವರಾತ್ರಿಯ ಹೊತ್ತಲ್ಲಿ ಭವ್ಯವಾಗಿ ನಡೆಯೋ ಆಯುಧ ಪೂಜೆ ಹಿಂದಿರೋ ಮಹತ್ವ ಎಂಥದ್ದು? ಅದನ್ನೂ ನೋಡೋಣ.. ಆ ದೈವಾಯುಧ ರಹಸ್ಯ ಏನು ಅಂತ ತಿಳಿಯೋಣ..

ಆಶ್ವಿಜ ಶುದ್ಧ ಪಾಡ್ಯದಿಂದ ಆರಂಭವಾಗೋ ಈ ನಾಡ ಹಬ್ಬ ದಸರಾ, ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತೆ. ಈ ಉತ್ಸವವನ್ನು ಕಣ್ತುಂಬಿಕೊಳ್ಳೋಕೆ ದೇಶ ವಿದೇಶಗಳಿಂದಲೂ ಜನ ಆಗಮಿಸ್ತಾರೆ. ಈ ಹಬ್ಬ ತನ್ನ ಆಚರಣಾ ವಿಧಾನದಿಂದಲೇ ಬೇರೆ ಉತ್ಸವಗಳಿಗಿಂತ ವಿಭಿನ್ನವಾಗಿ ಕಾಣುತ್ತೆ. ಅದರಲ್ಲೂ ವಿಶಿಷ್ಟ ಅನ್ನಿಸಿಕೊಳ್ಳೋ ಆಚರಣೆ ಅಂದ್ರೆ, ಆಯುಧಗಳಿಗಂತಲೇ ನಡೆಯೋ, ವಿಶೇಷ ಪೂಜೆ..  ಅಷ್ಟಕ್ಕೂ ನಾಡದೇವಿಯ ಆರಾಧನೆ ಹೊತ್ತಲ್ಲಿ, ಆಯುಧಗಳ ಆರಾಧನೆ ಯಾಕೆ ನಡೆಯುತ್ತೆ? ಏನಿದರ ಸ್ಪೆಷಾಲಿಟಿ?.

ಆ ರೋಚಕ ಕತೆ ಏನು ಅಂತ ಅರ್ಥ ಆಗ್ಬೇಕು ಅಂದ್ರೆ, ನಾವು ಕನಿಷ್ಟ 5 ಶತಮಾನಗಳ ಹಿಂದೆ ಏನಾಗಿತ್ತು ಅಂತ ತಿಳ್ಕೋಬೇಕು. ಆಯುಧ ಪೂಜೆ ಅಂದ್ರೆ, ಅದು ನಮ್ಮ ಹತ್ರ ಇರೋ ಶಸ್ತ್ರಾಸ್ತ್ರಗಳ ಪ್ರದರ್ಶನ ಅಲ್ಲ.. ಆ ಪ್ರದರ್ಶನ ಹಿಂದೆ ಒಂದು ಅದ್ಭುತ ರಹಸ್ಯವೇ ಅಡಗಿದೆ..

ನಾವೇ ಬೇರೆ ನಮ್ಮ ಆಯುಧಗಳೇ ಬೇರೆ ಅನ್ನೋ ಕಲ್ಪನೆಯೇ ಇರ್ಲಿಲ್ಲ.. ಚಕ್ರ ಅಂದ್ರೆ ವಿಷ್ಣು, ತ್ರಿಶೂಲ ಅಂದ್ರೆ ಶಿವ ಅನ್ನೋ ಹಾಗೇ, ಆ ಆಯುಧಗಳೇ ದೈವಗಳ ನಿಜ ಸ್ವರೂಪವಾಗಿದಾವೆ.. ಅಷ್ಟಕ್ಕೂ ದೇವತೆಗಳಿಗೂ ಆಯುಧ ಯಾಕೆ ಬೇಕು? ಇದೆಲ್ಲದರ ಡಿಟೇಲ್ ಈ ವೀಡಿಯೋದಲ್ಲಿದೆ ವೀಕ್ಷಿಸಿ..

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
Read more