
ಕಾರ್ಯಕರ್ತರಿಗೆ ಸರ್ಕಾರದ ಸಂಬಳ, ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್, ಗ್ಯಾರಂಟಿಗೆ ದುಡ್ಡಿಲ್ಲ, ಆದರೆ ಅನುಷ್ಠಾನ ಸಮಿತಿಗೆ ಜಾತ್ರೆ, ಸರ್ಕಾರದ ಬುಡಕ್ಕೆ ಬಂತಾ ರನ್ಯಾ ಚಿನ್ನ ಕಳ್ಳಸಾಗಾಣಿಕೆ ಕೇಸ್, ಅನಧಿಕೃತ ಮಸೀದಿ ತೆರೆಯಲು ಹೊರಟ ಸರ್ಕಾರಕ್ಕೆ ಪ್ರತಾಪ್ ಸಿಂಹ್ ಸವಾಲು ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆ ಅನುಷ್ಠಾನಕ್ಕೆ ತಾಲೂಕು, ಜಿಲ್ಲೆ, ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಅಧ್ಯಕ್ಷರು, ಸದಸ್ಯರು ಒಳಗೊಂಡ ಅನುಷ್ಠಾನ ಸಮಿತಿ ಮಾಡಲಾಗಿದೆ. ಇವರ ಸಂಬಳ, ಗೌರವ ಧನ ಸೇರಿದಂತೆ ಒಂದಷ್ಟು ದುಡ್ಡು ಇಲ್ಲೇ ಜಾತ್ರಯಾಗುತ್ತಿದೆ ಎಂದು ವಿಪಕ್ಷ ಗಂಭೀರ ಪ್ರಶ್ನೆ ಎತ್ತಿದೆ.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಶ್ರಮಿಸಿದ್ದಾರೆ. ಹೀಗಾಗಿ ಸರ್ಕಾರ ಹಣ ಪಡೆಯುವ ಹಕ್ಕು ಕಾರ್ಯಕರ್ತರಿಗೆ ಇದೆ ಎಂದು ಡಿಕೆ ಶಿವಕುಮಾರ್ ಸದನದಲ್ಲಿ ಹೇಳಿದ ಮಾತು ಭಾರಿ ವಿವಾದ ಸೃಷ್ಟಿಸಿದೆ.