ಭದ್ರಾವತಿಯಲ್ಲಿ ರೌಡಿಗಳ ಮಚ್ಚಿನ ಆರ್ಭಟ: ದೇವಾಲಯದಲ್ಲಿ ಮಚ್ಚಿಗೆ ಪೂಜೆ ಮಾಡಿಸಿ ಕೊಲೆಗೆ ಸ್ಕೆಚ್!

ಭದ್ರಾವತಿಯಲ್ಲಿ ರೌಡಿಗಳ ಮಚ್ಚಿನ ಆರ್ಭಟ: ದೇವಾಲಯದಲ್ಲಿ ಮಚ್ಚಿಗೆ ಪೂಜೆ ಮಾಡಿಸಿ ಕೊಲೆಗೆ ಸ್ಕೆಚ್!

Published : May 05, 2025, 10:21 PM IST

ಭದ್ರಾವತಿಯಲ್ಲಿ ರೌಡಿಗಳ ಗ್ಯಾಂಗ್ ವಾರ್ ತೀವ್ರಗೊಂಡಿದ್ದು, ಚೌಡೇಶ್ವರಿ ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಸಲ್ಲಿಸಿರುವುದು ಬೆಚ್ಚಿ ಬೀಳಿಸಿದೆ. ಗಾಂಧಿ ಮತ್ತು ಮುದ್ದೆ ನಡುವಿನ ದ್ವೇಷ ಹೆಚ್ಚಿದ್ದು, ಪ್ರತಿಕಾರದ ಸ್ಕೆಚ್‌ಗಳು ನಡೆಯುತ್ತಿವೆ.

ಭದ್ರಾವತಿ (ಮೇ 5): ಉಕ್ಕಿನ ನಗರಿ ಎಂದೇ ಹೆಸರಾಗಿರುವ ಭದ್ರಾವತಿಯಲ್ಲೀಗ ರೌಡಿಗಳ ಗ್ಯಾಂಗ್ ವಾರ್ ಖುಲ್ಲಾ ಪ್ರಕಾರಕ್ಕೆ ತಿರುಗಿದೆ. ಕಾನೂನು ಮತ್ತು ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ, ನಡು ರಸ್ತೆಯಲ್ಲಿ ಮಚ್ಚು ಬೀಸುವ ದೃಶ್ಯಗಳು ಅಲ್ಲಿನ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿವೆ.

ಇತ್ತೀಚಿಗೆ ನಡೆದ ಬೆಳವಣಿಗೆಯು ಎಲ್ಲರಿಗೂ ಬೆಚ್ಚಿ ಬೀಳಿಸುವಂತಹದ್ದು. ಭದ್ರಾವತಿಯ ಚೌಡೇಶ್ವರಿ ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ನೆರವೇರಿದ ಘಟನೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಈ ಘಟನೆ 'ಮರ್ಡರ್ ಸ್ಕೆಚ್' ಗೆ ಪೂಜೆಯಂತೆ ಕಾಣುತ್ತಿದೆ.

ಗಾಂಧಿ ಆಲಿಯಾಸ್ ಪ್ರಮೋದ್ ವಿರುದ್ದ ಮುದ್ದೆ ಆಲಿಯಾಸ್ ವಿಶ್ವ: ಗ್ಯಾಂಗ್ ವಾರ್ ಆರಂಭ..?
ಪ್ರಚಲಿತ ಗ್ಯಾಂಗ್ ವರದಿಗಳ ಪ್ರಕಾರ, ಗಾಂಧಿ ಮತ್ತು ಮುದ್ದೆ ನಡುವಿನ ದ್ವೇಷ ತೀವ್ರವಾಗಿದ್ದು, ಪ್ರತೀ ಘಟನೆಯ ಹಿಂದೆ ಪ್ರತಿಕಾರದ ಚಿಹ್ನೆಗಳಿವೆ. ಕೆಲವು ದಿನಗಳ ಹಿಂದೆ ಭದ್ರಾವತಿಯ ಕಂಚಿಬಾಗಿಲು ಬಳಿ ನಡು ರಸ್ತೆಯಲ್ಲೇ ಮಚ್ಚು ಹಿಡಿದ ಗ್ಯಾಂಗ್‌ನಿಂದ ಮುದ್ದೆ ಮೇಲೆ ದಾಳಿ ನಡೆದಿದೆ. ಅವರು ಕೂದಲೊಂದು ಬಿಚ್ಚಿ ಪ್ರಾಣ ಉಳಿಸಿಕೊಂಡು ಓಡಿದ್ದಾರೆ ಎಂಬ ವರದಿಯಿದೆ. ಇದೀಗ ತನ್ನ ಮೇಲಿನ ದಾಳಿಗೆ ಪ್ರತಿಕಾರ ತೀರಿಸಲು ಮುದ್ದೆ ಸ್ಕೆಚ್ ಹಾಕಿರುವ ಶಂಕೆ ವ್ಯಕ್ತವಾಗಿದೆ. ಅದಕ್ಕೆ ಸಾಕ್ಷಿಯಾಗಿ ಚೌಡೇಶ್ವರಿ ದೇವಾಲಯದಲ್ಲಿ ಮಚ್ಚಿಗೆ ಪೂಜೆ ನಡೆಯುವ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದಿದೆ.

ಪೊಲೀಸರು ಎಚ್ಚರವಾಗದಿದ್ದರೆ ಮಾರಕ ಪರಿಣಾಮ :ಭದ್ರಾವತಿಯಲ್ಲಿನ ಸಾರ್ವಜನಿಕರು ಗಂಭೀರ ಆತಂಕದಲ್ಲಿದ್ದಾರೆ. ದಿನದ ಬೆಳಗ್ಗೆ, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ಮಾರಕ ಸ್ಕೆಚ್ ಗಳ ನಿರ್ವಹಣೆಯಲ್ಲಿ ಪೊಲೀಸ್ ಇಲಾಖೆ ಮೌನ ವಹಿಸುತ್ತಿದ್ದರೆ, ಅದು ಮುಂದಿನ ಹಂತದಲ್ಲಿ ದಾಳಿಗಳಾಗಬಹುದು ಎಂಬ ಭೀತಿ ವ್ಯಕ್ತವಾಗಿದೆ.  ಸ್ಥಳೀಯ ರಾಜಕಾರಣಿಗಳು ಈ ಪ್ರಕರಣಗಳಲ್ಲಿ ನಿಷ್ಕ್ರಿಯರಾಗಿದ್ದರೆ ಅಥವಾ ರೌಡಿಗಳಿಗೆ ನೇರ ಅಥವಾ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂಬ ಅನುಮಾನ ಮೂಡಿದೆ. ಇದರಿಂದ ಇಡೀ ನಗರದಲ್ಲಿಯೇ ಭದ್ರತೆಯ ಬಿಕ್ಕಟ್ಟು ಉಂಟಾಗುವುದು ಖಚಿತ.

ಸಿಎಂ ಮತ್ತು ಗೃಹ ಸಚಿವರ ಗಮನಹರಿಸಿ: 

ಈ ಗಂಭೀರ ಪರಿಸ್ಥಿತಿಯತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಕ್ಷಣ ಗಮನ ಹರಿಸಬೇಕು. ಭದ್ರಾವತಿಯಂತಹ ಪ್ರಮುಖ ನಗರದಲ್ಲಿ ಮಚ್ಚಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಹೊಂಚು ಹಾಕಿ ಪ್ರತಿಕಾರದ ಆಟ ನಡೆಯುವುದನ್ನು ತಡೆಗಟ್ಟಬೇಕಿದೆ.

24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
Read more