Karnataka Covid Crisis : ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ  ವಿಷ ಕೊಟ್ಟು ಬಿಡಲಿ

Karnataka Covid Crisis : ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ ವಿಷ ಕೊಟ್ಟು ಬಿಡಲಿ

Suvarna News   | Asianet News
Published : Jan 06, 2022, 11:25 AM IST

 'ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ  ವಿಷ ಕೊಟ್ಟು ಕೊಂದು ಬಿಡಲಿ ಎಂದು ಸರ್ಕಾರದ ವೀಕೆಂಡ್ ಕರ್ಫ್ಯೂ, 50-50 ನಿಯಮದ ವಿರುದ್ಧ ಮಂಗಳೂರಿನಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಮಗೆ ತಿನ್ನೋಕೆ ಗತಿ ಇಲ್ಲ, ನಾವೆಲ್ಲ ದುಡಿದು ತಿನ್ನೋರು. ಸಾಲಗಳು, ಬ್ಯಾಂಕ್ ಕಿರಿಕಿರಿಯಿಂದ ಜನ ಒದ್ದಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್ ಅಸಮಾಧಾನ  ಹೊರಹಾಕಿದ್ದಾರೆ. 

ಬೆಂಗಳೂರು (ಜ.06):  'ಲಾಕ್ ಡೌನ್ (Lockdown) ಮಾಡುವ ಬದಲು ಸರ್ಕಾರ ಜನರಿಗೆ  ವಿಷ ಕೊಟ್ಟು ಕೊಂದು ಬಿಡಲಿ ಎಂದು ಸರ್ಕಾರದ ವೀಕೆಂಡ್ ಕರ್ಫ್ಯೂ, 50-50 ನಿಯಮದ ವಿರುದ್ಧ ಮಂಗಳೂರಿನಲ್ಲಿ (Mangaluru) ಆಕ್ರೋಶ ವ್ಯಕ್ತವಾಗಿದೆ. ನಮಗೆ ತಿನ್ನೋಕೆ ಗತಿ ಇಲ್ಲ, ನಾವೆಲ್ಲ ದುಡಿದು ತಿನ್ನೋರು. ಸಾಲಗಳು, ಬ್ಯಾಂಕ್ (Bank) ಕಿರಿಕಿರಿಯಿಂದ ಜನ ಒದ್ದಾಡುತ್ತಿದ್ದಾರೆ. ದುಡಿಯುವ ಜನ ಸಾಯುವ ಪರಿಸ್ಥಿತಿ ಇದೆ, ಸಾಲದ ಕಿರಿಕಿರಿ ಮತ್ತು ತಿನ್ನೋಕೆ ಇಲ್ಲದಂತ ಸ್ಥಿತಿ ಎದುರಾಗುತ್ತಿದೆ.  ಲಾಕ್ ಡೌನ್ (Lockdown) ಮಾಡುವ ಬದಲು ಸರ್ಕಾರ ಜನರಿಗೆ  ವಿಷ ಕೊಟ್ಟು ಬಿಡಲಿ ಎಂದು ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್ ಆಕ್ರೋಶ ಹೊರಹಾಕಿದ್ದಾರೆ. 

Uttara Kannada: ಹೊರ ರಾಜ್ಯದಿಂದ ಬರುವವರಿಗೆ ನೆಗೆಟಿವ್‌ ವರದಿ ಕಡ್ಡಾಯ

ಇವರು ರೋಗವನ್ನು ರಾಜಕಾರಣಿಯ (Politician) ಕುಟುಂಬದ ದೆವ್ವದ ಹಾಗೆ ಮಾಡಿದ್ದಾರೆ.  ಇವರಿಗೆ ಇಷ್ಟ ಬಂದಾಗ ರೋಗ ಹೊರಗೆ ಬರೋದು ಆಗುತ್ತಿದೆ.  ಎಲೆಕ್ಷನ್ (Election) ಇರುವಾಗ ರೋಗ ಇಲ್ಲ, ಮುಗಿದ ಮೇಲೆ ಬರುತ್ತದೆ.   ಮನುಷ್ಯ ಟೆನ್ಶನ್ ನಿಂದ ಸಾಯುತ್ತಿದ್ದಾನೆ. ಕೊರೋನಾಗೆ (Corona) ಮದ್ದು ಇರಬಹುದು, ಟೆನ್ಶನ್ ಗೆ ಇಲ್ಲ.  ನೀವು ಕೋಟಿ ಗಟ್ಟಲೇ ಮಾಡಿಟ್ಟದ್ದು ಇದೆ, ನಮಗೆ ಕೆಲಸಕ್ಕೆ ಹೋದರೆ ಮಾತ್ರ ಮನೆ ನಡೆಯುತ್ತದೆ. ಇವರು ಹತ್ತು ವರ್ಷ ಬಂದ್ ಮಾಡಿದರು ಬದುಕುವಷ್ಟು ಮಾಡಿಟ್ಟಿದ್ದಾರೆ.  ರೋಗದ ಪ್ರಾಬಲ್ಯತೆಗಿಂತ ಇಲ್ಲಿ ದೊಡ್ಡ ಮಾಫಿಯಾ ಕೆಲಸ ಮಾಡುತ್ತಿದೆ.  ಈ ರೋಗ ಇರೋದು ಆಸ್ಪತ್ರೆಯಲ್ಲಿ ಮಾತ್ರ, ಆಸ್ಪತ್ರೆಗೆ ಹೋದವರಿಗೆಲ್ಲಾ ಕೊರೋನಾ. ಹೀಗಾಗಿ ಮೆಡಿಕಲ್ ಮಾಫಿಯಾ ಇದೆ, ಈ ಬಗ್ಗೆ ಸರ್ಕಾರ ಗಮನಿಸಲಿ ಎಂದು ಅಸಮಾಧಾನ ಹೊರಹಾಕಲಾಗಿದೆ. 

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!