Karnataka Covid Crisis : ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ  ವಿಷ ಕೊಟ್ಟು ಬಿಡಲಿ

Karnataka Covid Crisis : ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ ವಿಷ ಕೊಟ್ಟು ಬಿಡಲಿ

Suvarna News   | Asianet News
Published : Jan 06, 2022, 11:25 AM IST

 'ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ  ವಿಷ ಕೊಟ್ಟು ಕೊಂದು ಬಿಡಲಿ ಎಂದು ಸರ್ಕಾರದ ವೀಕೆಂಡ್ ಕರ್ಫ್ಯೂ, 50-50 ನಿಯಮದ ವಿರುದ್ಧ ಮಂಗಳೂರಿನಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಮಗೆ ತಿನ್ನೋಕೆ ಗತಿ ಇಲ್ಲ, ನಾವೆಲ್ಲ ದುಡಿದು ತಿನ್ನೋರು. ಸಾಲಗಳು, ಬ್ಯಾಂಕ್ ಕಿರಿಕಿರಿಯಿಂದ ಜನ ಒದ್ದಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್ ಅಸಮಾಧಾನ  ಹೊರಹಾಕಿದ್ದಾರೆ. 

ಬೆಂಗಳೂರು (ಜ.06):  'ಲಾಕ್ ಡೌನ್ (Lockdown) ಮಾಡುವ ಬದಲು ಸರ್ಕಾರ ಜನರಿಗೆ  ವಿಷ ಕೊಟ್ಟು ಕೊಂದು ಬಿಡಲಿ ಎಂದು ಸರ್ಕಾರದ ವೀಕೆಂಡ್ ಕರ್ಫ್ಯೂ, 50-50 ನಿಯಮದ ವಿರುದ್ಧ ಮಂಗಳೂರಿನಲ್ಲಿ (Mangaluru) ಆಕ್ರೋಶ ವ್ಯಕ್ತವಾಗಿದೆ. ನಮಗೆ ತಿನ್ನೋಕೆ ಗತಿ ಇಲ್ಲ, ನಾವೆಲ್ಲ ದುಡಿದು ತಿನ್ನೋರು. ಸಾಲಗಳು, ಬ್ಯಾಂಕ್ (Bank) ಕಿರಿಕಿರಿಯಿಂದ ಜನ ಒದ್ದಾಡುತ್ತಿದ್ದಾರೆ. ದುಡಿಯುವ ಜನ ಸಾಯುವ ಪರಿಸ್ಥಿತಿ ಇದೆ, ಸಾಲದ ಕಿರಿಕಿರಿ ಮತ್ತು ತಿನ್ನೋಕೆ ಇಲ್ಲದಂತ ಸ್ಥಿತಿ ಎದುರಾಗುತ್ತಿದೆ.  ಲಾಕ್ ಡೌನ್ (Lockdown) ಮಾಡುವ ಬದಲು ಸರ್ಕಾರ ಜನರಿಗೆ  ವಿಷ ಕೊಟ್ಟು ಬಿಡಲಿ ಎಂದು ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್ ಆಕ್ರೋಶ ಹೊರಹಾಕಿದ್ದಾರೆ. 

Uttara Kannada: ಹೊರ ರಾಜ್ಯದಿಂದ ಬರುವವರಿಗೆ ನೆಗೆಟಿವ್‌ ವರದಿ ಕಡ್ಡಾಯ

ಇವರು ರೋಗವನ್ನು ರಾಜಕಾರಣಿಯ (Politician) ಕುಟುಂಬದ ದೆವ್ವದ ಹಾಗೆ ಮಾಡಿದ್ದಾರೆ.  ಇವರಿಗೆ ಇಷ್ಟ ಬಂದಾಗ ರೋಗ ಹೊರಗೆ ಬರೋದು ಆಗುತ್ತಿದೆ.  ಎಲೆಕ್ಷನ್ (Election) ಇರುವಾಗ ರೋಗ ಇಲ್ಲ, ಮುಗಿದ ಮೇಲೆ ಬರುತ್ತದೆ.   ಮನುಷ್ಯ ಟೆನ್ಶನ್ ನಿಂದ ಸಾಯುತ್ತಿದ್ದಾನೆ. ಕೊರೋನಾಗೆ (Corona) ಮದ್ದು ಇರಬಹುದು, ಟೆನ್ಶನ್ ಗೆ ಇಲ್ಲ.  ನೀವು ಕೋಟಿ ಗಟ್ಟಲೇ ಮಾಡಿಟ್ಟದ್ದು ಇದೆ, ನಮಗೆ ಕೆಲಸಕ್ಕೆ ಹೋದರೆ ಮಾತ್ರ ಮನೆ ನಡೆಯುತ್ತದೆ. ಇವರು ಹತ್ತು ವರ್ಷ ಬಂದ್ ಮಾಡಿದರು ಬದುಕುವಷ್ಟು ಮಾಡಿಟ್ಟಿದ್ದಾರೆ.  ರೋಗದ ಪ್ರಾಬಲ್ಯತೆಗಿಂತ ಇಲ್ಲಿ ದೊಡ್ಡ ಮಾಫಿಯಾ ಕೆಲಸ ಮಾಡುತ್ತಿದೆ.  ಈ ರೋಗ ಇರೋದು ಆಸ್ಪತ್ರೆಯಲ್ಲಿ ಮಾತ್ರ, ಆಸ್ಪತ್ರೆಗೆ ಹೋದವರಿಗೆಲ್ಲಾ ಕೊರೋನಾ. ಹೀಗಾಗಿ ಮೆಡಿಕಲ್ ಮಾಫಿಯಾ ಇದೆ, ಈ ಬಗ್ಗೆ ಸರ್ಕಾರ ಗಮನಿಸಲಿ ಎಂದು ಅಸಮಾಧಾನ ಹೊರಹಾಕಲಾಗಿದೆ. 

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ