Chitradurga Fort: ಉಕ್ಕಿನ ಕೋಟೆಯಲ್ಲಿ ಹಂದಿಗಳ ಹಾವಳಿ: ದ್ವಾರಬಾಗಿಲನ್ನೇ ಮುಚ್ಚಿರೊ ಕಿಡಿಗೇಡಿಗಳು!

Chitradurga Fort: ಉಕ್ಕಿನ ಕೋಟೆಯಲ್ಲಿ ಹಂದಿಗಳ ಹಾವಳಿ: ದ್ವಾರಬಾಗಿಲನ್ನೇ ಮುಚ್ಚಿರೊ ಕಿಡಿಗೇಡಿಗಳು!

Published : Dec 24, 2021, 04:11 PM IST

*ಐತಿಹಾಸಿಕ ಹಿನ್ನೆಲೆಯ ಪ್ರವಾಸಿತಾಣದ ಆವರಣದಲ್ಲಿ ಹಂದಿ ಸಾಕಣೆ
*ಕೋಟೆಯ ಹಿಂಭಾಗದಲ್ಲಿರುವ ಬಾಗಿಲನ್ನೇ ಮುಚ್ಚಿರೊ ಕಿಡಿಗೇಡಿಗಳು
*ಹಂದಿಗಳ ಸಾಕಣೆಯಿಂದ ಕೋಟೆಯ ಆವರಣದಲ್ಲಿ ದುರ್ನಾತ
*ಕೋಟೆಯ ಹೊರಭಾಗವನ್ನು  ಸಂರಕ್ಷಿಸುವಲ್ಲಿ ನಿರ್ಲಕ್ಷ್ಯ
*ಪುರಾತತ್ವ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ  

ಚಿತ್ರದುರ್ಗ (ಡಿ. 24):  ನಗರಪ್ರದೇಶಗಳಲ್ಲಿ ಜನರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡೋದು ಸಹಜ. ಆದ್ರೆ ಐತಿಹಾಸಿಕ ಹಿನ್ನೆಲೆಯಳ್ಳ ಚಿತ್ರದುರ್ಗದ ಏಳು ಸುತ್ತಿನ ಕೋಟೆಯ (Chitradurga Fort) ಹಿಂಭಾಗದಲ್ಲಿರುವ ದ್ವಾರಬಾಗಿಲನ್ನೇ ಮುಚ್ಚಿರೊ ಕಿಡಿಗೇಡಿಗಳು, ಅಕ್ರಮವಾಗಿ ಹಂದಿ ಸಾಕಣೆ‌ ಮಾಡ್ತಿದ್ದಾರೆ. ಹೀಗಾಗಿ ಕೋಟೆಯ ಹೊರಭಾಗ ಶಿಥಿಲಾವಸ್ಥೆಗೆ ತಲುಪಿದ್ದೂ, ಅಕ್ರಮ ಚಟುವಟಿಕೆಗಳ ತಾಣವಾಗಿ ಪ್ರವಾಸಿತಾಣ ಮಾರ್ಪಟ್ಟಿದೆ. 

ಇಲ್ಲಿ ಹಲವು‌ ತಿಂಗಳುಗಳಿಂದ ಅಕ್ರಮವಾಗಿ ಹಂದಿ ಸಾಕಣೆ‌ ಎಗ್ಗಿಲ್ಲದೇ‌ ನಡೆಯುತ್ತಿದೆ. ಕರುವರ್ತೇಶ್ವರ ಸ್ವಾಮಿ ದೇಗುಲಕ್ಕೆ ತೆರಳುವ ಮಾರ್ಗದಲ್ಲಿನ ಲಾಲ್ ಕೋಟೆಯ ದ್ವಾರಬಾಗಿಲನ್ನು ಸಂಪೂರ್ಣ ಬಂದ್  ಮಾಡಿರೋ ಕಿಡಿಗೇಡಿಗಳು, ಸುತ್ತಲೂ ಬೇಲಿ ಹಾಕಿ ಹಂದಿಗಳ ಕೊಟ್ಟಿಗೆ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ನೂರಾರು ಹಂದಿಗಳ ಸಾಕಣೆ ಕೋಟೆಯ ಬಳಿ ನಡೆಯುತ್ತಿರುವ ಪರಿಣಾಮ ಕೋಟೆಯ ಆವರಣದಲ್ಲಿ ದುರ್ನಾತ ಬೀರುತ್ತಿದೆ. ಜೊತೆಗೆ ಕೇವಲ ಕೋಟೆಯ ಒಳಭಾಗವನ್ನು ಮಾತ್ರ  ಕಾಳಜಿಯಿಂದ ನೋಡಿಕೊಳ್ಳುವ ಪುರಾತತ್ವ ಇಲಾಖೆ ಅಧಿಕಾರಿಗಳು (Department of Archeology) ಕೋಟೆಯ ಹೊರಭಾಗವನ್ನು  ಸಂರಕ್ಷಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಕೇಳಿಬಂದಿದ್ದು ಹೋರಾಟಗಾರರು ಆಕ್ರೋಶ ಹೊರಹಾಕ್ತಿದ್ದಾರೆ.ಈ ಕುರಿತು ಒಂದು ವರದಿ ಇಲ್ಲಿದೆ.

ಇದನ್ನೂ ಓದಿ: Vanivilas Reservoir Chitradurga: 60 ವರ್ಷಗಳ ಬಳಿಕ ಜಲಾಶಯ ಭರ್ತಿ, ರೈತರ ಮೊಗದಲ್ಲಿ ಮಂದಹಾಸ

24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
Read more