'2023 ಕ್ಕೆ JDS ಪಕ್ಷ ಬಿಟ್ಟು ಸರ್ಕಾರ ರಚಿಸಲು ಆಗಲ್ಲ. ಸೋಂಕು ಕಡಿಮೆಯಾಗಲಿ, ನಮ್ಮ ಹೋರಾಟ ಶುರುವಾಗುತ್ತದೆ. ಮುಂದಿನ ವಿಧಾನಸಭೆ ಅಧಿವೇಶನದಿಂದಲೇ ನಮ್ಮ ಹೋರಾಟ' ಎಂದು ಮಾಜಿ ಸಿಎಂ ಎಚ್ಡಿಕೆ ಹೇಳಿದರು.
ಬೆಂಗಳೂರು (ಜ. 26): '2023 ಕ್ಕೆ JDS ಪಕ್ಷ ಬಿಟ್ಟು ಸರ್ಕಾರ ರಚಿಸಲು ಆಗಲ್ಲ. ಸೋಂಕು ಕಡಿಮೆಯಾಗಲಿ, ನಮ್ಮ ಹೋರಾಟ ಶುರುವಾಗುತ್ತದೆ. ಮುಂದಿನ ವಿಧಾನಸಭೆ ಅಧಿವೇಶನದಿಂದಲೇ ನಮ್ಮ ಹೋರಾಟ' ಎಂದು ಮಾಜಿ ಸಿಎಂ ಎಚ್ಡಿಕೆ (HD Kumaraswamy) ಹೇಳಿದರು.
'ಮಾತಾಡಲು ಸಾಕಷ್ಟು ವಿಚಾರಗಳಿವೆ. ಕೋವಿಡ್ ಅಬ್ಬರ ಕಡಿಮೆ ಆಗಲಿ ಎಂದು ಕಾಯುತ್ತಿದ್ದೇವೆ. ಕರ್ನಾಟಕ ಇಂತಹ ದುಸ್ಥಿತಿಗೆ ಬರಲು ಬಿಜೆಪಿ ಹಾಗೂ ಕಾಂಗ್ರೆಸ್ ಕಾರಣ' ಎಂದು ಎಚ್ಡಿಕೆ ವಾಗ್ದಾಳಿ ನಡೆಸಿದರು.