ಕಾಂಗ್ರೆಸ್​ ಸರ್ಕಾರಕ್ಕೂ ಕಮಿಷನ್ ಕಳಂಕ: ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ

ಕಾಂಗ್ರೆಸ್​ ಸರ್ಕಾರಕ್ಕೂ ಕಮಿಷನ್ ಕಳಂಕ: ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ

Published : Jan 14, 2025, 11:40 AM ISTUpdated : Jan 14, 2025, 11:55 AM IST

ಅನುದಾನ ಬಿಡುಗಡೆಗೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಮತ್ತೊಂದೆಡೆ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ನಿರ್ಣಾಯಕ ಹೋರಾಟಕ್ಕೆ ಮುನ್ನಡಿ ಬರೆದಿದೆ. ಬಾಕಿ ಬಿಲ್​ ಬಿಡುಗಡೆಗಾಗಿ ಪತ್ರ ಸಮರದ ಕಹಳೆ ಮೊಳಗಿಸಿದೆ. ಬಾಕಿ ಬಿಲ್ ಬಗ್ಗೆ ಗಮನಕ್ಕೆ ತಂದರೂ ಕ್ರಮ ಆಗಿಲ್ಲವೆಂದು ಗುತ್ತಿಗೆದಾರರು ಆಕ್ರೋಶ ಹೊರಹಾಕಿದ್ದಾರೆ. 

ಬೆಂಗಳೂರು(ಜ.14): ಬಾಕಿ ಬಿಲ್​​ಗಾಗಿ ಗುತ್ತಿಗೆದಾರರ ಸಂಘ ಪತ್ರ ಸಮರಕ್ಕಿಳಿದಿದೆ. ಹಣ ಬಿಡುಗಡೆಗೆ 7 ದಿನಗಳ ಡೆಡ್​​ಲೈನ್​ ನೀಡಿದೆ. ಇನ್ನು ಕಾಂಗ್ರೆಸ್​ ಸರ್ಕಾರಕ್ಕೂ ಕಮಿಷನ್ ಕಳಂಕ ಅಂಟಿಕೊಂಡಿದೆ. 

ಅನುದಾನ ಬಿಡುಗಡೆಗೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಮತ್ತೊಂದೆಡೆ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ನಿರ್ಣಾಯಕ ಹೋರಾಟಕ್ಕೆ ಮುನ್ನಡಿ ಬರೆದಿದೆ. ಬಾಕಿ ಬಿಲ್​ ಬಿಡುಗಡೆಗಾಗಿ ಪತ್ರ ಸಮರದ ಕಹಳೆ ಮೊಳಗಿಸಿದೆ. ಬಾಕಿ ಬಿಲ್ ಬಗ್ಗೆ ಗಮನಕ್ಕೆ ತಂದರೂ ಕ್ರಮ ಆಗಿಲ್ಲವೆಂದು ಗುತ್ತಿಗೆದಾರರು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರದ ಸಪ್ತ ಸಚಿವರಿಗೆ ಪತ್ರ ಬರೆದಿರೋ ಗುತ್ತಿಗೆದಾರರ ಸಂಘ ಬಿಲ್​ ಬಿಡುಗಡೆಗಾಗಿ 7 ದಿನಗಳ ಡೆಡ್​ಲೈನ್​ ನೀಡಿದೆ. 7 ದಿನದೊಳಗೆ ಸಭೆ ಕರೆದು ನ್ಯಾಯ ಒದಗಿಸಬೇಕು. ಇಲ್ಲವಾದ್ರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತೆ ಅಂತಾ ಎಚ್ಚರಿಸಿದೆ. 

ಮೈ ಝುಂ ಎನ್ನಿಸೋ ಜಾದೂಗಳ ಹಿಂದಿರೋ ಗುಟ್ಟೆಲ್ಲಾ ರಟ್ಟು: ನೀವು ಮಾಡ್ಬೋದು ಸಖತ್ ಮ್ಯಾಜಿಕ್

ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರೋ ಡಿಸಿಎಂ ಡಿಕೆ ಶಿವಕುಮಾರ್​,  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್​ ಖರ್ಗೆ, ವಸತಿ ಸಚಿವ ಜಮೀರ್ ಅಹ್ಮದ್, ಸಣ್ಣ ನೀರಾವರಿ ಸಚಿವ ಎನ್​.ಎಸ್ ಬೋಸರಾಜುಗೆ ಪತ್ರ ಬರೆಯಲಾಗಿದೆ. ಹಾಗೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್​ ಗುಂಡೂರಾವ್​, ಸಮಾಜ ಕಲ್ಯಾಣ ಸಚಿವ ಎಚ್​.ಸಿ ಮಹದೇವಪ್ಪ, ಪೌರಾಡಳಿತ ಸಚಿವ ರಹೀಂ ಖಾನ್​​ಗೂ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ

ಬಾಕಿ ಬಿಲ್​ಗಾಗಿ ಜಟಾಪಟಿಗಿಳಿದಿರೋ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಕಮಿಷನ್​ ಆರೋಪವನ್ನೂ ಮಾಡಿದೆ. 32 ಸಾವಿರ ಕೋಟಿ ಬಾಕಿ ಹಣ ಬರಬೇಕಿದೆ. ಒಡವೆ ಮಾರಾಟ ಮಾಡಿ ಕಾಂಟ್ರಾಕ್ಟ್ ಕೆಲಸ ಮಾಡಿದ್ದೇವೆ. ಹಣ ಬಿಡುಗಡೆಯಾಗದಿದ್ರೆ ನಮ್ಮ ಗತಿಯೇನು? ಗುತ್ತಿಗೆ ನೀಡಲು ಶಾಸಕರು ಶೇ. 15ರಷ್ಟು ಕಮಿಷನ್ ನೇರವಾಗಿ ಕೇಳುತ್ತಿದ್ದಾರೆ ಅಂತಾ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್​ ಗಂಭೀರ ಆರೋಪ ಮಾಡಿದ್ದಾರೆ. 

ಮೈಸೂರಿನ ಫಾರ್ಮ್​ಹೌಸ್​ನಲ್ಲಿ ಸುಗ್ಗಿ ಸಂಭ್ರಮ: ಕಿಚ್ಚು ಹಾಯಿಸಿ ಹೊಸದಾರಿ ಹಿಡಿಲು ದರ್ಶನ್ ಪ್ಲಾನ್

ಗುತ್ತಿಗೆದಾರರ ಬಾಕಿ ಬಿಲ್​ ಪಾವತಿ ವಿಚಾರವಾಗಿ ಕಾಂಗ್ರೆಸ್​-ಬಿಜೆಪಿ ನಾಯಕರ ಮಧ್ಯೆ ವಾಗ್ಯುದ್ಧ ಜೋರಾಗಿದೆ. ಬಿಜೆಪಿ ತನ್ನ ಅವಧಿಯಲ್ಲಿ ಅನುದಾನವಿಲ್ಲದಿದ್ರೂ ಕಾಮಗಾರಿ ಮಾಡಿದೆ. ಸಾಲ ಮಾಡಿ ತುಪ್ಪ ತಿಂದಿದೆ ಅಂತಾ ಸಚಿವ ಪ್ರಿಯಾಂಕ್​ ಖರ್ಗೆ ಚಾಟಿ ಬೀಸಿದ್ರೆ, ಬಿಲ್​ ಬಿಡುಗಡೆಗೆ ಸರ್ಕಾರದ ಬಳಿ ಹಣವೇ ಇಲ್ಲ ಅಂತಾ ಮಾಜಿ ಸಚಿವ ಅಶ್ವತ್ಥ್​ ನಾರಾಯಣ್​ ವ್ಯಂಗ್ಯವಾಡಿದ್ದಾರೆ. 

ಬಾಕಿ ಬಿಲ್ ಬಿಡುಗಡೆ​ ಸರ್ಕಾರ ಹಾಗೂ ಗುತ್ತಿಗೆದಾರರ ನಡುವೆ ನಾ ಕೋಡೆ ನೀ ಬಿಡೆ ಎನ್ನುವಂತಾಗಿದೆ. 32 ಸಾವಿರ ಕೋಟಿ ಬಾಕಿ ಬಿಲ್​ಗಾಗಿ ಗುತ್ತಿಗೆದಾರರು ಲೆಟರ್​ ವಾರ್​ ಆರಂಭಿಸಿದ್ದಾರೆ. ಸಚಿವರ ಸ್ಪಂದಿಸದಿದ್ರೆ ಸಿಎಂಗೆ, ಸಿಎಂ ಸ್ಪಂದಿಸದಿದ್ರೆ ಪ್ರಧಾನಿಗೂ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಸಾಲು ಸಾಲು ಹಗರಣಗಳಿಂದ ಕುಂದಿದ್ದ ಸರ್ಕಾರದ ವರ್ಚಸ್ಸಿಗೆ ಸದ್ಯ ಬಿಲ್ ಬಾಕಿ ಹಾಗೂ ಕಮಿಷನ್ ಆರೋಪ ಮತ್ತಷ್ಟು ಪೆಟ್ಟು ನೀಡಿವೆ. 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!