Republic Day 2022: ರಾಜ್ಯದ ಜನತೆಗೆ ಶುಭಾಶಯ ಕೋರಿದ ಸಿಎಂ

Jan 26, 2022, 11:24 AM IST

ಬೆಂಗಳೂರು (ಜ. 26): ಇಂದು 73 ನೇ ಗಣರಾಜ್ಯೋತ್ಸವ (Republic Day 2022) ಸಂಭ್ರಮ ಮನೆ ಮಾಡಿದೆ. ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ರಾಜ್ಯಪಾಲ (Govorner) ಗೆಹಲೋತ್ ಜನತೆಯನ್ನುದ್ದೇಶಿಸಿ ಸಂದೇಶ ನೀಡಿದ್ದಾರೆ. 

'ರಾಜ್ಯದ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು. ಪ್ರತಿಯೊಂದು ರಾಜ್ಯದ ಜನತೆ ರಾಷ್ಟ್ರ ನಿರ್ಮಾಣದ ಕಡೆ ಗಮನ ಕೊಡಬೇಕು. ನಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು. ದೇಶ ಕಟ್ಟಲು ನಾವೆಲ್ಲಾ ಸನ್ನದ್ಧರಾಗೋಣ. ಇನ್ನು ಸಾಂಸ್ಕೃತಿಕವಾಗಿ ಕರ್ನಾಟಕ ದೊಡ್ಡ ಕೊಡುಗೆ ನೀಡಿದೆ. ಇದನ್ನು ಇನ್ನಷ್ಟು ಹೆಚ್ಚಿಸಬೇಕು' ಎಂದು ಸಿಎಂ ಹೇಳಿದರು.