ರಾಮಮಂದಿರ ದೇಣಿಗೆ: ಪೋಲಿ-ಪುಂಡರಿಗೆ ಹಣ ಸಂಗ್ರಹಿಸಲು ಅನುಮತಿ ಕೊಟ್ಟವರ್ಯಾರ್ರಿ.?

Feb 18, 2021, 3:02 PM IST

ಬೆಂಗಳೂರು (ಫೆ. 18): ದೇಣಿಗೆ ಸಂಗ್ರಹಕ್ಕೆ ನಾನು ವಿರೋಧ ವ್ಯಕ್ತಪಡಿಸಿಲ್ಲ. ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳ ವಿರುದ್ಧವೂ ಯಾವುದೇ ಆರೋಪ ಮಾಡಿಲ್ಲ. ಪಾರದರ್ಶಕವಾಗಿ ಹಣ ಸಂಗ್ರಹ ಮಾಡಲಿ. ಇದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ, ಕೆಲವು ಪೋಲಿ-ಪುಂಡರು ಹಣ ಸಂಗ್ರಹಿಸುತ್ತಿದ್ದಾರೆ. ಇದಕ್ಕೆ ಅನುಮತಿ ಕೊಟ್ಟವರು ಯಾರು? ರಾಮನ ಹೆಸರಲ್ಲಿ ಕೆಲವರು ಧಾರ್ಮಿಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ದೇಣಿಗೆ ನೀಡುವ ವಿಚಾರದಲ್ಲಿ ನನಗೇ ಬೆದರಿಕೆ ಹಾಕುತ್ತಿದ್ದರೆ ಸಾಮಾನ್ಯ ಜನರ ಪಾಡೇನು’ ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ. 

ಪೊಲೀಸ್ ಮಹಾನಿರ್ದೇಶಕರ ವಿರುದ್ಧವೇ ತಿರುಗಿ ಬಿದ್ದ ಸಿಬ್ಬಂದಿ, ಏನಿದು ಜಟಾಪಟಿ..?

ರಾಮ​ಮಂದಿರ ನಿರ್ಮಾ​ಣ​ಕ್ಕಾಗಿ ನನ್ನ ಬಳಿಯೂ ದೇಣಿಗೆ ಕೇಳಲು ಬಂದಿ​ದ್ದರು. ಆದರೆ, ವಿವಾ​ದಿತ ಸ್ಥಳ​ದಲ್ಲಿ ರಾಮ​ಮಂದಿ​ರ ನಿರ್ಮಿ​ಸಿ​ದರೆ ಕೊಡುವುದಿಲ್ಲ, ಬೇರೆಡೆ ಕಟ್ಟಿ​ದರೆ ದೇಣಿಗೆ ಕೊಡು​ತ್ತೇನೆ ಎಂದು ಹೇಳಿ ಕಳು​ಹಿ​ಸಿದೆ’ ಎಂದು ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯ ಹೇಳಿದ್ದಾರೆ.