ಸಚಿವ ಸಂಪುಟ ಪರಿಷ್ಕರಣೆಗೆ 'ತ್ರಿ' ಸೂತ್ರ ಸಿದ್ಧಪಡಿಸಿದ ಹೈಕಮಾಂಡ್; ಯಾರಿಗೆ ಕೋಕ್, ಯಾರಾರಿಗೆ ಮಂತ್ರಿಗಿರಿ ಕಿಕ್!

ಸಚಿವ ಸಂಪುಟ ಪರಿಷ್ಕರಣೆಗೆ 'ತ್ರಿ' ಸೂತ್ರ ಸಿದ್ಧಪಡಿಸಿದ ಹೈಕಮಾಂಡ್; ಯಾರಿಗೆ ಕೋಕ್, ಯಾರಾರಿಗೆ ಮಂತ್ರಿಗಿರಿ ಕಿಕ್!

Published : Jan 03, 2025, 01:35 PM IST

2025ರ ಆರಂಭದಲ್ಲಿ ಸಚಿವ ಸಂಪುಟ ಪುನರ್‌ರಚನೆಯ ಸುಚನೆಗಳು ಕಾಣಿಸಿಕೊಳ್ಳುತ್ತಿವೆ. ಹೈಕಮಾಂಡ್ ಮಂತ್ರಿಗಳ ಕಾರ್ಯವೈಖರಿಯ ವರದಿ ಕೇಳಿದ್ದು, ಸಚಿವರು ಮತ್ತು ಆಕಾಂಕ್ಷಿ ಶಾಸಕರಲ್ಲಿ ಚರ್ಚೆಗೆ ಕಾರಣವಾಗಿದೆ. ಹೊಸ ಮಂತ್ರಿಗಳ ಆಯ್ಕೆಗೆ ತ್ರಿಸೂತ್ರ ರೂಪಿಸಲಾಗುತ್ತಿದೆ.

2025ರ ವರ್ಷಾರಂಭದಲ್ಲಿಯೇ ಕೈ ಕೋಟೆಯೊಳಗೆ ದೊಡ್ಡ ಕ್ರಾಂತಿಯ ಸಿಗ್ನಲ್ ಬಂದಿದೆ. ಸಿದ್ದರಾಮಯ್ಯ ಸಂಪುಟ ಸರ್ಜರಿಗೆ ಸೀಕ್ರೆಟ್ ಆಗಿ ತಯಾರಿ ಆರಂಭಿಸಿದ್ದಾರೆ. ಮಂತ್ರಿಗಳಾಗಿ ಏನ್ ಮಾಡಿದ್ದೀರಿ ಅನ್ನೋದ್ರ ರಿಪೋರ್ಟ್​ ಕೊಡಿ ಎಂದಿದೆ ಹೈಕಮಾಂಡ್​. ಇದರಿಂದ ಸಚಿವರುಗಳಿಗೆ ಟೆನ್ಷನ್​ ಶುರುವಾಗಿದೆ​. ಜೊತೆಗೆ ಶಾಸಕರ ಎದೆಯಲ್ಲಿ ಮಿನಿಸ್ಟರ್​​ ಆಗೋ ಆಸೆ ಚಿಗುರೊಡೆದು ಹೆಮ್ಮರವಾಗುತ್ತಿದೆ. ಹೀಗಾಗಿ ಹಲವು ಹಿರಿಯ ಮತ್ತು ಕಿರಿಯ ಶಾಸಕರು ಮಂತ್ರಿಗಿರಿಗೆ ಪಟ್ಟು ಹಿಡಿದಿದ್ದಾರೆ. ಆದರೆ, ಅಲ್ಲಿರೋದು ಕೆಲವೇ ಕೆಲವು ಸೀಟು. ಆದ್ದರಿಂದ ಕೈ ನಾಯಕರು ಹೊಸ ಮಿನಿಸ್ಟರ್ಸ್​ ಆಯ್ಕೆಗೆ ತ್ರಿ ಸೂತ್ರವನ್ನು ಸಿದ್ಧಪಡಿಸಿದ್ದಾರೆ. ಹಾಲಿ ಸಚಿವರ ಮೇಲೆ ತೂಗುಗತ್ತಿಯಂತೆ ತೂಗ್ತಿವೆ ಪಂಚ ಪ್ರಶ್ನೆಗಳು. ಪಕ್ಷದೊಳಗೇನೆ ಹೊಸ ಆಟ ಆರಂಭಿಸಿದ್ಯಾ ಕಾಂಗ್ರೆಸ್ ಹೈಕಮಾಂಡ್..? ಆಸೆಯೇ ಇಲ್ಲಿ ಅಸ್ತ್ರವಾಗಿದ್ಯಾ..? ಕೈ ಸಾಮ್ರಾಜ್ಯದಲ್ಲಿ ನಡೆಯುತ್ತಿರೋ ರಣರೋಚಕ ರಾಜಕೀಯ ಸ್ಟೋರಿಯನ್ನ ತೋರಿಸ್ತೀವಿ ನೋಡಿ. 

ಹಾಗಿದ್ರೆ ಏನಿರಬಹುದು ಆ ಹೊಸ ರಾಜಕೀಯ ಆಟ.. ಸಚಿವ ಸಂಪುಟ ಪುನರ್​ರಚನೆ ಅನ್ನೋ ವಿಚಾರ ಇಡ್ಕೊಂಡು ಕಾಂಗ್ರೆಸ್​ ಹೈಕಮಾಂಡ್​ ತನ್ನ ಪಕ್ಷದೊಳಗೇನೆ ಆ ಆಟ ಆರಂಭಿಸಿದ್ಯಾ.?  ರಾಜ್ಯದಲ್ಲಿ ಸದ್ಯದಲ್ಲಿಯೇ ಸಂಪುಟ ಪುನರ್​ರಚನೆ ಆಗುತ್ತೆ.. ಹೀಗೊಂದು ಚರ್ಚೆ ಮತ್ತೆ ಮೇಲೆದ್ದು ಕೂತಿದೆ. ಆ ಚರ್ಚೆ ಹೌದು ಅನ್ನೋದಕ್ಕೆ ಒಂದಷ್ಟು ಸೂಚನೆಗಳು ಕೂಡ ಸಿಗ್ತಿವೆ. ಆದ್ರೆ, ಇಲ್ಲಿಯೂ ಒಂದು ರಾಜಕೀಯ ಆಟ ಇರಬಹುದು. ಆ ಆಟವನ್ನ ಕಾಂಗ್ರೆಸ್ ಹೈಕಮಾಂಡ್​ ತನ್ನ ಪಕ್ಷದೊಳಗೇನೆ ಆಡ್ತಾ ಇರಬಹುದು ಎನ್ನಲಾಗ್ತಿದೆ. ಒಂದು ವೇಳೆ ಸಚಿವ ಸಂಪುಟ ಪುನರ್​​ರಚನೆ ಆಗೋದು ಖಚಿತವೇ ಆಗಿದ್ರು ಕೂಡ, ಅಲ್ಲಿ ಮತ್ತೊಂದಿಷ್ಟು ಸವಾಲುಗಳು ಸರ್ಕಾರದ ಮುಂದೆ ಬಂದು ನಿಲ್ಲುತ್ತವೆ.

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
Read more