ಬಾರದ ಲೋಕಕ್ಕೆ ಬೆಳಗೆರೆ; ದುಃಖದಲ್ಲಿ ಪ್ರಾರ್ಥನಾ ಶಾಲಾ ಶಿಕ್ಷಕರು

Nov 13, 2020, 1:39 PM IST

ಬೆಂಗಳೂರು (ನ. 13): ಖ್ಯಾತ ಪತ್ರಕರ್ತ, ಬರಹಗಾರ, ಲೇಖಕ ರವಿ ಬೆಳಗೆರೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರ ಕನಸಿನ ಕೂಸು ಪ್ರಾರ್ಥನಾ ಶಾಲೆ. ಈ ಶಾಲೆಯಲ್ಲಿ ಸುಮಾರು 8 ಸಾವಿರ ಮಕ್ಕಳು ಓದುತ್ತಿದ್ದಾರೆ. ಅಲ್ಲಿನ ಮಕ್ಕಳು, ಶಿಕ್ಷಕರು ದುಃಖದಲ್ಲಿದ್ದಾರೆ. 

'ಯಾವಾಗಲೂ ಮಗಳೇ ಎಂದು ಕರೆಯುತ್ತಿದ್ದರು, ಅವರಿಲ್ಲ ಅನ್ನೋದನ್ನ ಅರಗಿಸಿಕೊಳ್ಳಲಾಗುತ್ತಿಲ್ಲ'

ಬೆಳಗೆರೆ ಅವರಿಗೆ ಮಕ್ಕಳೆಂದರೆ ಅಪಾರ ಪ್ರೀತಿ. ಮಕ್ಕಳು ಶಿಕ್ಷಣ ಪಡೆಯಬೇಕು, ಓದಬೇಕು, ಮುಂದೆ ಬರಬೇಕು ಅನ್ನೋದು ಇವರ ಕನಸಾಗಿತ್ತು' ಎಂದು ಅಲ್ಲಿನ ಶಿಕ್ಷಕ ವರ್ಗ ಕಣ್ಣೀರು ಹಾಕಿದ್ದಾರೆ.