Central Jail Expose: ಪರಪ್ಪನ ಅಗ್ರಹಾರಕ್ಕೆ ಹೈಕೋರ್ಟ್ ನ್ಯಾಯಮೂರ್ತಿಗಳು ಭೇಟಿ

Jan 29, 2022, 5:19 PM IST

ಬೆಂಗಳೂರು (ಜ. 29): ಕಳೆದ ಒಂದು ವಾರದಿಂದ ಪರಪ್ಪನ ಅಗ್ರಹಾರದ ಕರ್ಮಕಾಂಡಗಳ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡುತ್ತಲೇ ಇದೆ. ಕೈದಿಗಳಿಗೆ ಯಾವ ರೀತಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಸಾಕ್ಷಿ ಸಮೇತ ತೋರಿಸಲಾಗಿತ್ತು. ಇಂದು ಹೈಕೋರ್ಟ್ ನ್ಯಾಯಮೂರ್ತಿ ಬಿ ವೀರಪ್ಪ , ನ್ಯಾಯಮೂರ್ತಿ ದಿನೇಶ್ ಕುಮಾರ್ ಭೇಟಿ ನೀಡಿದ್ದಾರೆ.

Central Jail Expose:ಜೈಲಿನಲ್ಲಿ ಶಂಕಿತ ಉಗ್ರನ ದರ್ಬಾರ್, ಹೇಗಿದೆ ನೋಡಿ ರಾಜಾತಿಥ್ಯ

 'ಸದ್ಯಕ್ಕೆ ಯಾವುದೇ ಅಕ್ರಮಗಳು ಕಣ್ಣಿಗೆ ಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ತನಿಖೆ ನಡೆಸುತ್ತೇವೆ. ನಾವು ಪರಿಶೀಲನೆಗೆ ಬರುವ ಸುದ್ದಿ ಮೊದಲೇ ಗೊತ್ತಾಗಿತ್ತು. ಹಾಗಾಗಿ ಎಚ್ಚೆತ್ತುಕೊಂಡಿದ್ದರು. ಇನ್ನೊಮ್ಮೆ ಬರುವಾಗ ಯಾರಿಗೂ ತಿಳಿಸದೇ ದಿಡೀರ್ ಭೇಟಿ ನೀಡುತ್ತೇವೆ' ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.