Karnataka Covid Crisis : ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ  ವಿಷ ಕೊಟ್ಟು ಬಿಡಲಿ

Karnataka Covid Crisis : ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ ವಿಷ ಕೊಟ್ಟು ಬಿಡಲಿ

Suvarna News   | Asianet News
Published : Jan 06, 2022, 11:25 AM IST

 'ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ  ವಿಷ ಕೊಟ್ಟು ಕೊಂದು ಬಿಡಲಿ ಎಂದು ಸರ್ಕಾರದ ವೀಕೆಂಡ್ ಕರ್ಫ್ಯೂ, 50-50 ನಿಯಮದ ವಿರುದ್ಧ ಮಂಗಳೂರಿನಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಮಗೆ ತಿನ್ನೋಕೆ ಗತಿ ಇಲ್ಲ, ನಾವೆಲ್ಲ ದುಡಿದು ತಿನ್ನೋರು. ಸಾಲಗಳು, ಬ್ಯಾಂಕ್ ಕಿರಿಕಿರಿಯಿಂದ ಜನ ಒದ್ದಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್ ಅಸಮಾಧಾನ  ಹೊರಹಾಕಿದ್ದಾರೆ. 

ಬೆಂಗಳೂರು (ಜ.06):  'ಲಾಕ್ ಡೌನ್ (Lockdown) ಮಾಡುವ ಬದಲು ಸರ್ಕಾರ ಜನರಿಗೆ  ವಿಷ ಕೊಟ್ಟು ಕೊಂದು ಬಿಡಲಿ ಎಂದು ಸರ್ಕಾರದ ವೀಕೆಂಡ್ ಕರ್ಫ್ಯೂ, 50-50 ನಿಯಮದ ವಿರುದ್ಧ ಮಂಗಳೂರಿನಲ್ಲಿ (Mangaluru) ಆಕ್ರೋಶ ವ್ಯಕ್ತವಾಗಿದೆ. ನಮಗೆ ತಿನ್ನೋಕೆ ಗತಿ ಇಲ್ಲ, ನಾವೆಲ್ಲ ದುಡಿದು ತಿನ್ನೋರು. ಸಾಲಗಳು, ಬ್ಯಾಂಕ್ (Bank) ಕಿರಿಕಿರಿಯಿಂದ ಜನ ಒದ್ದಾಡುತ್ತಿದ್ದಾರೆ. ದುಡಿಯುವ ಜನ ಸಾಯುವ ಪರಿಸ್ಥಿತಿ ಇದೆ, ಸಾಲದ ಕಿರಿಕಿರಿ ಮತ್ತು ತಿನ್ನೋಕೆ ಇಲ್ಲದಂತ ಸ್ಥಿತಿ ಎದುರಾಗುತ್ತಿದೆ.  ಲಾಕ್ ಡೌನ್ (Lockdown) ಮಾಡುವ ಬದಲು ಸರ್ಕಾರ ಜನರಿಗೆ  ವಿಷ ಕೊಟ್ಟು ಬಿಡಲಿ ಎಂದು ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್ ಆಕ್ರೋಶ ಹೊರಹಾಕಿದ್ದಾರೆ. 

Uttara Kannada: ಹೊರ ರಾಜ್ಯದಿಂದ ಬರುವವರಿಗೆ ನೆಗೆಟಿವ್‌ ವರದಿ ಕಡ್ಡಾಯ

ಇವರು ರೋಗವನ್ನು ರಾಜಕಾರಣಿಯ (Politician) ಕುಟುಂಬದ ದೆವ್ವದ ಹಾಗೆ ಮಾಡಿದ್ದಾರೆ.  ಇವರಿಗೆ ಇಷ್ಟ ಬಂದಾಗ ರೋಗ ಹೊರಗೆ ಬರೋದು ಆಗುತ್ತಿದೆ.  ಎಲೆಕ್ಷನ್ (Election) ಇರುವಾಗ ರೋಗ ಇಲ್ಲ, ಮುಗಿದ ಮೇಲೆ ಬರುತ್ತದೆ.   ಮನುಷ್ಯ ಟೆನ್ಶನ್ ನಿಂದ ಸಾಯುತ್ತಿದ್ದಾನೆ. ಕೊರೋನಾಗೆ (Corona) ಮದ್ದು ಇರಬಹುದು, ಟೆನ್ಶನ್ ಗೆ ಇಲ್ಲ.  ನೀವು ಕೋಟಿ ಗಟ್ಟಲೇ ಮಾಡಿಟ್ಟದ್ದು ಇದೆ, ನಮಗೆ ಕೆಲಸಕ್ಕೆ ಹೋದರೆ ಮಾತ್ರ ಮನೆ ನಡೆಯುತ್ತದೆ. ಇವರು ಹತ್ತು ವರ್ಷ ಬಂದ್ ಮಾಡಿದರು ಬದುಕುವಷ್ಟು ಮಾಡಿಟ್ಟಿದ್ದಾರೆ.  ರೋಗದ ಪ್ರಾಬಲ್ಯತೆಗಿಂತ ಇಲ್ಲಿ ದೊಡ್ಡ ಮಾಫಿಯಾ ಕೆಲಸ ಮಾಡುತ್ತಿದೆ.  ಈ ರೋಗ ಇರೋದು ಆಸ್ಪತ್ರೆಯಲ್ಲಿ ಮಾತ್ರ, ಆಸ್ಪತ್ರೆಗೆ ಹೋದವರಿಗೆಲ್ಲಾ ಕೊರೋನಾ. ಹೀಗಾಗಿ ಮೆಡಿಕಲ್ ಮಾಫಿಯಾ ಇದೆ, ಈ ಬಗ್ಗೆ ಸರ್ಕಾರ ಗಮನಿಸಲಿ ಎಂದು ಅಸಮಾಧಾನ ಹೊರಹಾಕಲಾಗಿದೆ. 

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!