Check Bounce Case:ಎಚ್ಚೆತ್ತ ಜಿಲ್ಲಾಡಳಿತ,ಸುರಪುರ KGB ಬ್ಯಾಂಕ್ ಮ್ಯಾನೇಜರ್ ವಿರುದ್ಧ ಕೇಸ್

Jan 22, 2022, 5:28 PM IST

ಬೆಂಗಳೂರು (ಜ. 22): ಕೋವಿಡ್ ಪರಿಹಾರಕ್ಕೆ (Covid Relief Fund) ನೀಡಿದ್ದ ಚೆಕ್ ಬೌನ್ಸ್ (Check Bounce) ಪ್ರಕರಣಕ್ಕೆ ಸಂಬಂಧಿಸಿದಂತೆ, ಏಷ್ಯಾನೆಟ್ ವರದಿ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಸುರಪುರ KGB ಬ್ಯಾಂಕ್ ಮ್ಯಾನೇಜರ್ ವಿರುದ್ಧ ಕೇಸ್ ದಾಖಲಾಗಿದೆ. 

Covid Relief Cheque: ಸರ್ಕಾರದ ಕೋವಿಡ್ ಪರಿಹಾರ ಚೆಕ್ ಬೌನ್ಸ್, ಅಲೆದು ಸುಸ್ತಾದ ಫಲಾನುಭವಿಗಳು

ಬ್ಯಾಂಕಿನಲ್ಲಿ ತಾಂತ್ರಿಕ ಕಾರಣದಿಂದ ಗೊಂದಲ ಸೃಷ್ಟಿಯಾಗಿದ್ದು, ಒಂದೆರಡು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್‌.ರಾಗಪ್ರಿಯಾ ಸ್ಪಷ್ಟನೆ ನೀಡಿದ್ದಾರೆ. ಈ ಮಧ್ಯೆ, ಜಿಲ್ಲೆಯಲ್ಲಿ ಇದೇ ರೀತಿ ಕೋವಿಡ್‌ ಪರಿಹಾರದ ಚೆಕ್‌ ವಾಪಸಾದ ಇನ್ನಷ್ಟುಪ್ರಕರಣಗಳು ಬೆಳಕಿಗೆ ಬಂದಿದ್ದು, ಅಧಿಕಾರಿಗಳ ಎಡವಟ್ಟು ಕುರಿತು ಆಕ್ರೋಶ ವ್ಯಕ್ತವಾಗಿದೆ.