'ನೆರೆ ಬಂದಿದೆ, ಜಿಲ್ಲೆಯಲ್ಲಿ ಇರೋದ್ ಬಿಟ್ಟು ಕಾರಜೋಳರು ಮೆರವಣಿಗೆ ಮಾಡ್ಕಂಡು ಕುಂತವ್ರೇ'

Oct 17, 2020, 3:35 PM IST

ಬೆಂಗಳೂರು (ಅ. 17): ಡಿಸಿಎಂ, ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಗೋವಿಂದ ಕಾರಜೋಳರು ತಮ್ಮ ಜಿಲ್ಲೆಗೆ ಭೇಟಿ ನೀಡಿಲ್ಲ. ಪ್ರವಾಹದಲ್ಲಿ ಸಿಲುಕಿರುವ ಜನರ ಸಂಕಷ್ಟ ಕೇಳಿಲ್ಲ. ಜನರು ಆಕ್ರೋಶ ವ್ಯಕ್ತಪಡಿಸಿದೆ ಆರೋಗ್ಯ ಸಮಸ್ಯೆಯನ್ನು ಮುಂದಿಡುತ್ತಾರೆ ಎಂದು ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. 

ನೆರೆ ಕಾರ್ಯಕ್ಕೆ ಬನ್ನಿ ಅಂದ್ರೆ ಕೊರೊನಾ ನೆಪ, ಬೈಎಲೆಕ್ಷನ್‌ಗೆ ಹಾಜರ್ ಉಸ್ತುವಾರಿ ಸಚಿವರು!

'ನೆರೆ ಬಂದಿದೆ. ಉಸ್ತುವಾರಿ ಸಚಿವರು ಸ್ಥಳದಲ್ಲಿಯೇ ಇರಬೇಕಿತ್ತು. ಅದು ಬಿಟ್ಟು ಇಲ್ಲಿ ನೋಡಿದರೆ ಕಾರಜೋಳರು ಮೆರವಣಿಗೆ ಮಾಡಿಕೊಂಡು ಓಡಾಡ್ತ ಇದ್ದಾರೆ' ಎಂದು ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.