News Hour: ಸರ್ಕಾರಕ್ಕೆ ಕೇಸ್ ವಾಪಸ್ ಸಂಕಷ್ಟ!

Oct 14, 2024, 11:34 PM IST

ಬೆಂಗಳೂರು (ಅ.14): ಸರ್ಕಾರಕ್ಕೆ ಹುಬ್ಬಳ್ಳಿ ಗಲಭೆ ಕೇಸ್​ ವಾಪಸ್​ ಸಂಕಷ್ಟ ಶುರುವಾಗಿದೆ. ಹಿಜಾಬ್ ಪರ ಪ್ರತಿಭಟಿಸಿದ್ದ ಮುಸ್ಲಿಮರ ಕೇಸ್ ವಾಪಸ್​ ತೆಗೆದುಕೊಳ್ಳಲಾಗಿದೆ. ಹಿಂದೂಗಳ ಕೇಸ್​ ಹಿಂಪಡೆಯದಿದ್ದಕ್ಕೆ ಕೇಸರಿಪಡೆ ಪ್ರತಿಭಟನೆ ಆರಂಭಿಸಿದೆ.

ಇನ್ನೊಂದೆಡೆ ಕೊಲೆ ಆರೋಪಿ ದರ್ಶನ್​, ಪವಿತ್ರಾಗೌಡಗೆ ಜಾಮೀನು ಸಿಕ್ಕಿಲ್ಲ. 57ನೇ ಸೆಷೆನ್ಸ್​ ಕೋರ್ಟ್‌ನಿಂದ ಜಾಮೀನು ಅರ್ಜಿ ವಜಾ ಮಾಡಲಾಗಿದೆ. 8ನೇ ಆರೋಪಿ ರವಿಶಂಕರ್​, 13ನೇ ಆರೋಪಿ ದೀಪಕ್​ಗೆ ಬೇಲ್ ಸಿಕ್ಕಿದೆ.

ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದ ಮಾಜಿ ಸಚಿವ; ಎಲ್ಲರೂ ಲೈನ್‌ಗೆ ಬರ್ತಾರೆ ಕಾದು ನೋಡಿ ಎಂದ ಹೆಚ್‌ಡಿ ರೇವಣ್ಣ!

ಸಿಎಂಗೆ ED ಟೆನ್ಷನ್​ ಮಧ್ಯೆ ಅಖಾಡಕ್ಕೆ ಹೈಕಮಾಂಡ್‌ ಇಳಿದಿದೆ. ನಾಳೆ ವೇಣುಗೋಪಾಲ್​ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ - ಬದಲಾವಣೆ ವದಂತಿಗೆ ರಾಹುಲ್‌ ಆಪ್ತ ಬ್ರೇಕ್‌ ಹಾಕ್ತಾರಾ ಎನ್ನವ ಪ್ರಶ್ನೆ ಎದ್ದಿದೆ.