ಆಹಾರ ಕಿಟ್ ವಿತರಣೆ ವೇಳೆ ನೂಕುನುಗ್ಗಲು; ಕಾಲ್ತುಳಿತಕ್ಕೆ ಒಳಗಾದ ವೃದ್ಧೆಯರು

Jun 2, 2020, 6:24 PM IST

ಬೆಂಗಳೂರು (ಜೂ. 02): ದಾವಣಗೆರೆಯ ಜಗಳೂರಿನಲ್ಲಿ ಆಹಾರ ಕಿಟ್‌ಗೆ ನೂಕು ನುಗ್ಗಲು ಉಂಟಾಗಿದೆ.  ನೂಕು ನುಗ್ಗಲು ವೇಳೆ ವೃದ್ಧೆಯರು ಕಾಲ್ತಳಿತಕ್ಕೆ ಒಳಗಾಗಿದ್ದಾರೆ. ಜಗಳೂರು ಪಟ್ಟಣದ ತರಳಬಾಳು ಕೇಂದ್ರದಲ್ಲಿ ಅಹಾರ ಕಿಟ್ ವಿತರಣೆ ವೇಳೆ ಅವಘಢ ಸಂಭವಿಸಿದೆ. 

ಮಹಾರಾಷ್ಟ್ರದಿಂದ ಬರುವವರಿಗೆ ಶಾಕ್! ಕ್ವಾರಂಟೈನ್ ಅವಧಿ ಹೆಚ್ಚಳ

ಅರಸಿಕೆರೆ ಹೋಬಳಿ ಕಲ್ಲುಗುಣಿ ಕ್ರಷರ್ ಮಾಲಿಕರು ಬಡವರಿಗೆ ಕಿಟ್ ವಿತರಣೆ ಮಾಡಿದ್ದಾರೆ. ಗೇಟ್ ತೆರೆಯುತ್ತಿದ್ದಂತೆ 500 ಕ್ಕೂ ಹೆಚ್ಚು ಜನರು ಒಳ ನುಗ್ಗಿದ್ದಾರೆ. ಆಗ ಒಬ್ಬರ ಮೇಲೆ ಇನ್ನೊಬ್ಬರು ಬಿದ್ದಿದ್ದಾರೆ. ವೃದ್ಧೆಯರು ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ಅಲ್ಲಿನ ದೃಶ್ಯ ಇಲ್ಲಿದೆ ನೋಡಿ..!