ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದಿದ್ದ ಕಾರ್ಮಿಕರು ಬೀದಿಪಾಲು; ಕೆಲಸವೂ ಇಲ್ಲ, ಊಟವೂ ಇಲ್ಲ!

Apr 18, 2020, 11:23 AM IST

ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದಿದ್ದ ಕಾರ್ಮಿಕರು ಬೀದಿಪಾಲಾಗಿದ್ದಾರೆ. ತುತ್ತು ಅನ್ನಕ್ಕೂ ಅಂತರ್‌ರಾಜ್ಯ ಕಾರ್ಮಿಕರು ಪರದಾಡುತ್ತಿದ್ದಾರೆ. ಮಹಿಳೆಯರು ಸೇರಿ ನೂರಾರು ಕಾರ್ಮಿಕರನ್ನು ಮಾಲಿಕರು ಬೀದಿಗೆ ತಳ್ಳಿದ್ದಾರೆ. ಒಡಿಸ್ಸಾ, ಬಿಹಾರದಿಂದ ಗಾರ್ಮೆಂಟ್ಸ್ ಮಾಲಿಕರು ಕಾರ್ಮಿಕರನ್ನು ಕರೆಸಿಕೊಂಡಿದ್ದರು. ಎರಡು ತಿಂಗಳು ಕೆಲಸ ಮಾಡಿಸಿ ಹಣವನ್ನು ಕೊಡದೇ ಬೀದಿಗೆ ತಳ್ಳಿದ್ದಾರೆ. ಈಗ ಕೆಲಸವೂ ಇಲ್ಲದೇ ಊಟವೂ ಇಲ್ಲದೇ ಬೀದಿ ಪಾಲಾಗಿದ್ದಾರೆ. 

ಕೊರೋನಾ ಮರಣ ಮೃದಂಗಕ್ಕೆ ಅಮೆರಿಕಾ ತತ್ತರ; ಇದೀಗ ಮತ್ತೊಂದು ಹೊಸ ದಾಖಲೆ