ತಿರುಗುಬಾಣವಾಯ್ತಾ ಹೋರಾಟ? ಈಗೇನ್ಮಾಡ್ತಾರೆ ಸುಜಾತಾ ಭಟ್?

ತಿರುಗುಬಾಣವಾಯ್ತಾ ಹೋರಾಟ? ಈಗೇನ್ಮಾಡ್ತಾರೆ ಸುಜಾತಾ ಭಟ್?

Published : Aug 23, 2025, 01:23 PM IST

ಗಿರೀಶ್​​ ಮಟ್ಟೆಣ್ಣನವರ ಮೇಲೆ ಈಗಾಗಲೇ ಸಾಕಷ್ಟು ಕೇಸ್​ಗಳಿವೆ. ಈಗ ಹೊಸದೊಂದು ಕೇಸ್​​ ಆತನ ಮೇಲೆ ಬಿದ್ದಿದೆ. ಇನ್ನೂ ನಮ್ಮ ಮ್ಯಾಜಿಕ್​​ ಅಜ್ಜಿಯ ಹೊಸ ಪುರಾಣವನ್ನ ಹೇಳಲು ಆಕೆಯ ಸಹೋದರನೇ ಮುಂದೆ ಬಂದಿದ್ದಾರೆ.

ಧರ್ಮಸ್ಥಳ ವಿರೋದಿ ಗ್ಯಾಂಗ್​ನ ಒಂದು ವಿಕೆಟ್​ ಪತನವಾಗಿದೆ. ತನ್ನ ಬಾಯಿಯನ್ನ ಹರಿಬಿಟ್ಟು ಮಹೇಶ್​ ತಿಮರೋಡಿ ಪೊಲೀಸರ ಅತಿಥಿಯಾಗಿದ್ದಾನೆ. ಇನ್ನೂ ಆತನ ಶಿಷ್ಯ ಸಮೀರ್​​ ಜಾಮೀನು ಪಡೆದು ಜಸ್ಟ್​ ಮಿಸ್​​ ಆಗಿದ್ದಾನೆ. ಉಳಿದ ಗಿರೀಶ್​​ ಮಟ್ಟೆಣ್ಣನವರ ಮೇಲೆ ಈಗಾಗಲೇ ಸಾಕಷ್ಟು ಕೇಸ್​ಗಳಿವೆ. ಈಗ ಹೊಸದೊಂದು ಕೇಸ್​​ ಆತನ ಮೇಲೆ ಬಿದ್ದಿದೆ. ಇನ್ನೂ ನಮ್ಮ ಮ್ಯಾಜಿಕ್​​ ಅಜ್ಜಿಯ ಹೊಸ ಪುರಾಣವನ್ನ ಹೇಳಲು ಆಕೆಯ ಸಹೋದರನೇ ಮುಂದೆ ಬಂದಿದ್ದಾರೆ. ಹಾಗಾದ್ರೆ ಆ ಸಹೋದರ ಹೇಳಿದ್ದೇನು..? ಧರ್ಮಸ್ಥಳ ವಿರೋಧಿ ಗ್ಯಾಂಗ್​ನ ಲೇಟೆಸ್ಟ್​ ಅಪ್​ಡೇಟ್ಸ್​​ ಏನು ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್​.ಐ.ಆರ್​. ಸಂಶಯ, ಗುಮಾನಿಗಳಿಂದಲೇ ಆವರಿಸಿಕೊಂಡಿದ್ದ ಧರ್ಮಸ್ಥಳ ಫೈಲ್ಸ್​ನಲ್ಲಿ ಈಗ ನಿಧಾನಕ್ಕೆ ಸ್ಪಷ್ಟತೆ ಮೂಡುತ್ತಿದೆ. ಒಂದು ಗ್ಯಾಂಗ್​​ ಧರ್ಮಸ್ಥಳದ ಅವಹೇಳನಕ್ಕಾಗಿ ಸಂಚು ರೂಪಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಎಸ್​​ಐಟಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದು, ತಾವೇ ರಚಿಸಿದ್ದ ಷಡ್ಯಂತ್ರ ಈಗ ಸಂಚುಕೋರರಿಗೆ ತಿರುಗುಬಾಣವಾಗಿರೋದ್ರಲ್ಲಿ ಡೌಟೇ ಇಲ್ಲ. ಇನ್ನೂ ಇದೇ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಒಂದು ಕಡೆ ಧರ್ಮಸ್ಥಳದ ವಿರುದ್ಧ ಕೆಲವರು ಷಡ್ಯಂತರ ಮಾಡ್ತಿದ್ರೆ ಕೆಲವರು ಧರ್ಮಸ್ಥಳಕ್ಕೆ ಬೆಂಬಲ ಸೂಚಿಸಿ ರಾಜ್ಯಾವ್ಯಾಪಿ ಹೋರಾಟ ಮಾಡ್ತಿದ್ದಾರೆ. ಇನ್ನೂ ಈ ಕೇಸ್​​ನಲ್ಲಿ SIT ರಚನೆಯಾದಾಗಿನಿಂದ ರಾಜಕೀಯ ಕೆಸರೆರಚಾಟವೂ ಜೋರಾಗಿ ನಡೆಯುತ್ತಿದೆ. ಬಿಜೆಪಿ SIT ರಚಿಸಿದ್ದನ್ನೇ ಪ್ರಶ್ನಿಸಿದ್ರೆ ಸರ್ಕಾರ ಮಾತ್ರ ಸಮರ್ಥನೆ ಮಾಡಿಕೊಳ್ತಿದೆ. ದಿನ ಕಳೆದಂತೆ ಧರ್ಮಸ್ಥಳ ಪರ ನಡೆಯುತ್ತಿರೋ ಹೋರಾಟದ ಕಾವು ಹೆಚ್ಚುತ್ತಲೇ ಇದೆ. ಒಂದೆಡೆ ಬಿಜೆಪಿ ಧರ್ಮಯುದ್ಧ ಆರಂಭಿಸಿದ್ರೆ, ಮತ್ತೊಂದೆಡೆ ಸಂಘಟನೆಗಳು, ಭಕ್ತರು ಧರ್ಮಸ್ಥಳದ ಪರ ದನಿ ಎತ್ತಿದ್ದಾರೆ. ಈ ಬೆಳವಣಿಗೆ ಸರ್ಕಾರಕ್ಕೂ ಸವಾಲಾಗಿರೋದು ಸುಳ್ಳಲ್ಲ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more