ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗಿಳಿದಿದ್ಯಾ! ನಡುರಸ್ತೆಯಲ್ಲೇ ಕಾನೂನಿನ ಅಪಹಾಸ್ಯ!

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗಿಳಿದಿದ್ಯಾ! ನಡುರಸ್ತೆಯಲ್ಲೇ ಕಾನೂನಿನ ಅಪಹಾಸ್ಯ!

Published : Feb 18, 2025, 01:03 PM ISTUpdated : Feb 18, 2025, 07:15 PM IST

ಭದ್ರಾವತಿಯ ಉಜ್ಜನಿಪುರ ಸರ್ಕಲ್‌ನಲ್ಲಿ ಫೆಬ್ರವರಿ 9 ರಂದು ಗ್ಯಾಂಗ್ ವಾರ್ ನಡೆದಿದ್ದು, ಅಕ್ರಮ ಓಸಿ ದಂಧೆಯ ಹಿನ್ನೆಲೆಯಲ್ಲಿ ಆನೆ ಪ್ರದೀಪ್ ಮತ್ತು ಹಳೆ ಬಟ್ಟೆ ಆಕಾಶ್ ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ಕಾನೂನು ಸುವ್ಯವಸ್ಥೆ ಕುಸಿತದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿತವಾಗಿದೆ ಎನ್ನುವುದಕ್ಕೆ ನೂರಾರು ಘಟನೆಗಳು ಸಾಕ್ಷಿ ಆಗುತ್ತಿವೆ. ಇದು ಗೃಹ ಸಚಿವ ಪರಮೇಶ್ವರ್, ಸಿಎಂ ಸಿದ್ದರಾಮಯ್ಯನವರು ನೋಡಲೇಬೇಕಾದ ಸ್ಟೋರಿ.

ರಿಪಬ್ಲಿಕ್ ಆಫ್ ಭದ್ರಾವತಿ ಇದಕ್ಕೀಗ ಜ್ವಲಂತ ಸಾಕ್ಷಿಯಾಗಿದೆ. ನಡು ರಸ್ತೆಯಲ್ಲೇ ಮಚ್ಚು, ಲಾಂಗು, ಭರ್ಜಿ, ದೊಣ್ಣೆ, ಜಳಪಿಸುತ್ತಿವೆ. ಹಾಡು ಹಗಲೇ ದೊಣ್ಣೆಯಿಂದ ಬಡಿದಾಡಿದರೂ, ಬಾಟಲಿ  ಎಸೆದರು, ಕಲ್ಲು ತೂರಾಡಿದರೂ ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ. ಪೊಲೀಸರು ಮಾತ್ರ ಕೈ ಕಟ್, ಬಾಯ್ ಮುಚ್ ಎನ್ನುವಂತೆ ಸುಮ್ಮನೆ ನಿಂತಿದ್ದಾರೆ. ಸಂವಿಧಾನದ ರಕ್ಷಣೆ ಮಾಡಬೇಕಿದ್ದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಪೊಲೀಸ್ ಇಲಾಖೆಗೆ ಮಾತ್ರ ಇಂತಹ ಘಟನೆಗಳು ಕಣ್ಣ ಮುಂದೆ ನಡೆದರೂ ಕಣ್ಣು ಕಾಣಲ್ಲ. ದೊಡ್ಡದಾಗಿ ಸದ್ದು ಮಾಡುತ್ತಿದ್ದರೂ ಕಿವಿ ಕೇಳಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗೊಲ್ಲ. ಬಡಿದಾಟ ನಡೆದರೂ ಕಂಪ್ಲೇಂಟ್ ಆಗೋಲ್ಲ. ಪ್ರಭಾವಿ ನಾಯಕರಿಂದಲೇ ರಾಜಿ ಪಂಚಾಯಿತಿ ಮಾಡಲಾಗುತ್ತದೆ. ಕಣ್ಣಿದ್ದೂ ಕುರುಡರಾಗೋ ಪೊಲೀಸರಿಗೆ ಅಕ್ರಮ ದಂಧೆಕೊರರ ಮಂತ್ಲಿ ಮೇಲೆ ಮಾತ್ರ ಕಣ್ಣು . ಅಕ್ರಮ ದಂಧೆ ಕೋರರ ಅಟ್ಟಹಾಸಕ್ಕೆ ಕಡಿವಾಣವೇ ಇಲ್ಲ. ಪೊಲೀಸರು ಸುಮೋಟೋ ಕೇಸ್ ಕೂಡ ದಾಖಲು ಮಾಡೋಲ್ಲ.

ಹೌದು, ಭದ್ರಾವತಿಯಲ್ಲಿ ಗ್ಯಾಂಗ್ ವಾರ್ ನಡೆದಿದೆ. ಅಕ್ರಮ ಓಸಿ ದಂಧೆಯ ಹಿನ್ನೆಲೆಯಲ್ಲಿ ನಡೆದಿತ್ತು. ಭದ್ರಾವತಿಯ ಉಜ್ಜನಿಪುರ ಸರ್ಕಲ್ ನಲ್ಲಿ ಫೆಬ್ರವರಿ 9ರ ಭಾನುವಾರ ಸಂಜೆ 5:15ರಲ್ಲಿ ವೇಳೆಗೆ ಗ್ಯಾಂಗ್ ವಾರ್ ನಡೆದಿತ್ತು. ಗ್ಯಾಂಗ್ ವಾರ್  ಫೈಟ್‌ಗೆ ಸಿಸಿಟಿವಿಯಲ್ಲಿ ಸೆರೆ ಸಿಕ್ಕ ದೃಶ್ಯಗಳೇ ಸಾಕ್ಷಿ. ಆನೆ ಪ್ರದೀಪ್ ವರ್ಸಸ್ ಹಳೆ ಬಟ್ಟೆ ಆಕಾಶ್ ಗ್ಯಾಂಗ್  ನಡುವೆ ಮಾರಾಮಾರಿ ನಡೆದಿದೆ. ಲ್ಕಾರು ಬೈಕಿನಲ್ಲಿ ಮಚ್ಚು, ದೊಣ್ಣೆ, ಬರ್ಚಿ ಹಿಡಿದು ಬಂದ ಹಳೆ ಬಟ್ಟೆ ಆಕಾಶ್ ಗ್ಯಾಂಗ್, ಸರ್ಕಲ್ ಬಳಿ ನಿಂತಿದ್ದ ಆನೆ ಪ್ರದಿಪ್‌ಗೆ ಹೊಡೆದಿದ್ದಾರೆ. ಆನೆ ಪ್ರದಿಯ ಮೇಲಿನ ಅಟ್ಯಾಕ್ ತಪ್ಪಿಸಲು ಹೋದ ಜಪಾನ್‌ಗೆ ತಲೆಬುರುಡೆ ಒಡೆದು ರಕ್ತ ಚಿಮ್ಮಿತ್ತು. ಬಹಳ ಹೊತ್ತು ಉಜ್ಜನಿಪುರ ಸರ್ಕಲ್ ಬಳಿ ನಡೆದಿತ್ತು ಮಚ್ಚು ಲಾಂಗು ದೊಣ್ಣೆ ಹಿಡಿದು ಕೂಗಾಟ ಕಿರುಚಾಟ. ಹಳೆ ಬಟ್ಟೆ ರಾಕೇಶ್ ಗ್ಯಾಂಗ್ ನವರು ಬಾಟಲಿ ಎಸೆದರೆ ಆನೆ ಪ್ರದಿ, ಗ್ಯಾಂಗ್ ನವರು  ಕಲ್ಲು ತೂರಾಟ  ನಡೆಸಿದ್ದರು. 

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
Read more