ಭದ್ರಾವತಿಯಲ್ಲಿ ರೌಡಿಗಳ ಮಚ್ಚಿನ ಆರ್ಭಟ: ದೇವಾಲಯದಲ್ಲಿ ಮಚ್ಚಿಗೆ ಪೂಜೆ ಮಾಡಿಸಿ ಕೊಲೆಗೆ ಸ್ಕೆಚ್!

ಭದ್ರಾವತಿಯಲ್ಲಿ ರೌಡಿಗಳ ಮಚ್ಚಿನ ಆರ್ಭಟ: ದೇವಾಲಯದಲ್ಲಿ ಮಚ್ಚಿಗೆ ಪೂಜೆ ಮಾಡಿಸಿ ಕೊಲೆಗೆ ಸ್ಕೆಚ್!

Published : May 05, 2025, 10:21 PM IST

ಭದ್ರಾವತಿಯಲ್ಲಿ ರೌಡಿಗಳ ಗ್ಯಾಂಗ್ ವಾರ್ ತೀವ್ರಗೊಂಡಿದ್ದು, ಚೌಡೇಶ್ವರಿ ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಸಲ್ಲಿಸಿರುವುದು ಬೆಚ್ಚಿ ಬೀಳಿಸಿದೆ. ಗಾಂಧಿ ಮತ್ತು ಮುದ್ದೆ ನಡುವಿನ ದ್ವೇಷ ಹೆಚ್ಚಿದ್ದು, ಪ್ರತಿಕಾರದ ಸ್ಕೆಚ್‌ಗಳು ನಡೆಯುತ್ತಿವೆ.

ಭದ್ರಾವತಿ (ಮೇ 5): ಉಕ್ಕಿನ ನಗರಿ ಎಂದೇ ಹೆಸರಾಗಿರುವ ಭದ್ರಾವತಿಯಲ್ಲೀಗ ರೌಡಿಗಳ ಗ್ಯಾಂಗ್ ವಾರ್ ಖುಲ್ಲಾ ಪ್ರಕಾರಕ್ಕೆ ತಿರುಗಿದೆ. ಕಾನೂನು ಮತ್ತು ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ, ನಡು ರಸ್ತೆಯಲ್ಲಿ ಮಚ್ಚು ಬೀಸುವ ದೃಶ್ಯಗಳು ಅಲ್ಲಿನ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿವೆ.

ಇತ್ತೀಚಿಗೆ ನಡೆದ ಬೆಳವಣಿಗೆಯು ಎಲ್ಲರಿಗೂ ಬೆಚ್ಚಿ ಬೀಳಿಸುವಂತಹದ್ದು. ಭದ್ರಾವತಿಯ ಚೌಡೇಶ್ವರಿ ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ನೆರವೇರಿದ ಘಟನೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಈ ಘಟನೆ 'ಮರ್ಡರ್ ಸ್ಕೆಚ್' ಗೆ ಪೂಜೆಯಂತೆ ಕಾಣುತ್ತಿದೆ.

ಗಾಂಧಿ ಆಲಿಯಾಸ್ ಪ್ರಮೋದ್ ವಿರುದ್ದ ಮುದ್ದೆ ಆಲಿಯಾಸ್ ವಿಶ್ವ: ಗ್ಯಾಂಗ್ ವಾರ್ ಆರಂಭ..?
ಪ್ರಚಲಿತ ಗ್ಯಾಂಗ್ ವರದಿಗಳ ಪ್ರಕಾರ, ಗಾಂಧಿ ಮತ್ತು ಮುದ್ದೆ ನಡುವಿನ ದ್ವೇಷ ತೀವ್ರವಾಗಿದ್ದು, ಪ್ರತೀ ಘಟನೆಯ ಹಿಂದೆ ಪ್ರತಿಕಾರದ ಚಿಹ್ನೆಗಳಿವೆ. ಕೆಲವು ದಿನಗಳ ಹಿಂದೆ ಭದ್ರಾವತಿಯ ಕಂಚಿಬಾಗಿಲು ಬಳಿ ನಡು ರಸ್ತೆಯಲ್ಲೇ ಮಚ್ಚು ಹಿಡಿದ ಗ್ಯಾಂಗ್‌ನಿಂದ ಮುದ್ದೆ ಮೇಲೆ ದಾಳಿ ನಡೆದಿದೆ. ಅವರು ಕೂದಲೊಂದು ಬಿಚ್ಚಿ ಪ್ರಾಣ ಉಳಿಸಿಕೊಂಡು ಓಡಿದ್ದಾರೆ ಎಂಬ ವರದಿಯಿದೆ. ಇದೀಗ ತನ್ನ ಮೇಲಿನ ದಾಳಿಗೆ ಪ್ರತಿಕಾರ ತೀರಿಸಲು ಮುದ್ದೆ ಸ್ಕೆಚ್ ಹಾಕಿರುವ ಶಂಕೆ ವ್ಯಕ್ತವಾಗಿದೆ. ಅದಕ್ಕೆ ಸಾಕ್ಷಿಯಾಗಿ ಚೌಡೇಶ್ವರಿ ದೇವಾಲಯದಲ್ಲಿ ಮಚ್ಚಿಗೆ ಪೂಜೆ ನಡೆಯುವ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದಿದೆ.

ಪೊಲೀಸರು ಎಚ್ಚರವಾಗದಿದ್ದರೆ ಮಾರಕ ಪರಿಣಾಮ :ಭದ್ರಾವತಿಯಲ್ಲಿನ ಸಾರ್ವಜನಿಕರು ಗಂಭೀರ ಆತಂಕದಲ್ಲಿದ್ದಾರೆ. ದಿನದ ಬೆಳಗ್ಗೆ, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ಮಾರಕ ಸ್ಕೆಚ್ ಗಳ ನಿರ್ವಹಣೆಯಲ್ಲಿ ಪೊಲೀಸ್ ಇಲಾಖೆ ಮೌನ ವಹಿಸುತ್ತಿದ್ದರೆ, ಅದು ಮುಂದಿನ ಹಂತದಲ್ಲಿ ದಾಳಿಗಳಾಗಬಹುದು ಎಂಬ ಭೀತಿ ವ್ಯಕ್ತವಾಗಿದೆ.  ಸ್ಥಳೀಯ ರಾಜಕಾರಣಿಗಳು ಈ ಪ್ರಕರಣಗಳಲ್ಲಿ ನಿಷ್ಕ್ರಿಯರಾಗಿದ್ದರೆ ಅಥವಾ ರೌಡಿಗಳಿಗೆ ನೇರ ಅಥವಾ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂಬ ಅನುಮಾನ ಮೂಡಿದೆ. ಇದರಿಂದ ಇಡೀ ನಗರದಲ್ಲಿಯೇ ಭದ್ರತೆಯ ಬಿಕ್ಕಟ್ಟು ಉಂಟಾಗುವುದು ಖಚಿತ.

ಸಿಎಂ ಮತ್ತು ಗೃಹ ಸಚಿವರ ಗಮನಹರಿಸಿ: 

ಈ ಗಂಭೀರ ಪರಿಸ್ಥಿತಿಯತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಕ್ಷಣ ಗಮನ ಹರಿಸಬೇಕು. ಭದ್ರಾವತಿಯಂತಹ ಪ್ರಮುಖ ನಗರದಲ್ಲಿ ಮಚ್ಚಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಹೊಂಚು ಹಾಕಿ ಪ್ರತಿಕಾರದ ಆಟ ನಡೆಯುವುದನ್ನು ತಡೆಗಟ್ಟಬೇಕಿದೆ.

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
Read more