ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗಿಳಿದಿದ್ಯಾ! ನಡುರಸ್ತೆಯಲ್ಲೇ ಕಾನೂನಿನ ಅಪಹಾಸ್ಯ!

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗಿಳಿದಿದ್ಯಾ! ನಡುರಸ್ತೆಯಲ್ಲೇ ಕಾನೂನಿನ ಅಪಹಾಸ್ಯ!

Published : Feb 18, 2025, 01:03 PM ISTUpdated : Feb 18, 2025, 07:15 PM IST

ಭದ್ರಾವತಿಯ ಉಜ್ಜನಿಪುರ ಸರ್ಕಲ್‌ನಲ್ಲಿ ಫೆಬ್ರವರಿ 9 ರಂದು ಗ್ಯಾಂಗ್ ವಾರ್ ನಡೆದಿದ್ದು, ಅಕ್ರಮ ಓಸಿ ದಂಧೆಯ ಹಿನ್ನೆಲೆಯಲ್ಲಿ ಆನೆ ಪ್ರದೀಪ್ ಮತ್ತು ಹಳೆ ಬಟ್ಟೆ ಆಕಾಶ್ ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ಕಾನೂನು ಸುವ್ಯವಸ್ಥೆ ಕುಸಿತದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿತವಾಗಿದೆ ಎನ್ನುವುದಕ್ಕೆ ನೂರಾರು ಘಟನೆಗಳು ಸಾಕ್ಷಿ ಆಗುತ್ತಿವೆ. ಇದು ಗೃಹ ಸಚಿವ ಪರಮೇಶ್ವರ್, ಸಿಎಂ ಸಿದ್ದರಾಮಯ್ಯನವರು ನೋಡಲೇಬೇಕಾದ ಸ್ಟೋರಿ.

ರಿಪಬ್ಲಿಕ್ ಆಫ್ ಭದ್ರಾವತಿ ಇದಕ್ಕೀಗ ಜ್ವಲಂತ ಸಾಕ್ಷಿಯಾಗಿದೆ. ನಡು ರಸ್ತೆಯಲ್ಲೇ ಮಚ್ಚು, ಲಾಂಗು, ಭರ್ಜಿ, ದೊಣ್ಣೆ, ಜಳಪಿಸುತ್ತಿವೆ. ಹಾಡು ಹಗಲೇ ದೊಣ್ಣೆಯಿಂದ ಬಡಿದಾಡಿದರೂ, ಬಾಟಲಿ  ಎಸೆದರು, ಕಲ್ಲು ತೂರಾಡಿದರೂ ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ. ಪೊಲೀಸರು ಮಾತ್ರ ಕೈ ಕಟ್, ಬಾಯ್ ಮುಚ್ ಎನ್ನುವಂತೆ ಸುಮ್ಮನೆ ನಿಂತಿದ್ದಾರೆ. ಸಂವಿಧಾನದ ರಕ್ಷಣೆ ಮಾಡಬೇಕಿದ್ದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಪೊಲೀಸ್ ಇಲಾಖೆಗೆ ಮಾತ್ರ ಇಂತಹ ಘಟನೆಗಳು ಕಣ್ಣ ಮುಂದೆ ನಡೆದರೂ ಕಣ್ಣು ಕಾಣಲ್ಲ. ದೊಡ್ಡದಾಗಿ ಸದ್ದು ಮಾಡುತ್ತಿದ್ದರೂ ಕಿವಿ ಕೇಳಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗೊಲ್ಲ. ಬಡಿದಾಟ ನಡೆದರೂ ಕಂಪ್ಲೇಂಟ್ ಆಗೋಲ್ಲ. ಪ್ರಭಾವಿ ನಾಯಕರಿಂದಲೇ ರಾಜಿ ಪಂಚಾಯಿತಿ ಮಾಡಲಾಗುತ್ತದೆ. ಕಣ್ಣಿದ್ದೂ ಕುರುಡರಾಗೋ ಪೊಲೀಸರಿಗೆ ಅಕ್ರಮ ದಂಧೆಕೊರರ ಮಂತ್ಲಿ ಮೇಲೆ ಮಾತ್ರ ಕಣ್ಣು . ಅಕ್ರಮ ದಂಧೆ ಕೋರರ ಅಟ್ಟಹಾಸಕ್ಕೆ ಕಡಿವಾಣವೇ ಇಲ್ಲ. ಪೊಲೀಸರು ಸುಮೋಟೋ ಕೇಸ್ ಕೂಡ ದಾಖಲು ಮಾಡೋಲ್ಲ.

ಹೌದು, ಭದ್ರಾವತಿಯಲ್ಲಿ ಗ್ಯಾಂಗ್ ವಾರ್ ನಡೆದಿದೆ. ಅಕ್ರಮ ಓಸಿ ದಂಧೆಯ ಹಿನ್ನೆಲೆಯಲ್ಲಿ ನಡೆದಿತ್ತು. ಭದ್ರಾವತಿಯ ಉಜ್ಜನಿಪುರ ಸರ್ಕಲ್ ನಲ್ಲಿ ಫೆಬ್ರವರಿ 9ರ ಭಾನುವಾರ ಸಂಜೆ 5:15ರಲ್ಲಿ ವೇಳೆಗೆ ಗ್ಯಾಂಗ್ ವಾರ್ ನಡೆದಿತ್ತು. ಗ್ಯಾಂಗ್ ವಾರ್  ಫೈಟ್‌ಗೆ ಸಿಸಿಟಿವಿಯಲ್ಲಿ ಸೆರೆ ಸಿಕ್ಕ ದೃಶ್ಯಗಳೇ ಸಾಕ್ಷಿ. ಆನೆ ಪ್ರದೀಪ್ ವರ್ಸಸ್ ಹಳೆ ಬಟ್ಟೆ ಆಕಾಶ್ ಗ್ಯಾಂಗ್  ನಡುವೆ ಮಾರಾಮಾರಿ ನಡೆದಿದೆ. ಲ್ಕಾರು ಬೈಕಿನಲ್ಲಿ ಮಚ್ಚು, ದೊಣ್ಣೆ, ಬರ್ಚಿ ಹಿಡಿದು ಬಂದ ಹಳೆ ಬಟ್ಟೆ ಆಕಾಶ್ ಗ್ಯಾಂಗ್, ಸರ್ಕಲ್ ಬಳಿ ನಿಂತಿದ್ದ ಆನೆ ಪ್ರದಿಪ್‌ಗೆ ಹೊಡೆದಿದ್ದಾರೆ. ಆನೆ ಪ್ರದಿಯ ಮೇಲಿನ ಅಟ್ಯಾಕ್ ತಪ್ಪಿಸಲು ಹೋದ ಜಪಾನ್‌ಗೆ ತಲೆಬುರುಡೆ ಒಡೆದು ರಕ್ತ ಚಿಮ್ಮಿತ್ತು. ಬಹಳ ಹೊತ್ತು ಉಜ್ಜನಿಪುರ ಸರ್ಕಲ್ ಬಳಿ ನಡೆದಿತ್ತು ಮಚ್ಚು ಲಾಂಗು ದೊಣ್ಣೆ ಹಿಡಿದು ಕೂಗಾಟ ಕಿರುಚಾಟ. ಹಳೆ ಬಟ್ಟೆ ರಾಕೇಶ್ ಗ್ಯಾಂಗ್ ನವರು ಬಾಟಲಿ ಎಸೆದರೆ ಆನೆ ಪ್ರದಿ, ಗ್ಯಾಂಗ್ ನವರು  ಕಲ್ಲು ತೂರಾಟ  ನಡೆಸಿದ್ದರು. 

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
Read more