Nov 14, 2020, 1:47 PM IST
ಬೆಂಗಳೂರು (ನ. 14): ದೀಪಾವಳಿಗೆ ಹಸಿರು ಪಟಾಕಿ ಹೊಡೆಯಲು ಸರ್ಕಾರ ಅನುಮತಿ ನೀಡಿದೆ. ಹಾಗಂತ ಬೇಕಾಬಿಟ್ಟಿ ಹೊಡೆಯುವಂತಿಲ್ಲ. ಹಸಿರು ಪಟಾಕಿಯೂ ಸೇಫಲ್ಲ. ಇದರಲ್ಲೂ ರಾಸಾಯನಿಕಗಳಿವೆ. ಇದರಲ್ಲಿರುವ ಬೇರಿಯಂ ನೈಟ್ರೇಟ್ ಪರಿಸರಕ್ಕೆ ಹಾನಿ ಮಾಡುತ್ತದೆ. ಹಾಗಾಗಿ ಹಿತಮಿತವಾಗಿ ಬಳಸಬೇಕು ಎಂದು ಆವಾಜ್ ಫೌಂಡೇಶನ್ ಸಲಹೆ ನೀಡಿದೆ.
ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ, ಬಹುತೇಕ ಅಂಗಡಿಗಳಲ್ಲಿ ಹಸಿರು ಪಟಾಕಿಗಳೇ ಇಲ್ಲ!
ಯಾವುದೇ ಪಟಾಕಿ ಇರಬಹುದು. ಬೇಕಾಬಿಟ್ಟಿ ಹೊಡೆಯದೇ ಮಿತವಾಗಿ ಬಳಸಿದರೆ ಪರಿಸರಕ್ಕೂ ಒಳ್ಳೆಯದು, ನಮ್ಮ ಆರೋಗ್ಯಕ್ಕೂ ಒಳ್ಳೆಯದು!