ತಿರುಗುಬಾಣವಾಯ್ತಾ ಹೋರಾಟ? ಈಗೇನ್ಮಾಡ್ತಾರೆ ಸುಜಾತಾ ಭಟ್?

ತಿರುಗುಬಾಣವಾಯ್ತಾ ಹೋರಾಟ? ಈಗೇನ್ಮಾಡ್ತಾರೆ ಸುಜಾತಾ ಭಟ್?

Published : Aug 23, 2025, 01:23 PM IST

ಗಿರೀಶ್​​ ಮಟ್ಟೆಣ್ಣನವರ ಮೇಲೆ ಈಗಾಗಲೇ ಸಾಕಷ್ಟು ಕೇಸ್​ಗಳಿವೆ. ಈಗ ಹೊಸದೊಂದು ಕೇಸ್​​ ಆತನ ಮೇಲೆ ಬಿದ್ದಿದೆ. ಇನ್ನೂ ನಮ್ಮ ಮ್ಯಾಜಿಕ್​​ ಅಜ್ಜಿಯ ಹೊಸ ಪುರಾಣವನ್ನ ಹೇಳಲು ಆಕೆಯ ಸಹೋದರನೇ ಮುಂದೆ ಬಂದಿದ್ದಾರೆ.

ಧರ್ಮಸ್ಥಳ ವಿರೋದಿ ಗ್ಯಾಂಗ್​ನ ಒಂದು ವಿಕೆಟ್​ ಪತನವಾಗಿದೆ. ತನ್ನ ಬಾಯಿಯನ್ನ ಹರಿಬಿಟ್ಟು ಮಹೇಶ್​ ತಿಮರೋಡಿ ಪೊಲೀಸರ ಅತಿಥಿಯಾಗಿದ್ದಾನೆ. ಇನ್ನೂ ಆತನ ಶಿಷ್ಯ ಸಮೀರ್​​ ಜಾಮೀನು ಪಡೆದು ಜಸ್ಟ್​ ಮಿಸ್​​ ಆಗಿದ್ದಾನೆ. ಉಳಿದ ಗಿರೀಶ್​​ ಮಟ್ಟೆಣ್ಣನವರ ಮೇಲೆ ಈಗಾಗಲೇ ಸಾಕಷ್ಟು ಕೇಸ್​ಗಳಿವೆ. ಈಗ ಹೊಸದೊಂದು ಕೇಸ್​​ ಆತನ ಮೇಲೆ ಬಿದ್ದಿದೆ. ಇನ್ನೂ ನಮ್ಮ ಮ್ಯಾಜಿಕ್​​ ಅಜ್ಜಿಯ ಹೊಸ ಪುರಾಣವನ್ನ ಹೇಳಲು ಆಕೆಯ ಸಹೋದರನೇ ಮುಂದೆ ಬಂದಿದ್ದಾರೆ. ಹಾಗಾದ್ರೆ ಆ ಸಹೋದರ ಹೇಳಿದ್ದೇನು..? ಧರ್ಮಸ್ಥಳ ವಿರೋಧಿ ಗ್ಯಾಂಗ್​ನ ಲೇಟೆಸ್ಟ್​ ಅಪ್​ಡೇಟ್ಸ್​​ ಏನು ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್​.ಐ.ಆರ್​. ಸಂಶಯ, ಗುಮಾನಿಗಳಿಂದಲೇ ಆವರಿಸಿಕೊಂಡಿದ್ದ ಧರ್ಮಸ್ಥಳ ಫೈಲ್ಸ್​ನಲ್ಲಿ ಈಗ ನಿಧಾನಕ್ಕೆ ಸ್ಪಷ್ಟತೆ ಮೂಡುತ್ತಿದೆ. ಒಂದು ಗ್ಯಾಂಗ್​​ ಧರ್ಮಸ್ಥಳದ ಅವಹೇಳನಕ್ಕಾಗಿ ಸಂಚು ರೂಪಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಎಸ್​​ಐಟಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದು, ತಾವೇ ರಚಿಸಿದ್ದ ಷಡ್ಯಂತ್ರ ಈಗ ಸಂಚುಕೋರರಿಗೆ ತಿರುಗುಬಾಣವಾಗಿರೋದ್ರಲ್ಲಿ ಡೌಟೇ ಇಲ್ಲ. ಇನ್ನೂ ಇದೇ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಒಂದು ಕಡೆ ಧರ್ಮಸ್ಥಳದ ವಿರುದ್ಧ ಕೆಲವರು ಷಡ್ಯಂತರ ಮಾಡ್ತಿದ್ರೆ ಕೆಲವರು ಧರ್ಮಸ್ಥಳಕ್ಕೆ ಬೆಂಬಲ ಸೂಚಿಸಿ ರಾಜ್ಯಾವ್ಯಾಪಿ ಹೋರಾಟ ಮಾಡ್ತಿದ್ದಾರೆ. ಇನ್ನೂ ಈ ಕೇಸ್​​ನಲ್ಲಿ SIT ರಚನೆಯಾದಾಗಿನಿಂದ ರಾಜಕೀಯ ಕೆಸರೆರಚಾಟವೂ ಜೋರಾಗಿ ನಡೆಯುತ್ತಿದೆ. ಬಿಜೆಪಿ SIT ರಚಿಸಿದ್ದನ್ನೇ ಪ್ರಶ್ನಿಸಿದ್ರೆ ಸರ್ಕಾರ ಮಾತ್ರ ಸಮರ್ಥನೆ ಮಾಡಿಕೊಳ್ತಿದೆ. ದಿನ ಕಳೆದಂತೆ ಧರ್ಮಸ್ಥಳ ಪರ ನಡೆಯುತ್ತಿರೋ ಹೋರಾಟದ ಕಾವು ಹೆಚ್ಚುತ್ತಲೇ ಇದೆ. ಒಂದೆಡೆ ಬಿಜೆಪಿ ಧರ್ಮಯುದ್ಧ ಆರಂಭಿಸಿದ್ರೆ, ಮತ್ತೊಂದೆಡೆ ಸಂಘಟನೆಗಳು, ಭಕ್ತರು ಧರ್ಮಸ್ಥಳದ ಪರ ದನಿ ಎತ್ತಿದ್ದಾರೆ. ಈ ಬೆಳವಣಿಗೆ ಸರ್ಕಾರಕ್ಕೂ ಸವಾಲಾಗಿರೋದು ಸುಳ್ಳಲ್ಲ.

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
Read more