ರಾಮ ಮಂದಿರಿಂದ ಹೊಟ್ಟೆ ತುಂಬಲ್ಲ, ರಾಜಣ್ಣ ಬಳಿಕ ಸಚಿವ ಶರಣಬಸಪ್ಪ ವಿವಾದ!

Jan 17, 2024, 11:32 PM IST

ರಾಮ ಮಂದಿರದಿಂದ ಯಾರ ಹೊಟ್ಟೆ ತುಂಬಲ್ಲ, ರಾಮ ಮಂದಿರದಿಂದ ಯಾರಿಗೂ ಏನೂ ಆಗಲ್ಲ ಎಂದು ಸಚಿವ ಶರಣಬಸಪ್ಪ ದರ್ಶನನಾಪುರ ವಿವಾದಿತ ಹೇಳಿಕೆ ನೀಡಿದ್ದಾರೆ. ಹಲವರು ಸುದೀರ್ಘ ಆಡಳಿತ ಮಾಡಿದ ಕಾಂಗ್ರೆಸ್ ಎನು ಮಾಡಿದೆ ಎಂದು ಕೇಳುತ್ತಾರೆ. ಕಾಂಗ್ರೆಸ್  ಬಡವರಿಗೆ ಬೇಕಾದ ಸೌಲಭ್ಯ ಕಲ್ಪಿಸಿದೆ. ಆಸ್ಪತ್ರೆ, ಶಾಲೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿದೆ ಎಂದು ದರ್ಶನಾಪುರ್ ಹೇಳಿದ್ದಾರೆ. ಆದರೆ ದರ್ಶನಾಪುರ್ ಹೇಳಿಕೆಗೆ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ರಾಮ ಮಂದಿರ ನಿರ್ಮಾಣವಾಗಿರುವುದು ಭಕ್ತರ ದೇಣಿಗೆಯಲ್ಲಿ, ಸರ್ಕಾರದ ಹಣದಲಲ್ಲಿ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.